ಮದುವೆ ಮಂಟಪದಲ್ಲೂ ನಿಲ್ಲಲಿಲ್ಲ ‘ಡಿ-ಬಾಸ್’ ಅಭಿಮಾನಿಗಳ ಆರ್ಭಟ. ವೇದಿಕೆ ಮೇಲೆಯೇ ನಗುತ್ತಲೇ ಕ್ಲಾಸ್ ತಗೊಂಡ್ರು ವಿಜಯಲಕ್ಷ್ಮಿ. ಒಂದೆಡೆ ಜೈಲಿನಲ್ಲಿ ದಾಸ, ಇನ್ನೊಂದೆಡೆ ಫ್ಯಾನ್ಸ್ ರಂಪಾಟ… ದರ್ಶನ್ ಲೀಗಲ್ ಟೀಮ್ ಕೊಟ್ಟ ಆ ಬಿಗ್ ಬಾಂಬ್ ಅಪ್ಡೇಟ್ ಏನು..? ಫ್ಯಾನ್ಸ್ ಯಿಂದ ದರ್ಶನ್ ಗೆ ಆಗ್ತಿರೋ ಸಮಸ್ಯೆ ಏನು..?
ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ
ಫ್ಯಾನ್ಸ್ ಕೂಗಾಟಕ್ಕೆ ವಿಜಯಲಕ್ಷ್ಮಿ ಕೊಟ್ರು ಖಡಕ್ ಮೆಸೇಜ್
ಎಲ್ಲಾ ಕಡೆ ತೊಂದರೆ ಆಗ್ತಿದೆ ಫ್ಯಾನ್ಸ್ಗೆ ವಿಜಯಲಕ್ಷ್ಮಿ ಮನವಿ
ಫ್ಯಾನ್ಸ್ ಸೈಲೆಂಟ್ ಆದ್ರೆ ದಾಸ ರಿಲೀಸ್ ಆಗೋದು ಪಕ್ಕಾನಾ?
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಪ್ರಾಣ. ನೆಚ್ಚಿನ ನಟ ಎಲ್ಲೇ ಕಾಣಿಸಲಿ, ‘ಡಿ-ಬಾಸ್.. ಡಿ-ಬಾಸ್’ ಅಂತ ಗಂಟಲು ಹರಿಯುವಂತೆ ಜೈಕಾರ ಕೂಗೋದು ಫ್ಯಾನ್ಸ್ ನಂಬರ್ ಒನ್ ಹ್ಯಾಬಿಟ್. ಆದ್ರೆ, ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಬಾಸ್ ಪರಪ್ಪನ ಅಗ್ರಹಾರ ಸೇರಿರೋ ಈ ಟೈಮ್ನಲ್ಲೂ ಅಭಿಮಾನಿಗಳು ಮಾತ್ರ ತಮ್ಮ ‘ಅತಿಯಾದ ಪ್ರೀತಿ’ ತೋರಿಸೋದನ್ನ ಬಿಟ್ಟಿಲ್ಲ. ಕಂಡ ಕಂಡಲ್ಲಿ ಜೈಕಾರ ಹಾಕಿ ಶೋ ಆಫ್ ಮಾಡೋ ಈ ಕ್ರೇಜ್, ಈಗ ದರ್ಶನ್ ಕುಟುಂಬಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ದರ್ಶನ್ ಕುಟುಂಬದ ಆಪ್ತ ಅಭಿಮಾನಿ ಜೈಕಂಠ ಶೇಖರ್ ಮದುವೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ರು. ನವಜೋಡಿಗೆ ಹಾರೈಸಿ ವೇದಿಕೆ ಮೇಲೆ ಫೋಟೋಗೆ ಪೋಸ್ ಕೊಡ್ತಿರೋವಾಗಲೇ, ಮಂಟಪದಲ್ಲಿದ್ದ ಫ್ಯಾನ್ಸ್ ಪಡೆ “ಡಿ-ಬಾಸ್ಗೆ ಜೈ” ಅಂತ ಹೈ ವೋಲ್ಟೇಜ್ನಲ್ಲಿ ಕಿರುಚೋಕೆ ಸ್ಟಾರ್ಟ್ ಮಾಡಿದ್ರು. ಶುಭಕಾರ್ಯದಲ್ಲಿ ಈ ಕೂಗು ನೋಡಿ ಕೊಂಚ ಮುಜುಗರಕ್ಕೊಳಗಾದ ವಿಜಯಲಕ್ಷ್ಮಿ, ಇದು ಮದುವೆ ಮನೆ, ಎಲ್ಲಾ ಕಡೆಯೂ ನಿಮ್ಮ ಈ ವರ್ತನೆಯಿಂದಲೇ ತೊಂದರೆಯಾಗ್ತಿರೋದು ದಯವಿಟ್ಟು ಇದನ್ನ ನಿಲ್ಲಿಸಿ ಅಂತ ಸ್ಮೈಲ್ ಕೊಡ್ತಾನೇ ಬುದ್ದಿ ಹೇಳಿದ್ದಾರೆ. “ಅತ್ತಿಗೆ ಹೇಳಿರೋದು ಶೇಕಡಾ ನೂರರಷ್ಟು ನಿಜ, ಬಾಸ್ ಹೊರಗೆ ಬರೋವರೆಗೆ ನಾವ್ ಸೈಲೆಂಟ್ ಆಗಿರಬೇಕು” ಅಂತ ಕೆಲವು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.
