ಡಿಬಾಸ್ ದರ್ಶನ್ಗೆ ಬರ್ತ್ ಡೇ ಸಂಭ್ರಮ. ಚಾಲೆಂಜಿಂಗ್ ಸ್ಟಾರ್ ಹೊರಗೆ ಇದ್ದಿದ್ರೆ ಅದ್ರ ಕಥೆ ಬೇರೇನೇ ಇರ್ತಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲಿ ಡೈ ಹಾರ್ಡ್ ಫ್ಯಾನ್ಸ್ ಒಲ್ಲದ ಮನಸ್ಸಿನಿಂದಲೇ ದಚ್ಚು ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾರೆ. ಅದ್ರಲ್ಲೂ ಒಬ್ಬ ಅಭಿಮಾನಿ ಹೋಮ, ಹವನ ಮಾಡಿಸಿ ಶುಭ ಕೋರಿದ್ದಾರೆ. ಇಂಪಾರ್ಟೆಂಟ್ ವಿಷಯ ಏನಪ್ಪಾ ಅಂದ್ರೆ ಜುಲೈಗೆ ದರ್ಶನ್ಗೆ ಬಿಡುಗಡೆ ಭಾಗ್ಯ ದೊರೆಯುತ್ತೆ ಎನ್ನಲಾಗ್ತಿದೆ.
ಡೆವಿಲ್ ಸಿನಿಮಾ ರಿಲೀಸ್ ಆಯ್ತು. ಬ್ಲಾಕ್ ಬಸ್ಟರ್ ಹಿಟ್ ಆಯ್ತು. ನಿರ್ಮಾಪಕರಿಗೆ 80 ಕೋಟಿ ಗಳಿಕೆಯಿಂದ ಲಾಭ ಕೂಡ ಬಂತು. ಆದ್ರೆ ಅದನ್ನ ಸಂಭ್ರಮಿಸೋಕೆ ಸ್ವತಃ ದರ್ಶನ್ ಅವರೇ ಇಲ್ಲ ಅನ್ನೋದು ವಿಪರ್ಯಾಸ. ಮಿಗಿಲಾಗಿ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದೇ ಮೊದಲ ಬಾರಿಗೆ ಬರ್ತ್ ಡೇ ದಿನ ಜೈಲಲ್ಲಿ ಕೂತು ರಿಗ್ರೆಟ್ ಆಗುವಂತಹ ಪರಿಸ್ಥಿತಿ ಅವರಿಗೆ ನಿರ್ಮಾಣ ಆಗಿದೆ.

ಡಿಬಾಸ್ಗಾಗಿ ಹೋಮ, ಹವನ.. ಜುಲೈಗೆ ಬಂದ್ಬಿಡ್ತಾರೆ ಚಿನ್ನಾ
3 ದಿನಗಳ ಕಾಲ ನಿರಂತರ ಪವರ್ಫುಲ್ ಪೂಜೆ, ಪುನಸ್ಕಾರ..!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದಾಸ ದರ್ಶನ್ಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕಳೆದ ವರ್ಷ ಹೊರಗೆ ಇದ್ರೂ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳೋಕೆ ಒಂದಷ್ಟು ತೊಡಕುಗಳಿತ್ತು. ಆದ್ರೀಗ ಜನುಮ ದಿನ ಸಂಭ್ರಮಾಚರಣೆ ಮಾಡೋಕೆ ಅವರೇ ಇಲ್ಲ. ಅಭಿಮಾನಿಗಳು ಒಲ್ಲದ ಮನಸ್ಸಿನಿಂದಲೇ ತಕ್ಕ ಮಟ್ಟಿಗೆ ಸೆಲೆಬ್ರೇಟ್ ಮಾಡ್ತಿದ್ದಾರೆ. ಒಂದ್ಕಡೆ ಕರಿಯ ರೀ ರಿಲೀಸ್ ಆಗಿದೆ. ಮತ್ತೊಂದೆಡೆ ಡೈ ಹಾರ್ಡ್ ಅಭಿಮಾನಿಯೊಬ್ಬ ದಾಸನಿಗಾಗಿ ಹೋಮ, ಹವನ ಮಾಡಿಸ್ತಿದ್ದಾರೆ.
