ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಜೈಲಿನಲ್ಲಿ ಇದ್ದರೂ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಯುಗಾದಿ ಹಬ್ಬ ಬಂದ್ರೆ ಎಲ್ಲರ ಮನೆಯಲ್ಲಿ ಸಂಭ್ರಮ ಆದರೆ ದಚ್ಚು ಫ್ಯಾನ್ಸ್ ಹೃದಯದಲ್ಲಿ ಒಂದು ಖಾಲಿತನ. “ನಮ್ಮ ದಾಸ ಯಾವಾಗ ರಿಲೀಸ್ ಆಗ್ತಾರೆ?” ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ. ಆದ್ರೂ ಫ್ಯಾನ್ಸ್ ಸುಮ್ಮನೆ ಕುಳಿತುಕೊಳ್ಳೋ ಟೈಪ್ ಅಲ್ಲ ಹೀರೋ ಇಲ್ಲದಿದ್ದರೂ, ಅವರ ನೆನಪನ್ನು ಹಬ್ಬವಾಗಿಸೋ ದೊಡ್ಡ ಸಿದ್ಧತೆ ಶುರುವಾಗಿದೆ. ಎಸ್, 15ವರ್ಷಗಳ ಹಿಂದೆ ನಡೆದ ಘಟನೆ ಮತ್ತೆ ನೆನಪು ಆಗ್ತಿದೆ, ಅಂದು ಸಾರಥಿ ಬಿಡುಗಡೆ ಆಗದ ದರ್ಶನ್ ರಿಲೀಸ್ ಆಗಿದ್ರು ಇದೀಗ ಸಿನಿಮಾ ಮತ್ತೆ ರೀ ರಿಲೀಸ್ ಆಗ್ತಿದೆ ಈ ಬಾರಿ ದರ್ಶನ್ ರಿಲೀಸ್ ಆಗ್ತಾರಾ..? ಹೇಳ್ತಿವಿ ಈ ಸ್ಟೋರಿ ನೋಡಿ.
- ದಚ್ಚು ಜೈಲಲ್ಲಿದ್ದಾಗ ‘ಸಾರಥಿ’.. ಮತ್ತೀಗ ಜೈಲಲ್ಲಿದ್ದಾಗ್ಲೇ ರೀ-ರಿಲೀಸ್
- ಜೈಲಲ್ಲಿದ್ದರೂ ದರ್ಶನ್ ಕ್ರೇಜ್ ಅನ್ಸ್ಟಾಪ್ಪಬಲ್, ಫ್ಯಾನ್ಸ್ ಫೆಸ್ಟಿವಲ್
- ಸಾರಥಿಗೆ ಥಿಯೇಟರ್ನಲ್ಲಿ ಆರತಿ…ರೀ ರಿಲೀಸ್ ಯಾವಾಗ..?
- ಮತ್ತೆ ರಿಪೀಟ್ ಆಗುತ್ತಾ ಸಾರಥಿ ಡೇಸ್..ಏಪ್ರಿಲ್ ನಲ್ಲಿ ದರ್ಶನ್ ರಿಲೀಸ್..?
ದರ್ಶನ್ ಜೈಲು ಸೇರಿದ್ಮೇಲೆ ಫ್ಯಾನ್ಸ್ ಸ್ವಲ್ಪ ಸೈಲೆಂಟ್ ಆಗಿದ್ದರೂ ಅವರ ಪ್ರೀತಿ, ಅವರ ಕ್ರೇಜ್ ಒಂದು ಇಂಚೂ ಕಡಿಮೆಯಾಗಿಲ್ಲ. ಕೇಸ್ ಇನ್ನೂ ಟ್ರಯಲ್ ಹಂತದಲ್ಲಿದ್ದು ಯಾವಾಗ ಹೊರಬರುತ್ತಾರೆ ಅನ್ನೋದು ಅವರ ಫ್ಯಾನ್ಸ್ ಪ್ರಶ್ನೆ..? ಆದರೆ ಈ ಅನಿಶ್ಚಿತತೆಯ ನಡುವೆ ಫ್ಯಾನ್ಸ್ ಮನಸ್ಸಿನಲ್ಲಿ ಒಂದೇ ಮಾತು “ದಾಸ ಇದ್ದರೂ ಹಬ್ಬ, ಇಲ್ಲದಿದ್ದರೂ ಹಬ್ಬ” ಹೀಗಾಗಿ ದಾಸನ ಫ್ಯಾನ್ಸ್ ಗೆ ಕಿಕ್ ಕೊಡಲು ನಿರ್ಮಾಪಕ ಸತ್ಯ ಪ್ರಕಾಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದರ್ಶನ್ ಕರಿಯರ್ನ ಮೈಲುಗಲ್ಲು, ಫ್ಯಾನ್ಸ್ ಹೃದಯದಲ್ಲಿ ಸ್ಪೆಷಲ್ ಸ್ಥಾನ ಪಡೆದ ‘ಸಾರಥಿ’ ಸಿನಿಮಾ ಮತ್ತೆ ಮರು ಬಿಡುಗಡೆ ಆಗೋಕೆ ಸಜ್ಜಾಗಿದೆ. 15ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸಾರಥಿ ಸಿನಿಮಾದ ಡೈಲಾಗ್ಸ್.. ಸೀನ್ಸ್.. ಹಾಡುಗಳು ಅಬ್ಬಬ್ಬಾ ಇಂದಿಗೂ ಹಾಟ್ ಫೇವರಿಟ್. ಇದೀಗ ಇದೆ ಸಿನಿಮಾ ರೀ ರಿಲೀಸ್ ಆಗ್ತಿದೆ ಅನ್ನೋ ಸುದ್ದಿ ಕೇಳಿರೋ ಫ್ಯಾನ್ಸ್ ಈಗಲೇ ಕಟ್ಔಟ್, ಬ್ಯಾನರ್, ಹಾಲು ಅಭಿಷೇಕ, ಫಸ್ಟ್ ಡೇ ಫಸ್ಟ್ ಶೋ ಪ್ಲಾನ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಇದು ಕೇವಲ ಸಿನಿಮಾ ರೀ-ರಿಲೀಸ್ ಅಲ್ಲ… ಇದು ದಾಸನ ಮೇಲಿನ ಅಭಿಮಾನ, ಪ್ರೀತಿ ಮತ್ತು ಭಾವನೆಯ ದೊಡ್ಡ ಎಕ್ಸ್ಪ್ರೆಷನ್.
