ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸಿನಿಮಾ ನಟ ನಟಿಯರಿಗೆ ನಟ್ಟು ಬೋಲ್ಟ್ ಸ್ವಲ್ಪ ಟೈಟ್ ಮಾಡಬೇಕಾಗಿದೆ ಎಂಬ ಹೇಳಿಕೆ ಕೊಟ್ಟು ಸಂಚಲನ ಎಬ್ಬಿಸಿದ್ದ ಡಿಕೆ ಶಿವಕುಮಾರ್ ಈಗ ಅದಕ್ಕೆ ವಿರುದ್ಧವಾಗಿ ಬಾಲಿವುಡ್ ಬಿದ್ದು ಹೋಗಿದೆ, ಆದರೆ ಸ್ಯಾಂಡಲ್ವುಡ್ ಮಾತ್ರ ಗಟ್ಟಿಯಾಗಿ ಬೆಳೆದು ನಿಂತಿದೆ ಎಂದು ಹೇಳೋ ಮೂಲಕ ಕನ್ನಡ ಕಲಾವಿದರಿಗೆ ಜೈಕಾರ ಹಾಕಿದ್ದಾರೆ. ಅಂದು ಕನ್ನಡ ಸ್ಟಾರ್ಸ್ ಮೇಲೆ ಕಿಡಿ ಕಾರಿ ಇಂದು ಆದೆ ಸ್ಟಾರ್ಸ್ನ ಭೇಷ್ ಅಂದಿದ್ದಾರೆ ಡಿಕೆ.
ಡಿ.ಕೆ. ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿ ಆದ್ರು ಸಿನಿಮಾ ರಂಗದ ಮೇಲಿನ ಒಲವು ಮತ್ತೊಮ್ಮೆ ಸ್ಪಷ್ಟವಾಗಿದೆ. ರಾಜಕೀಯ ವೇದಿಕೆಯಿಂದ ಹೊರಬಂದು ಸಿನಿಮಾ ವೇದಿಕೆಯಲ್ಲಿ ನಿಂತು, ಸ್ಯಾಂಡಲ್ವುಡ್ನ್ನು ಸಮರ್ಥಿಸುವ ಮೂಲಕ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಪರವಾಗಿ ತಮ್ಮ ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
ಅಂದು ವಾರ್ನಿಂಗ್ ಇಂದು KFI ನ ವಾವ್ ಎಂದ ಡಿಕೆ
ಡಿ.ಕೆ. ಮತ್ತು ಸ್ಯಾಂಡಲ್ವುಡ್–ಹಳೆಯ ನಂಟು
ರಾಜಕೀಯಕ್ಕೆ ಕಾಲಿಡುವ ಮುನ್ನ ಡಿ.ಕೆ. ಶಿವಕುಮಾರ್ ಅವರಿಗೆ ಸಿನಿಮಾ ರಂಗದ ಮೇಲೆ ವಿಶೇಷ ಆಸಕ್ತಿ ಇತ್ತು. ಸಿನಿಮಾ ಎಂದರೆ ಕೇವಲ ಮನರಂಜನೆ ಅಲ್ಲ, ಅದು ಭಾಷೆ, ಸಂಸ್ಕೃತಿ ಮತ್ತು ಜನರ ಭಾವನೆಗಳನ್ನು ತಲುಪುವ ಶಕ್ತಿಶಾಲಿ ಮಾಧ್ಯಮ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.