ಜೆ. ಪಿ. ನಗರದ ಪುಟ್ಟೇನಹಳ್ಳಿ ಸರ್ಕಲ್ ಬಳಿ ನಂಜುಂಡೇಶ್ವರ ದೇವಸ್ಥಾನದಲ್ಲಿ ದರ್ಶನ್ಗಾಗಿ ಅವ್ರ ಕಟ್ಟಾಭಿಮಾನಿ ಸುಪ್ರೀತ್ ಗಾಂಧಾರ ವಿಶೇಷವಾದಂತಹ ಪೂಜೆ, ಪುನಸ್ಕಾರ ಮಾಡಿಸಿದ್ದಾರೆ. ದರ್ಶನ್ ಭಾವಚಿತ್ರ ಹಿಡಿದೇ ಪವರ್ಫುಲ್ ಹೋಮ, ಹವನ ಮಾಡಿಸಿದ್ದಾರೆ. ಅವರು ಬೇಗ ರಿಲೀಸ್ ಆಗಲಿ. ಯಾರ ಕೆಟ್ಟ ದೃಷ್ಠಿಯೂ ಅವರಿಗೆ ತಾಕದೆ ಇರಲಿ ಅಂತ ಸತತ ಮೂರು ದಿನಗಳ ಕಾಲ ನಿರಂತರ ಹೋಮ ಮಾಡಿಸಿರೋದು ಇಂಟರೆಸ್ಟಿಂಗ್.

ದಾಸನ ಭಾವಚಿತ್ರ ಹಿಡಿದೇ ರುದ್ರ ಹೋಮ, ಮೃತ್ಯುಂಜಯ
ನವಗ್ರಹ ಹೋಮ, ಗಣಪತಿ ಹೋಮ, ದುರ್ಗಾ ಹೋಮ..!
ರುದ್ರ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ನವಗ್ರಹ ಹೋಮ, ಗಣಪತಿ ಹೋಮ, ನವಗ್ರಹ ಶಕ್ತಿ ಹೋಮ.. ಹೀಗೆ ಸಾಕಷ್ಟು ಹೋಮಗಳನ್ನ ಮಾಡಿಸಿದ್ದಾರೆ ಸುಪ್ರೀತ್. ಅದಕ್ಕೆ ಅವರ ತಾಯಿ ಕೂಡ ಸಾಥ್ ನೀಡಿರೋದು ಮತ್ತೊಂದು ವಿಶೇಷ. ಅಂದಹಾಗೆ ಸುಪ್ರೀತ್ ಗಾಯಕರಾಗಿದ್ದು, ಪ್ರತೀ ವರ್ಷ ತಾವೇ ಕಂಪೋಸ್ ಮಾಡಿದ ಆಲ್ಬಮ್ ಹಾಡೊಂದನ್ನ ದರ್ಶನ್ ಬರ್ತ್ ಡೇಗೆ ಗಿಫ್ಟ್ ಆಗಿ ನೀಡ್ತಿದ್ರು. ಆದ್ರೆ ಈ ಬಾರಿ ಹಾಡಿಗಿಂತ ಹೋಮ ಮುಖ್ಯ ಅನಿಸಿ ಈ ಕಾರ್ಯ ಮಾಡಿದ್ದಾರೆ. ಇದು ನಿಜವಾದ ಅಭಿಮಾನಿಗಳ ಅಭಿಮಾನದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.
ಇನ್ನೂ ಮೂಲಗಳ ಪ್ರಕಾರ ದರ್ಶನ್ ಕೋರ್ಟ್ ಟ್ರಯಲ್ಸ್ ನಡೆಯುತ್ತಿದ್ದು, ಜುಲೈನಲ್ಲಿ ಪ್ರಾಪರ್ ಬೇಲ್ ಪಡೆದು ಹೊರಗೆ ಬರ್ತಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಅವರ ತಾಯಿ ಉಲ್ಟಾ ಹೇಳಿಕೆ ದರ್ಶನ್ ಕೇಸ್ ಸಡಿಲಗೊಳ್ಳೋಕೆ ದಾರಿ ಯಾಗಿದ್ದು, ಅವರಿಗೆ ಅದು ಪ್ಲಸ್ ಆಗ್ತಿದೆ ಎನ್ನಲಾಗ್ತಿದೆ. ಆದ್ರೆ ಕೇಸ್ ಪರ, ವಿರೋಧದ ಚರ್ಚೆಗಳಲ್ಲಿ ಇನ್ನೂ ಯಾವೆಲ್ಲಾ ತಿರುವುಗಳನ್ನ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಅದೇನೇ ಇರಲಿ ದಾಸನಿಗೆ ಬೇಗ ಬಿಡುಗಡೆ ಭಾಗ್ಯ ಸಿಗಲಿ. ಹ್ಯಾಪಿ ಹುಟ್ದಬ್ಬ ಚಾಲೆಂಜಿಂಗ್ ಸ್ಟಾರ್.