ದಿನಕರ್ ತೂಗುದೀಪ ಡೈರೆಕ್ಷನ್.. ಸತ್ಯ ಪ್ರಕಾಶ್ ನಿರ್ಮಾಣದ ಸಾರಥಿ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಬೆಂಚ್ ಮಾರ್ಕ್ ಆಗಿ ಉಳಿದುಕೊಂಡಿದೆ. 15 ವರ್ಷಗಳ ಹಿಂದಿನ ಅದೇ ಸನ್ನಿವೇಶ ಮತ್ತೆ ರಿಪೀಟ್ ಆಗ್ತಿದೆ ಅನ್ನೋದು ಇಂಟೆರೆಸ್ಟಿಂಗ್. ಎಸ್, 2011 ಸೆಪ್ಟೆಂಬರ್ 30ರಂದು ‘ಸಾರಥಿ’ ರಿಲೀಸ್ ಆದಾಗಲೂ ದರ್ಶನ್ ಜೈಲಲ್ಲೇ ಇದ್ದರು. ಆದ್ರೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಆಗಿ, ಶತದಿನೋತ್ಸವ ಆಚರಿಸಿತ್ತು. ಆಟೋ ಡ್ರೈವರ್ ಪಾತ್ರದಲ್ಲಿ ದರ್ಶನ್ ಮಿಂಚಿದ ಈ ಸಿನಿಮಾ… ಆ ಕಾಲದ ಸೆನ್ಸೇಶನ್ ಆಗಿತ್ತು. ಈಗಲೂ ಅದೇ ಎಮೋಶನ್, ಅದೇ ಸನ್ನಿವೇಶ… ಹೀಗಾಗಿ ಫ್ಯಾನ್ಸ್ಗೆ ಇದು ಕೇವಲ ಸಿನಿಮಾ ಅಲ್ಲ, ಮರೆಯಲಾಗದ ನೆನಪು.
7-8 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ‘ಸಾರಥಿ’ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿ 2011ರಲ್ಲಿ ದೊಡ್ಡ ದಾಖಲೆ ಬರೆದಿತ್ತು. ಈಗ ನಿರ್ಮಾಪಕ ಕೆ.ವಿ ಸತ್ಯ ಪ್ರಕಾಶ್ ಈ ಸಿನಿಮಾವನ್ನ ಮರು ಬಿಡುಗಡೆಗೆ ಸಜ್ಜು ಮಾಡಿದ್ದಾರೆ. ಏಪ್ರಿಲ್ ನಲ್ಲಿ ಸಾರಥಿ ರೀ ರಿಲೀಸ್ ಆಗೋದು ಪಕ್ಕಾ ಎಂದಿದ್ದಾರೆ ಸತ್ಯ ಪ್ರಕಾಶ್. ಈಗಾಗಲೇ ‘ಕರಿಯಾ’, ‘ಶಾಸ್ತ್ರಿ’, ‘ನಮ್ಮ ಪ್ರೀತಿಯ ರಾಮು’ ಸಿನಿಮಾಗಳು ರೀ-ರಿಲೀಸ್ ಆಗಿ ಫ್ಯಾನ್ಸ್ಗೆ ದಾಸನ ನೆನಪುಗಳನ್ನು ಮರಳಿ ತಂದಿವೆ. ‘ಡೆವಿಲ್’ ಕೂಡ ಇದೇ ಹಾದಿಯಲ್ಲಿ ಬಂದಿದೆ. ಆದರೆ ಈಗ ‘ಸಾರಥಿ’ ಆ ಎಲ್ಲಾ ರೀ-ರಿಲೀಸ್ ದಾಖಲೆಗಳನ್ನು ಮೀರಿಸ್ತಾ ಅನ್ನೋ ಕುತೂಹಲ ಪೀಕ್ಗೆ ಏರಿದೆ.
ಒಟ್ಟಿನಲ್ಲಿ ದರ್ಶನ್ ಜೈಲಿನಲ್ಲಿದ್ದರೂ ಫ್ಯಾನ್ಸ್ ಹೃದಯದಲ್ಲಿ ಅವರ ಸ್ಥಾನ ಅಚಲ. ಥಿಯೇಟರ್ಗಳಲ್ಲಿ ಮತ್ತೆ ಕೂಗೋ ಸ್ಲೋಗನ್ ಒಂದೇ — ನಮ್ಮ ಬಾಸು ಯಾರು ಚಾಲೆಂಜಿಂಗ್ ಸ್ಟಾರು . ಸಾರಥಿ ಮರು ಬಿಡುಗಡೆ ಏಪ್ರಿಲ್ ನಲ್ಲಿ ಫ್ಯಾನ್ಸ್ಗೆ ಭರ್ಜರಿ ಹಬ್ಬ ಆಗೋದು ಗ್ಯಾರಂಟಿ. ದಾಸ ಇಲ್ಲದ ಖಾಲಿತನವನ್ನು ದಾಸನ ಸಿನಿಮಾಗಳೇ ತುಂಬಿಸುತ್ತಿವೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





