ಆಮೀರ್ ಖಾನ್.. 61ರ ಹರೆಯದಲ್ಲಿ ಇಬ್ಬರು ಮಾಜಿ ಹೆಂಡ್ತಿಯರ ಸಮ್ಮುಖದಲ್ಲೇ 3ನೇ ಮದ್ವೆಯಾದ ಮಹಾನುಭಾವ. ಕುವೆಂಪು ಮಂತ್ರ ಮಾಂಗಲ್ಯದ ರೀತಿ ತುಂಬಾ ಸರಳ ಹಾಗೂ ವಿರಳ ಕಲ್ಯಾಣಕ್ಕೆ ಸಾಕ್ಷಿಯಾದ ಮಿಸ್ಟರ್ ಪರ್ಫೆಕ್ಷನಿಸ್ಟ್ ಗಳಿಸಿರೋದು ಬರೋಬ್ಬರಿ 1800 ಕೋಟಿಗೂ ಅಧಿಕ. ಮೂವರು ಪತ್ನಿಯರ ಇನಿಯ, ಸಾವಿರಾರು ಕೋಟಿ ಒಡೆಯನ ಲೆಗಸಿ ಕುರಿತ ಕಲರ್ಫುಲ್ ಕಹಾನಿ ಇಲ್ಲಿದೆ.
- 3 ಹೆಂಡ್ತಿಯರ ಇನಿಯ.. 1800 ಕೋಟಿ ಒಡೆಯ ಆಮೀರ್
- ಮಾಜಿ ಪತ್ನಿಯರು, ಮಕ್ಕಳ ಸಮ್ಮುಖದಲ್ಲೇ 3ನೇ ಮದುವೆ..!
- ಆಮೀರ್ ಗಳಿಸಿದ್ದು ಬರೀ ಆಸ್ತಿಯಲ್ಲ, ಪ್ರೀತಿ & ಪರಂಪರೆ..!!
- ಈ ಮಿಸ್ಟರ್ ಪರ್ಫೆಕ್ಷನಿಸ್ಟ್ ಕಲಿಯುಗದ ಶ್ರೀಕೃಷ್ಣ ಪರಮಾತ್ಮ
ಪದ್ಮ ಭೂಷಣ, ಪದ್ಮ ಶ್ರೀ ಹಾಗೂ ಒಂದಲ್ಲ ಎರಡಲ್ಲ ನಾಲ್ಕು ನ್ಯಾಷನಲ್ ಅವಾರ್ಡ್ಗಳನ್ನ ಮುಡಿಗೇರಿಸಿಕೊಂಡಿರೋ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್, 3ನೇ ಮದುವೆ ಆಗೋ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಯೆಸ್.. 61ರ ಹರೆಯದಲ್ಲಿ ವಿಚ್ಚೇದಿತ ಹಾಗೂ ಮಗು ಹೊಂದಿರೋ ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಕೈ ಹಿಡಿಯೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಗಂಡ-ಹೆಂಡತಿಯ ಕೌಟುಂಬಿಕ ಕಲಹಗಳು ಇತ್ತೀಚೆಗೆ ಸಿಕ್ಕಾಪಟ್ಟೆ ಆಗಿಬಿಟ್ಟಿವೆ. ಅದ್ರಲ್ಲೂ ಸಣ್ಣ ಪುಟ್ಟ ವಿಷಯಗಳಿಗೆ ದೊಡ್ಡ ದೊಡ್ಡ ಕ್ರೈಂಗಳು ನಡೀತಿವೆ. ಹೆಂಡ್ತಿ ಗಂಡನನ್ನ ಕೊಲೆಗೈಯ್ಯುವುದು. ಗಂಡ ಹೆಂಡ್ತಿಯನ್ನ ಕೊಂದು ಪೀಸ್ ಪೀಸ್ ಮಾಡಿ ಫ್ರಿಡ್ಜ್ಗೆ ತುಂಬುವಂತಹ ಪ್ರಕರಣಗಳು ಸಾಕಷ್ಟು ಕಣ್ಮುಂದೆ ನಡೀತಿವೆ. ಅಂಥದ್ರಲ್ಲಿ ಈ ಆಮೀರ್ ಅನ್ನೋ ಆಸಾಮಿ ತಮ್ಮ ಇಬ್ಬರು ಮಾಜಿ ಪತ್ನಿಯರು ಹಾಗೂ ಮೂವರು ಮಕ್ಕಳ ಸಮ್ಮುಖದಲ್ಲೇ ಮೂರನೇ ಹೆಂಡ್ತಿಗೆ ತಾಳಿ ಕಟ್ಟಿರೋದು ಬರೀ ಗ್ರೇಟ್ ಅಲ್ಲ.. ಗ್ರೇಟೆಸ್ಟ್ ವಿಷ್ಯ.
