ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ದಿನದಿಂದ ದಿನಕ್ಕೆ ಡ್ರಾಮಾ ಹೆಚ್ಚಾಗುತ್ತಿದೆ. ಒಮ್ಮೆ ಆಪ್ತ ಸ್ನೇಹಿತರಾಗಿದ್ದ ಗಿಲ್ಲಿ ನಟ ಮತ್ತು ರಜತ್ ಕಿಶನ್ ಅವರ ನಡುವೆ ಈಗ ತೀವ್ರ ವೈರತ್ವ ಬೆಳೆದಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದ ರಜತ್, ಆರಂಭದಲ್ಲಿ ಗಿಲ್ಲಿ ಜೊತೆ ಸೂಪರ್ ಕಾಂಬಿನೇಷನ್ ತೋರಿಸಿದ್ದರು. ಗಿಲ್ಲಿಯ ಕಾಮಿಡಿಗೆ ನಗುತ್ತಾ, ಒಟ್ಟಿಗೆ ಕಾಲ ಕಳೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಮನೆಯಿಂದ ಹೊರಗೆ ಕಳಿಸುವುದಾಗಿ ಓಪನ್ ಚಾಲೆಂಜ್ ಹಾಕಿದ್ದಾರೆ!
ಇತ್ತೀಚಿನ ವೀಕೆಂಡ್ ಎಪಿಸೋಡ್ನ ಪ್ರೋಮೋದಲ್ಲಿ ಈ ಡ್ರಾಮಾ ಹೈಲೈಟ್ ಆಗಿದೆ. ಕಿಚ್ಚ ಸುದೀಪ್ ಅವರು “ಯಾರ ಪಾಪದ ಕೊಡ ತುಂಬಿದೆ?” ಎಂದು ಪ್ರಶ್ನಿಸಿದಾಗ, ಗಿಲ್ಲಿ ನಟ ನೇರವಾಗಿ ರಜತ್ ಅವರನ್ನು ಸೂಚಿಸಿದರು. “ರಜತ್ ಅವರ ಪಾಪದ ಕೊಡ ತುಂಬುತ್ತಿದೆ. ನಾನು ರಜತ್ನನ್ನು ಮನೆಯಿಂದ ಹೊರಗೆ ಕಳಿಸಿಯೇ ಆಚೆ ಹೋಗ್ತೀನಿ” ಎಂದು ಗಿಲ್ಲಿ ಸವಾಲು ಹಾಕಿದರು. ಇದಕ್ಕೆ ರಜತ್ ಕೂಡ ಸುಮ್ಮನಿರಲಿಲ್ಲ “ಯಾರ್ಯಾರು ನನಗೆ ಈ ಬಿರುದು ಕೊಟ್ಟಿದ್ದಾರೋ, ಅವರನ್ನು ಹೊರಗೆ ಕಳಿಸಿಯೇ ನಾನು ಹೋಗ್ತೀನಿ” ಎಂದು ಕೌಂಟರ್ ಕೊಟ್ಟರು.
ಈ ಜಗಳಕ್ಕೆ ಮೂಲ ಕಾರಣ ಏನು?
ಮನೆಯೊಳಗಿನ ಟಾಸ್ಕ್ಗಳು ಮತ್ತು ನಾಮಿನೇಷನ್ಗಳು ಈ ಜಗಳಕ್ಕೆ ಕಾರಣವಾಗಿವೆ. ಗಿಲ್ಲಿ ಅವರು “ನಾನು 10 ಟಾಸ್ಕ್ಗಳಲ್ಲಿ 8ನ್ನು ಗೆದ್ದಿದ್ದೇನೆ” ಎಂದು ಹೇಳಿಕೊಂಡರು. ಆದರೆ ರಜತ್ ಅವರು ಗಿಲ್ಲಿಯ ಕಾಮಿಡಿ ಮತ್ತು ವರ್ತನೆಯನ್ನು ಟೀಕಿಸುತ್ತಾ ಬಂದಿದ್ದಾರೆ. ಮುಂಚೆ ರಜತ್, ಗಿಲ್ಲಿ ಪರವಾಗಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದರು. ಕಳೆದ ವಾರ ಕಾವ್ಯ ಶೈವ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದಾಗ, ರಜತ್ ಅವರು ಗಿಲ್ಲಿಯ ಕಾಮಿಡಿ ಸರಿ ಎಂದು ಡಿಫೆಂಡ್ ಮಾಡಿದ್ದರು. ಆದರೆ ಈಗ ಮನೆಯೊಳಗಿನ ಅಭಿಪ್ರಾಯಗಳು ಬದಲಾಗಿವೆ. ರಜತ್ ಮತ್ತು ಚೈತ್ರಾ ಕುಂದಾಪುರ ಅವರ ಎಂಟ್ರಿಯ ನಂತರ ಗಿಲ್ಲಿ ಮೇಲಿನ ದೃಷ್ಟಿ ಬದಲಾಯಿಸಲು ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರು ಒಂದೇ ದಿನದಲ್ಲಿ ಶತ್ರುಗಳಾಗುವುದು ಸಾಮಾನ್ಯ. ಗಿಲ್ಲಿ ಮತ್ತು ರಜತ್ ಅವರ ಕಥೆಯೂ ಅದೇ ರೀತಿ ಆಗಿದೆ. ಮುಂಚೆ ಗಿಲ್ಲಿಯ ಕಾಮಿಡಿಗೆ ರಜತ್ ನಗುತ್ತಿದ್ದರು. ಈಗ ಟಾಸ್ಕ್ಗಳಲ್ಲಿ ಸ್ಪರ್ಧೆ, ನಾಮಿನೇಷನ್ಗಳಲ್ಲಿ ವೈರತ್ವ ಹೆಚ್ಚಾಗಿದೆ. ಇತ್ತೀಚಿನ ನಾಮಿನೇಷನ್ಗಳಲ್ಲಿ ಗಿಲ್ಲಿ, ರಜತ್ ಸೇರಿದಂತೆ ಹಲವರು ಡೇಂಜರ್ ಜೋನ್ನಲ್ಲಿದ್ದಾರೆ. ಆದರೆ ಈ ವಾರ ಎಲಿಮಿನೇಷನ್ ಇಲ್ಲದಿರುವುದು ಟ್ವಿಸ್ಟ್ ಕೊಟ್ಟಿದೆ.
ಈ ಜಗಳ ಪ್ರೇಕ್ಷಕರನ್ನು ರಂಜಿಸುತ್ತಿದೆ. ಗಿಲ್ಲಿ ಅವರ ಅಭಿಮಾನಿಗಳು ಅವರನ್ನು ಬೆಂಬಲಿಸುತ್ತಿದ್ದಾರೆ, ರಜತ್ ಅವರದ್ದೂ ದೊಡ್ಡ ಫ್ಯಾನ್ ಬೇಸ್ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾರು ಗೆಲ್ಲುತ್ತಾರೆ? ಗಿಲ್ಲಿಯ ಕಾಮಿಡಿ ಇನ್ನೂ ಶೈನ್ ಮಾಡುತ್ತದೆಯೇ? ಅಥವಾ ರಜತ್ ಅವರ ರೌಡಿ ಸ್ಟೈಲ್ ಮೇಲುಗೈ ಸಾಧಿಸುತ್ತದೆಯೇ? ಇದೆಲ್ಲವೂ ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.





