ಚಂದು.. ನಟ ದರ್ಶನ್ ಅವರ ಅಕ್ಕನ ಮಗ. ಚಂದು ಅನ್ನೋ ಈತ ಕಾಟೇರ ಚಿತ್ರದ ಪ್ರಮುಖ ಪಾತ್ರವೊಂದನ್ನ ಪೋಷಿಸಿದ್ದರು. ತೂಗುದೀಪ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತು ಅಂತ ಡಿಬಾಸ್ ಸೆಲೆಬ್ರಿಟೀಸ್ ಜೊತೆ ಇಡೀ ಚಿತ್ರರಂಗ ಖುಷಿ ಪಟ್ಟಿತ್ತು. ಆದ್ರೀಗ ಅದೇ ದರ್ಶನ್ ಸೆಲೆಬ್ರಿಟಿಗಳು ಮಾಡಿದ ಒಂದೇ ಒಂದು ಎಡವಟ್ಟಿಗೆ ಆತನ ಕರಿಯರ್ ನಾಶವಾಗೋ ಸ್ತೀತಿ ತಲುಪಿದೆ. ಅರೇ.. ಹಾಗ್ಯಾಕಾಯ್ತು..? ಈ ಬಗ್ಗೆ ದರ್ಶನ್ ತನ್ನ ಸೋದರಳಿಯ ಮೇಲೆ ನಡೆಸಿರೋ ಶಿಸ್ತುಕ್ರಮ ಎಂಥದ್ದು ಅಂತೀರಾ..? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರೋ ಡಿ ಡೈಮಂಡ್ಸ್ ಫ್ಯಾನ್ಸ್ ಅಸೋಸಿಯೇಷನ್ ತಂಡದಿಂದ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆದಿದೆ. ಅಲ್ಲದೆ, ಕಾಟೇರ 50ನೇ ದಿನದ ಸಂಭ್ರಮ ಕೂಡ ಅದರೊಟ್ಟಿಗೆ ಆಚರಿಸಲಾಗಿದೆ. ಅಂದು ದವಸ, ಧಾನ್ಯಗಳನ್ನ ನೀಡೋದ್ರ ಜೊತೆಗೆ ಅನ್ನದಾನ ಮಾಡಿ, ಅರ್ಥಪೂರ್ಣವಾಗಿ ಆ ಸಂಭ್ರಮವನ್ನು ಆರೈಕೆ ಆಶ್ರಮದಲ್ಲಿ ಆಚರಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಕಾಟೇರ ಚಿತ್ರದ ಪಾತ್ರಧಾರಿಯೂ ಆಗಿರೋ ನಟ ದರ್ಶನ್ ಅಕ್ಕನ ಮಗ ಚಂದು ಮುಖ್ಯ ಅತಿಥಿಯಾಗಿ ಹೋಗಿದ್ದರು. ಆ ವಿಡಿಯೋ ಇದೀಗ ದರ್ಶನ್ ಕಣ್ಣಿಗೆ ಬಿದ್ದಿದೆ.
ದರ್ಶನ್ ಅದನ್ನ ನೋಡುತ್ತಿದ್ದಂತೆ ಕೆಂಡಾಮಂಡಲವಾಗಿದ್ದಾರೆ. ಚಂದು ಮೇಲೆ ಇನ್ನಿಲ್ಲದ ಕೋಪ ಬಂದಿದೆ. ಅಷ್ಟೇ ಅಲ್ಲ, ತನ್ನ ಸೆಲೆಬ್ರಿಟೀಸ್ ಮೇಲೆಯೂ ಕಿಡಿಕಾರಿದ್ದಾರೆ. ಅರೇ.. ಅಂಥದ್ದೇನಾಯ್ತು..? ಆ ವಿಡಿಯೋದಲ್ಲಿ ಅಂಥದ್ದೇನಿದೆ ಅಂತೀರಾ..? ಖಂಡಿತ ಇದೆ. ದರ್ಶನ್ ಫ್ಯಾನ್ಸ್ ಚಂದು ಕಾಲಿಗೆ ಬೀಳುವ ದೃಶ್ಯವಿದೆ. ಅದೇ ನಟ ದರ್ಶನ್ ಕೋಪಕ್ಕೂ ಕಾರಣವಾಗಿದೆ. ಕೂಡಲೇ ದರ್ಶನ್ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮನದ ಮಾತನ್ನ ನೆಚ್ಚಿನ ಅಭಿಮಾನಿಗಳಿಗೆ ತಿಳಿಸಿಬಿಟ್ಟಿದ್ದಾರೆ.