33 ವರ್ಷದ ಮಗ ಜುನೈದ್ ಖಾನ್ಗೇ ಮದ್ವೆ ಆಗಿಲ್ಲ. ಆದ್ರೆ ತಂದೆ ಆಮೀರ್ ಮಾತ್ರ ಖುಷ್ ಖುಷಿಯಾಗಿ ಮೂರನೇ ಮದ್ವೆ ಆಗಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲೇ ಕುವೆಂಪು ಅವರ ಮಂತ್ರ ಮಾಂಗಲ್ಯದ ರೀತಿ ಸರಳ ಹಾಗೂ ವಿರಳ ವಿವಾಹ ಆಗಿದ್ದು ವಿಶೇಷ. ಯಾವುದೇ ಆಚರಣೆ, ಆಡಂಬರ ಇಲ್ಲದೆ, ಸತಿ ಪತಿಯಾಗಿ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಗೌರವ, ನಿಷ್ಠೆಯಿಂದ ಬದುಕಿ, ಬಾಳುತ್ತೀವಿ ಅಂತ ನಿವೇದನೆ ಮಾಡಿಕೊಳ್ಳೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಖ್ಯಾತ ನಿರ್ಮಾಪಕ ತಾಹಿರ್ ಹುಸೇನ್ ಮಗನಾಗಿ ಹುಟ್ಟಿರೋ ಆಮೀರ್ ಬಾಲ್ಯದಲ್ಲೇ ನಟನೆಗಿಳಿದವರು. ನಂತ್ರ ನಟನೆ, ನಿರ್ದೇಶನ ಹಾಗೂ ನಿರ್ಮಾಣದಿಂದ ಸಂಪಾದಿಸಿದ್ದು ಬರೀ ಆಸ್ತಿಪಾಸ್ತಿಗಳಲ್ಲ. ಬಹುದೊಡ್ಡ ಲೆಗಸಿ. ಹೌದು.. ಸದ್ಯ ಆಮೀರ್ ನೆಟ್ ವರ್ತ್ ಎಷ್ಟು ಕೋಟಿ ಅಂದ್ರೆ 1800 ಕೋಟಿ ರೂಪಾಯಿಗೂ ಅಧಿಕ ಎನ್ನಬಹುದು. ಅದರಲ್ಲಿ 20 ಅಪಾರ್ಟ್ಮೆಂಟ್ಗಳು, 75 ಕೋಟಿ ಮೌಲ್ಯದ ಮಾನ್ಷನ್, 22 ಪಿತ್ರಾರ್ಜಿತ ಐಷಾರಾಮಿ ಮನೆಗಳಿವೆ. ಅಷ್ಟೇ ಅಲ್ಲ, 27 ಕೋಟಿ ಮೌಲ್ಯದ ದುಬಾರಿ ಕಾರ್ಗಳ ಕಲೆಕ್ಷನ್ ಆಮೀರ್ ಬಳಿಯಿದೆ ಅಂದ್ರೆ ನೀವು ನಂಬಲೇಬೇಕು.
ಇಂಟರೆಸ್ಟಿಂಗ್ ಅಂದ್ರೆ ಆಮೀರ್ ಖಾನ್ ಮೂವರು ಪತ್ನಿಯರಲ್ಲಿ ಇಬ್ಬರು ಕನ್ನಡಿಗರು. ಎರಡನೇ ಪತ್ನಿ ಕಿರಣ್ ರಾವ್ ನಮ್ಮ ಮಲ್ಲೇಶ್ವರಂನವರು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಸದ್ಯ 3ನೇ ಮದ್ವೆಯಾಗಿರೋ ಗೌರಿ ಸ್ಪ್ರಾಟ್ ಕೂ ಬೆಂಗಳೂರು ಮೂಲದ ಫ್ಯಾಷನ್ ಸ್ಟೈಲಿಸ್ಟ್. ಇದನ್ನೆಲ್ಲಾ ನೋಡ್ತಿದ್ರೆ ಆಮೀರ್ ನಿಜಕ್ಕೂ ಮಾಡ್ರನ್ ಶ್ರೀಕೃಷ್ಣ ಪರಮಾತ್ಮ ಅನಿಸದೆ ಇರಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





