ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಡ್ರಾಮಾ ತುಂಬಾ ಜೋರಾಗಿದೆ. ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ, ನಾಮಿನೇಶನ್ಗಳ ಸಂಘರ್ಷಗಳು ಪ್ರೇಕ್ಷಕರಲ್ಲಿ ಕುತೂಹಲಮೂಡಿಸಿದೆ. ಈ ಬಾರಿ, ಕಾವ್ಯ ಶೈವಾ ಅವರು ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದು ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿತ್ತು. ಅಷ್ಟೇ ಅಲ್ಲ, ರಜತ್ ಮತ್ತು ಧ್ರುವಂತ್ ನಡುವೆ ಮಾರಾಮಾರಿ ಆಗಿದ್ದು, ಮನೆಯ ವಾತಾವರಣ ಇನ್ನಷ್ಟು ಉದ್ವಿಗ್ನಗೊಳಿಸಿದೆ. ಕಾವ್ಯ ಅವರು ಗಿಲ್ಲಿಗೆ ನೀಡಿದ ಕಾರಣಗಳು ಏನು? ಈ ಘಟನೆಗಳ ಹಿಂದಿನ ಕಥೆಯನ್ನು ನೋಡೋಣ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರ ವಿರುದ್ಧ ಒಬ್ಬರು ತಿರುಗಿ ಬೀಳುವುದು ಸಾಮಾನ್ಯ. ಆದರೆ ಈ ಸೀಸನ್ನಲ್ಲಿ ಗಿಲ್ಲಿ ವಿರುದ್ಧ ಹಲವು ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಕಾವ್ಯ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿ, “ಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೋ ಅನ್ನಿಸುತ್ತಿದೆ” ಎಂದು ಕಾರಣ ನೀಡಿದ್ದಾರೆ. ಕಾವ್ಯ ಅವರ ನಾಮಿನೇಶನ್ ಲಿಸ್ಟ್ನಲ್ಲಿ ಗಿಲ್ಲಿ ಮತ್ತು ರಜತ್ ಇದ್ದರು. ಇದಕ್ಕೆ ರಜತ್ ಕೋಪಗೊಂಡು, “ತಮಾಷೆಯೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾ?” ಎಂದು ಕೂಗಾಡಿದ್ದಾರೆ.
ಅದೇ ಸಮಯದಲ್ಲಿ ಧ್ರುವಂತ್ ಮತ್ತು ರಜತ್ ನಡುವೆ ಮಾತಿನ ಯುದ್ಧ ಭುಗಿಲೆದ್ದಿತ್ತು. ಧ್ರುವಂತ್ ಅವರು ರಜತ್ಗೆ, “ಇದೇನು ಲಾಸ್ಟ್ ಸೀಸನ್ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ” ಎಂದು ಹೇಳಿದ್ದಾರೆ. ಇದಕ್ಕೆ ರಜತ್ ಅವರು ಕೋಪಗೊಂಡು ಧ್ರುವಂತ್ ಮೇಲೆ ಹರಿಹಾಯ್ದರು. ಈ ಘಟನೆ ಮನೆಯ ಇತರ ಸ್ಪರ್ಧಿಗಳನ್ನೂ ಬೆಚ್ಚಿಬೀಳಿಸಿತ್ತು. ಬಿಗ್ ಬಾಸ್ ಶೋನಲ್ಲಿ ಇಂತಹ ಮಾರಾಮಾರಿ ಸಾಮಾನ್ಯವಾಗಿದ್ದರೂ, ಈ ಬಾರಿ ಅದು ವೈಯಕ್ತಿಕ ವಿಷಯದವರೆಗೂ ತಲುಪಿದೆ.