ನಿಜ ಹೇಳ್ಬೇಕಂದ್ರೆ, ದರ್ಶನ್ ಫ್ಯಾನ್ಸ್ ಮಾಡ್ತಿರೋ ಈ ಎಡವಟ್ಟು ಇದೇ ಮೊದಲೇನೂ ಅಲ್ಲ. ಇತೀಚೆಗಷ್ಟೇ ರಾಮನಗರದ ಕರಗ ಮಹೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮೈಕ್ ಹಿಡಿದು ಭಾಷಣ ಮಾಡೋವಾಗಲೂ ಕೆಲ ಫ್ಯಾನ್ಸ್ ‘ಡಿ-ಬಾಸ್’ ಅಂತ ಕೂಗಿದ್ರು. ಅದಕ್ಕೆ ಸಿಟ್ಟಾದ ಡಿಕೆಶಿ, ನಿಮ್ಮ ಈ ಉಡಾಫೆ ವರ್ತನೆಯಿಂದಲೇ ದರ್ಶನ್ಗೆ ಜೈಲಿನಲ್ಲಿ ಇನ್ನಷ್ಟು ಪ್ರಾಬ್ಲಮ್ ಆಗುತ್ತೆ, ಸುಮ್ಮನಿರಿ ಅಂತ ಪಬ್ಲಿಕ್ನಲ್ಲೇ ವಾರ್ನಿಂಗ್ ಕೊಟ್ಟಿದ್ರು. ಈಗ ಸ್ವತಃ ವಿಜಯಲಕ್ಷ್ಮಿ ಅವರೇ ಅದೇ ಮಾತನ್ನ ರಿಪೀಟ್ ಮಾಡಿರೋದನ್ನ ನೋಡಿದ್ರೆ, ಫ್ಯಾನ್ಸ್ ಪ್ರೀತಿಯೇ ದರ್ಶನ್ ಗೆ ಮುಳ್ಳಾಗ್ತಿದೆ ಅನ್ನೋದು ಹಲವರ ಅಭಿಪ್ರಾಯ
ಇನ್ನೊಂದೆಡೆ, ದರ್ಶನ್ ಬಿಡುಗಡೆಗೆ ಕೌಂಟ್ಡೌನ್ ಸ್ಟಾರ್ಟ್ ಆಯ್ತಾ ಅನ್ನೋ ಪ್ರಶ್ನೆಗೆ ಕೋರ್ಟ್ ಅಂಗಳದಲ್ಲಿ ಉತ್ತರ ಸಿಗ್ತಿದೆ. ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಈಗ ರಾಕೆಟ್ ವೇಗದಲ್ಲಿ ಸಾಗ್ತಿದ್ದು, ಈ ವರ್ಷದೊಳಗೇ ಸಾಕ್ಷಿಗಳ ವಿಚಾರಣೆ ಕಂಪ್ಲೀಟ್ ಮಾಡೋಕೆ ನ್ಯಾಯಾಲಯ ಕಟ್ಟುನಿಟ್ಟಿನ ಆರ್ಡರ್ ಮಾಡಿದೆ. ಪ್ರಮುಖ 60 ಸಾಕ್ಷಿಗಳ ಪೈಕಿ ಈಗಾಗಲೇ 22 ಜನರ ವಿಚಾರಣೆ ಮುಗಿದಿದ್ದು, ದರ್ಶನ್ ಪರ ಘಟಾನುಘಟಿ ವಕೀಲರಾದ ಹಶ್ಮತ್ ಪಾಷಾ ಮತ್ತು ಪಿ. ಪ್ರಸನ್ನಕುಮಾರ್ ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ, ದರ್ಶನ್ ಲೀಗಲ್ ಟೀಮ್ನಲ್ಲಿದ್ದ ವಕೀಲ ಮೊಹಮ್ಮದ್ ಮುಬಾರಕ್ ಮಾಧ್ಯಮಗಳ ಮುಂದೆ ಕೊಟ್ಟಿರೋ ಸ್ಟೇಟ್ಮೆಂಟ್ ಈಗ ಗಾಂಧಿನಗರದಲ್ಲಿ ಬೆಂಕಿ ಹೊತ್ತಿಸಿದೆ. ಶೀಘ್ರದಲ್ಲೇ ದರ್ಶನ್ ಕುಟುಂಬಕ್ಕೆ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಜೊತೆ ಶುಭಸುದ್ದಿ ನೀಡಲಿದ್ದೇವೆ ಅಂತ ಅವರು ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ. ಅಲ್ಲಿಗೆ, ವಿಜಯಲಕ್ಷ್ಮಿ ಅವರ ಕಿವಿಮಾತು ಕೇಳಿ ಫ್ಯಾನ್ಸ್ ಸೈಲೆಂಟ್ ಆದ್ರೆ, ಖಂಡಿತ ದಾಸನ ಎಂಟ್ರಿಗೆ ಡೇಟ್ ಫಿಕ್ಸ್ ಆಗೋ ದಿನ ಹತ್ತಿರದಲ್ಲೇ ಇದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





