ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿ ನಟ ದರ್ಶನ್ಗೆ ಇಂದು ತುಂಬಾ ನಿರ್ಣಾಯಕ ದಿನ. ಸುಪ್ರೀಂ ಕೋರ್ಟ್ನಲ್ಲಿ ಅವರು ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ದ್ವಿಸದಸ್ಯ ಪೀಠದಲ್ಲಿ ನಡೆಯುವ ಈ ವಿಚಾರಣೆಯಲ್ಲಿ ದರ್ಶನ್ಗೆ ಜಾಮೀನು ಸಿಗುವುದೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜೈಲು ಸೇರಿ 8 ತಿಂಗಳುಗಳು ಕಳೆದಿದ್ದರೂ, ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವುದನ್ನು ಕಾರಣವಾಗಿಟ್ಟುಕೊಂಡು ದರ್ಶನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
273 ಸಾಕ್ಷಿಗಳ ಪೈಕಿ ಕೇವಲ 10 ಮಂದಿಯ ವಿಚಾರಣೆಯೂ ಮುಗಿದಿಲ್ಲ ಎಂದು ದರ್ಶನ್ ಪರ ವಕೀಲರು ವಾದಿಸುತ್ತಿದ್ದಾರೆ. ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ದರ್ಶನ್ ಪರ ವಾದ ಮಂಡಿಸಲಿದ್ದಾರೆ. ಜೈಲಿನಲ್ಲಿ ಇತರ ಖೈದಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದು ದರ್ಶನ್ ಹೇಳಿದ್ದಾರೆ.
ಪ್ರಕರಣದ ವಿಚಾರಣೆಯ ಪ್ರಗತಿ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ರಿಪೋರ್ಟ್ ಕೇಳಿತ್ತು. ಪೊಲೀಸರು ಅಫಿಡವಿಟ್ ಸಲ್ಲಿಸಿ, ವಿಚಾರಣೆಯ ಪ್ರಗತಿ ಮತ್ತು ದರ್ಶನ್ನ ಆರೋಪಗಳ ಸತ್ಯಾಸತ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ವರದಿಗಳ ಮೇಲೆ ಇಂದು ವಿಚಾರಣೆ ನಡೆಯಲಿದೆ.
ದರ್ಶನ್ ಈಗಾಗಲೇ ತನ್ನ ವಕೀಲರ ಜೊತೆ ವಿವರವಾಗಿ ಚರ್ಚೆ ನಡೆಸಿದ್ದಾರೆ. ಮಧ್ಯಂತರ ಜಾಮೀನು ಸಿಕ್ಕರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣವು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಮಾರ್ಪಟ್ಟಿದ್ದು, ನಟ ದರ್ಶನ್ನ ಜಾಮೀನು ಅರ್ಜಿ ವಿಚಾರಣೆಯತ್ತ ರಾಜ್ಯದಾದ್ಯಂತ ಕಣ್ಣುಗಳು ನೆಟ್ಟಿವೆ.
ಸುಪ್ರೀಂ ಕೋರ್ಟ್ ಇಂದು ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಎಲ್ಲರೂ ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪವಿತ್ರಾ ಗೌಡಗೆ ಕಳುಹಿಸಿಕೊಟ್ಟ ಕೆಟ್ಟ ಕಾಮೆಂಟ್ನಿಂದ ಸತತ 8 ತಿಂಗಳ ಜೈಲು ವಾಸ ಫಜೀತಿಯನ್ನು ದರ್ಶನ್ ತಂದುಕೊಂಡರು. ಅವತ್ತು ಆ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದರೆ ಮುಗಿದೇ ಹೋಗುತ್ತಿತ್ತು ಆದರೆ ಅಂದು ಮಾಡಿಕೊಂಡ ಒಂದು ಅಚಾತುರ್ಯ ಇಂದಿನ ದರ್ಶನ್ ಪರಿಸ್ಥಿತಿಗೆ ಕಾರಣವಾಗಿದೆ..
ಐಶಾರಾಮಿ ಬದುಕು ಬದುಕಿದ ದರ್ಶನ್ ಜೈಲಿನಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ದಿನೇ ದಿನೇ ನರಳುತ್ತಿದ್ದಾರೆ. ಅಂದರೆ ಸರಿಯಾದ ಊಟ ಮಲಗಲು ಬೆಡ್ ವ್ಯವಸ್ಥೆ ಹೀಗೆ ಇತ್ಯಾದಿಗಳಿಲ್ಲದೆ ಕೊರಗುತ್ತಿದ್ದಾರೆ ಜೊತೆಗೆ ಖೈದಿಗಳ ಕಾಟ ಸಹ ಜಾಸ್ತಿ ಇದ್ಯಂತೆ ಜೈಲಿನಲ್ಲಿ ಇದಷ್ಟೇ ಅಲ್ಲದೆ ಸೆಷನ್ಸ್ ಕೋರ್ಟ್ ಸಾಕ್ಷಿಗಳ ವಿಚಾರಣೆಗೂ ಸಹ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂಬ ಕಾರಣಗಳನ್ನು ನೀಡಿ ಇಂದು ನಟ ದರ್ಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಇಂದು ಸುಪ್ರೀಂ ಅಂಗಳದಲ್ಲಿ ಯಾವೆಲ್ಲಾ ತೀರ್ಮಾನಗಳು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.