ತಮ್ಮ ಯಂಗ್ ಏಜ್ ನಲ್ಲಿ ಸಿನಿಮಾರಂಗದ ಬಗ್ಗೆ ಪ್ಯಾಶನ್ ಇದ್ದ ಡಿಕೆ ಕನ್ನಡ ಚಿತ್ರರಂಗ ಬೆಳೆಯಬೇಕು, ಕನ್ನಡ ಕಥೆಗಳು ದೇಶದ ಮಟ್ಟದಲ್ಲಿ ಗುರುತಿಸಬೇಕು ಎಂಬ ಆಶಯವನ್ನು ಹೊಂದಿದ್ದರಂತೆ. ಕನ್ನಡ ಚಿತ್ರರಂಗದ ಬಗ್ಗೆ ಗೌರವ ಮತ್ತು ಅಭಿಮಾನ ಹೊಂದಿದ್ದ ಡಿಕೆ ಶಿವಕುಮಾರ್ ಒಳ್ಳೆಯ ಕಥೆಗಳು ಮತ್ತು ಶ್ರಮದಿಂದ ಮಾಡಿದ ಸಿನಿಮಾಗಳು ಯಾವ ಭಾಷೆಯ ಚಿತ್ರರಂಗವನ್ನಾದರೂ ಮೀರಿಸಬಹುದು ಎಂಬ ನಂಬಿಕೆಯನ್ನು ಆಗಾಗ ವ್ಯಕ್ತಪಡಿಸಿದ್ದರು. ಈ ಆಸಕ್ತಿ ಮತ್ತು ಪ್ಯಾಷನ್, ಇಂದು ರಾಜಕೀಯ ನಾಯಕನಾಗಿ ನಿಂತು, ಸಿನಿಮಾ ಸ್ಟಾರ್ಸ್ ಗೂ ಕನೆಕ್ಟ್ ಆಗಿದ್ದಾರೆ.
ಮೋಹನ್ ಲಾಲ್ ವೃಷಭ ಚಿತ್ರದ ಇವೆಂಟ್ನಲ್ಲಿ ಡಿಕೆ ಟಾಕ್
ಮಲಗಿದ ಬಾಲಿವುಡ್.. ಎದ್ದ ಚಂದನವನಕ್ಕೆ DCM ಜೈಕಾರ
ಇದಕ್ಕೂ ಹಿಂದೆ ಸಿನಿಮಾ ನಟ-ನಟಿಯರ ಕುರಿತು ನಟ್ಟು–ಬೋಲ್ಟ್ ಸ್ವಲ್ಪ ಟೈಟ್ ಮಾಡಬೇಕಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯ ಮಾತ್ರವಲ್ಲ, ಚಿತ್ರರಂಗದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೀಗ ಸಂಪೂರ್ಣ ಭಿನ್ನ ಧಾಟಿಯಲ್ಲಿ ಮಾತನಾಡಿದ್ದಾರೆ.
ಬೆಂಗಳೂರು ನಗರದಲ್ಲಿ ನಡೆದ ಮೋಹನ್ಲಾಲ್, ಸಮರ್ಜಿತ್ ಲಂಕೇಶ್, ರಾಗಿಣಿ ಅಭಿನಯಿಸಿ ನಂದ ಕಿಶೋರ್ ನಿರ್ದೇಶನ ಮಾಡಿರುವ ‘ವೃಷಭ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿರೊ ಡಿಕೆ, ಕನ್ನಡ ಚಿತ್ರರಂಗದ ಸಾಧನೆ ಮತ್ತು ಬೆಳವಣಿಗೆಯನ್ನು ಬಹಿರಂಗವಾಗಿ ಶ್ಲಾಘಿಸಿದ್ದಾರೆ. ಕೆಜಿಎಫ್, ಕಾಂತಾರ ದಂತಹ ಸಿನಿಮಾಗಳು KFI ಘನತೆ ಹೆಚ್ಚಿಸಿದೆ ಹೀಗೆ ನಮ್ಮ ಇಂಡಸ್ಟ್ರಿ ಬೆಳಿಬೇಕು ಎಂದಿದ್ದಾರೆ.
ಯೆಸ್, ವೃಷಭ ಚಿತ್ರದ ಇವೆಂಟ್ ಗೆ ಅತಿಥಿಯಾಗಿ ಬಂದಿದ್ದ ಡಿಕೆ ಬಾಲಿವುಡ್ ಬಿದ್ದು ಹೋಗಿದೆ, ಆದರೆ ಸ್ಯಾಂಡಲ್ವುಡ್ ಬೆಳೆದು ನಿಂತಿದೆ ಎಂದು ಹೇಳಿ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿದ್ದಾರೆ.





