ಕಾಲಿವುಡ್ ಸೂಪರ್ ಸ್ಟಾರ್ ಧನುಷ್, ಭಾರತೀಯ ಚಿತ್ರರಂಗ ಕಂಡ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇತ್ತೀಚೆಗೆ ಕುಬೇರ ಚಿತ್ರದ ಮೆಗಾ ಸಕ್ಸಸ್ ಪಾರ್ಟಿಯಲ್ಲಿ ಅದ್ಯಾಕೋ ದೊಡ್ಡ ದೊಡ್ಡ ಆ್ಯಕ್ಷನ್ ಸಿನಿಮಾಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಫಿಲ್ಮ್ ಮೇಕರ್ಗಳ ಮೇಲೆಯೂ ಅಸಾಮಾಧಾನ ಹೊರಹಾಕಿದ್ದಾರೆ. ಈ ಕುರಿತ ಡಿಟೈಲ್ಡ್ ಸ್ಟೋರಿ ಇಲ್ಲಿದೆ.
ಕುಬೇರ ಇದೇ ಜೂನ್ 20ರಂದು ತೆರೆಕಂಡ ತೆಲುಗು- ತಮಿಳಿನ ದ್ವಿಭಾಷಾ ಸಿನಿಮಾ. ಶೇಖರ್ ಕಮ್ಮುಲ ನಿರ್ದೇಶನದಲ್ಲಿ ನಾಗಾರ್ಜುನ್, ಧನುಷ್ ಹಾಗೂ ರಶ್ಮಿಕಾ ಮಂದಣ್ಣ ಲೀಡ್ನಲ್ಲಿ ಬಣ್ಣ ಹಚ್ಚಿದ್ದ ಮಲ್ಟಿಸ್ಟಾರ್ ಮೂವಿ. ಅಂದಹಾಗೆ ಈ ಸಿನಿಮಾ ತೆರೆಕಂಡ ದಿನದಿಂದ ಇಲ್ಲಿಯವರೆಗೆ ಒಂದೂ ನೆಗೆಟೀವ್ ರಿವ್ಯೂ ಬಂದಿಲ್ಲ. ಪ್ರೇಕ್ಷಕ ಹಾಗೂ ವಿಮರ್ಶಕರ ಮನಸ್ಸು ಗೆದ್ದಿರೋ ಕುಬೇರ, ಪ್ರತಿಯೊಬ್ಬರ ಮನದಲ್ಲಿ ಕೂಡ ವಿಶೇಷ ಸ್ಥಾನ ಪಡೆಯುತ್ತಿದೆ.
50 ಸಿನಿಮಾಗಳ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಸತ್ಯ ದರ್ಶನ
ಇತ್ತೀಚೆಗೆ ಸಕ್ಸಸ್ ಮೀಟ್ ಕರೆದಿದ್ದ ಚಿತ್ರತಂಡ, ಅದಕ್ಕೆ ಮೆಗಾಸ್ಟಾರ್ ಚಿರಂಜೀವಿಯವರನ್ನ ಆಹ್ವಾನಿಸಿತ್ತು. ಅವರ ಎದುರೇ ನಟ ಧನುಷ್, ಹರ ಹರ ಮಹಾದೇವ್ ಎಂದು, ಇದು ನನ್ನ ಸಿನಿಮಾ ಅಲ್ಲ, ಮಹಾದೇವನ ಸಿನಿಮಾ. ಎಲ್ಲೆಡೆಯಿಂದ ಇಂತಹ ಅಭೂತಪೂರ್ವ ಪ್ರಶಂಸೆಗಳು ಬರ್ತಿರೋದು ನಿಜಕ್ಕೂ ಖುಷಿ ಆಗ್ತಿದೆ ಎಂದರು. ಅಷ್ಟೇ ಅಲ್ಲ, ಭಿಕ್ಷುಕನ ಪಾತ್ರದಲ್ಲಿ ನೋಡುಗರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿರೋ ಧನುಷ್, ಆ ಪಾತ್ರಕ್ಕಾಗಿ ಪರಕಾಯ ಪ್ರವೇಶವೇ ಮಾಡಿದ್ದಾರೆ.
ಅಂದಹಾಗೆ ಅದೇ ವೇದಿಕೆಯಲ್ಲಿ ಆ್ಯಕ್ಷನ್ ಸಿನಿಮಾಗಳು ಹಾಗೂ ಅವುಗಳ ಮೇಕರ್ಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟ ಧನುಷ್. ಹೌದು.. ಇತ್ತೀಚೆಗೆ ಜನ ಥಿಯೇಟರ್ಗೆ ಬರೋರ ಸಂಖ್ಯೆಯಲ್ಲಿ ಗಣನೀಯವಾಗಿ ಕಮ್ಮಿ ಆಗ್ತಿದೆ. ಅದಕ್ಕೆ ಕಾರಣ ಜನರಲ್ಲಿ ಹುಟ್ಟಿಕೊಂಡಿರೋ ಆ ಕಟ್ಟುಕಥೆ. ದೊಡ್ಡ ದೊಡ್ಡ ಆ್ಯಕ್ಷನ್ ಸಿನಿಮಾಗಳೇ ಆಗಬೇಕು. ಅಲ್ಲಿ, ಚಾಪರ್ಗಳು ಹಾರುತ್ತಾ ಇರ್ಬೇಕು. ಬಾಂಬ್ಗಳು ಬ್ಲಾಸ್ಟ್ ಆಗ್ತಿರಬೇಕು. ಎಲ್ಲೆಡೆ ರಕ್ತ. ಅದರಿಂದಲೇ ಜನ ಥಿಯೇಟರ್ಗೆ ಬರ್ತಾರೆ ಅನ್ನೋದು ಆಗಿಬಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಆ್ಯಕ್ಷನ್ ಸಿನಿಮಾ, ಫಿಲ್ಮ್ ಮೇಕರ್ಸ್ ಮೇಲೆ ಅಸಮಾಧಾನ
ಮುಂದುವರೆದು ಮಾತನಾಡುತ್ತಾ, ನೀವು ಒಂದು ಹೋಪ್ ಕೊಟ್ಟಿದ್ದೀರಿ ಶೇಖರ್ ಕಮ್ಮುಲ ಸರ್. ಇದು ಸಾಕಷ್ಟು ಮಂದಿ ಫಿಲ್ಮ್ ಮೇಕರ್ಸ್ಗೆ ಮಾದರಿ ಆಗಲಿದೆ. ಹೃದಯದಿಂದಲೇ ಸಿನಿಮಾವೊಂದು ಥಿಯೇಟರ್ನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣಬಲ್ಲದು ಅನ್ನೋದನ್ನ ತೋರಿಸಿಕೊಟ್ಟಿದ್ದೀರಿ. ಮನುಷ್ಯನ ಭಾವನೆಗಳಿಗಿಂತ ದೊಡ್ಡದಾದದ್ದು ಏನೂ ಇಲ್ಲ. ಈ ತರಹದ ಸಿನಿಮಾಗಳು ಮತ್ತೆ ಮತ್ತೆ ಬರಬೇಕು. ಇದು ಭವಿಷ್ಯದ ಮೇಕರ್ಸ್ಗೆ ದಾರಿದೀಪ ಆಗಲಿವೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.