ನೆಟ್ಟಿಗರು ಕಾವ್ಯ ಅವರ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ನೆಟ್ಟಿಗರು ಕಮೆಂಟ್ ಮಾಡಿ, “ಕಾವ್ಯ, ಕಾವ್ಯ, ಕಾವ್ಯ. ಅವನು ನಿನ್ನನ್ನು ಫೈನಲ್ಗೆ ಕರ್ಕೊಂಡು ಹೋಗ್ಬೇಕು ಅಂತ ಇದ್ದಾನೆ ಆದರೆ ನೀನು ಅವನನ್ನು ಮನೆಗೆ ಕಳಿಸಬೇಕು ಅಂತ ಇದ್ದೀಯ. ನಾ ಕಂಡ ಕಾವ್ಯ ಪುಸ್ತಕದಲ್ಲಿ ಕಾವ್ಯಾಗಿಂತ ಗಿಲ್ಲಿನೇ ಜಾಸ್ತಿ ಇದ್ದಾನೆ. ಹೇಳಬೇಕು ಅನ್ನಿಸ್ತು ಹೇಳಿದೆ” ಎಂದಿದ್ದಾರೆ.
ಇದಕ್ಕೂ ಮುಂಚೆ, ಗಿಲ್ಲಿ ಮತ್ತು ರಘು ದೂರವಾಗಿದ್ದು, ಮೊದಲು ಕುಚಿಕು ಸ್ನೇಹಿತರಾಗಿದ್ದ ಇಬ್ಬರು ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟವಾಗುತ್ತಿಲ್ಲ. ಗಿಲ್ಲಿ ರಘು ಅವರನ್ನು “ಕಿಚನ್ ರೂಂಗೆ ಮಾತ್ರ ಸೀಮಿತ” ಎಂದು ಹೇಳಿದ್ದು ಅವರಿಗೆ ನೋವು ತಂದಿದೆ. ಈ ವೇಳೆ ಗಿಲ್ಲಿಯ ಹಿಂದೆಯೇ ಆಪ್ತ ಗೆಳೆಯರು ಮಾತನಾಡಿದ್ದಾರೆ. ರಘು ಮಾತನಾಡಿ, “ನನ್ನ ಪರ್ಸನಾಲಿಟಿ ಚೇಂಜ್ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಬುಕ್ ಟಾಸ್ಕ್ನಲ್ಲಿ ಮಾತನಾಡಿದ ರೀತಿ ತಲೆ ಕೆಟ್ಟು ಹೋಗೋ ಥರ ಮಾಡಿತ್ತು ಎಂದರು.
ಕಾವ್ಯ ಅವರು ಇದಕ್ಕೆ ಪ್ರತಿಕ್ರಿಯಿಸಿ, “ನೀವು ಒಂದು ಶೋ ವಿನ್ನರ್. ನಾನು ಯಾಕೆ ಕುಕ್ ಮಾಡಲಿ ಅಂತ ಇದ್ದಿದ್ದರೆ, ಹಾಗಿದ್ರೆ ಆ ಶೋಗೆ ನೀವು ಹೋಗೋ ಹಾಗೇ ಇರಲಿಲ್ಲ. ನನ್ನ ಪರ್ಸನಾಲಿಟಿ ಅಂತ ಇದ್ದರೆ” ಎಂದಿದ್ದಾರೆ. ಸೂರಜ್ ಕೂಡ ಸೇರಿಕೊಂಡು, “ನೀವು ಒಂದು ಕಡೆ ಶೆಫ್ ಅಂತ ಪ್ರೂವ್ ಆದಾಗ ಯಾವತ್ತೂ ಯಾರೆ ಅಂದರೂ ತಲೆ ಕೆಡಿಸಿಕೊಳ್ಳಬಾರದು” ಎಂದಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸುವುದು ಅಥವಾ ಉಳಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಗಿಲ್ಲಿ ಅವರ ಆಟದ ಶೈಲಿ ಹಲವರನ್ನು ಕೋಪಗೊಳಿಸಿದೆ, ಆದರೆ ಅದು ಅವರನ್ನು ಫೈನಲ್ಗೆ ಕರೆದೊಯ್ಯುತ್ತದೆಯೇ ಎಂಬುದು ಕುತೂಹಲ.