‘ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ.. ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದ್ರೆ, ಈ ವಿಡಿಯೋದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನೂ ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ, ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.
ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ. ಚಂದು ಅಥವಾ ನನ್ನ ಮಗ ವಿನೀಶ್ ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ, ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದ್ರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ. ನೀವು ಹೀಗೆ ಮಾಡಿವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ’- ಎಂದು ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಆಗಿ ಪೋಸ್ಟ್ ಹಾಕಿದ್ದಾರೆ ನಟ ದರ್ಶನ್.
ಅಯ್ಯೋ ಪಾಪ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅಂದಂತೆ.. ಚಂದು ಮಾಡದ ತಪ್ಪಿಗೆ ಚಂದುಗೆ ಏಕೆ ಶಿಕ್ಷೆ ಅಲ್ಲವೇ..? ಪಾಪ ಚಂದು ಏನಾದ್ರು ಕಾಲಿಗೆ ಬೀಳಿ ಅಂತ ಫ್ಯಾನ್ಸ್ ಗೆ ಹೇಳಿದ್ರಾ..? ಇಲ್ವಲ್ಲಾ..? ಆದ್ರೂ ದರ್ಶನ್ ಅವರು ಯಾಕೆ ಈ ರೀತಿಯ ಕಠಿಣ ನಿರ್ಧಾರ ಕೈಗೊಂಡ್ರು ಅನ್ನೋದೆ ಪ್ರಶ್ನೆ. ಅವೆಲ್ಲದೆ ಹೊರತಾಗಿ ನೋಡೋದಾದ್ರೆ ದರ್ಶನ್ ಅವರ ಕೋಪಕ್ಕೂ ಕಾರಣವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿನಂತೆ, ಚಂದು ಅಥ್ವಾ ವಿನೀಶ್ ರನ್ನ ಗಿಡವಾಗಿದ್ದಾಗಲೇ ಬಗ್ಗಿಸಬೇಕು ಅನ್ನೋದು ಅವರ ಉದ್ದೇಶವಾಗಿದೆ.
ಅದೇ ಕಾರಣಕ್ಕೆ ಫ್ಯಾನ್ಸ್ ಗೂ ಡೈರೆಕ್ಟ್ ಆಗಿ ಹೇಳೋದ್ರ ಮೂಲಕ, ಚಂದು ಮೇಲೆ ಶಿಸ್ತುಕ್ರಮ ಜರುಗಿಸಿದ್ದಾರೆ. ಶಿಸ್ತು ಫಸ್ಟ್.. ಸಿನಿಮಾ ನೆಕ್ಸ್ಟ್ ಎಂದಿದ್ದಾರೆ. ಇದನ್ನ ನೋಡ್ತಿದ್ರೆ ಡೆವಿಲ್ ಹೇಗೋ ಹೋಯ್ತು, ಅಟ್ಲೀಸ್ಟ್ ದಿನಕರ್ ತೂಗುದೀಪ ಅವರು ಚಂದುನ ಲಾಂಚ್ ಮಾಡೋಕೆ ಸಜ್ಜಾಗ್ತಿದ್ದ ಸಿನಿಮಾ ಏನಾಗುತ್ತೋ ಅನಿಸ್ತಿದೆ. ಒಟ್ಟಾರೆ ದರ್ಶನ್ ಅವರ ಈ ನಿರ್ಧಾರಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಭೇಷ್ ಸರ್, ನಿಮ್ಮ ನಡೆ ಸೂಪರ್ಬ್ ಅಂತಿದ್ದಾರೆ.