Bigg Boss Kannada 12 ಮನೆಯಲ್ಲಿ ಡ್ರಾಮಾ ಮತ್ತು ಟಾಸ್ಕ್ಗಳ ರೋಚಕತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಈ ವಾರದ ಪ್ರಮುಖ ಟಾಸ್ಕ್ನಲ್ಲಿ ಸ್ಪರ್ಧಿ ಗಿಲ್ಲಿ ನಟ ತಮ್ಮ ಮನಸ್ಸಿಗೆ ವಿರುದ್ಧವಾಗಿ ಮಾಡಬೇಕಾಗಿದ್ದ ಕೆಲಸದಿಂದಾಗಿ ತುಂಬಾ ಭಾವುಕರಾಗಿದ್ದಾರೆ. ಅದೇ ಕಾರಣಕ್ಕೆ ಅವರು ತಮ್ಮ ನೆಚ್ಚಿನ ಮಾಂಸಾಹಾರವನ್ನೇ ಬಿಟ್ಟಿರುವುದು ಮನೆಯೊಳಗೂ, ಹೊರಗೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕ್ಯಾಪ್ಟನ್ಸಿ ಟಾಸ್ಕ್: ಕಾವ್ಯಗೆ ನೋವು ಮಾಡಿದ ಗಿಲ್ಲಿ
ಬಿಗ್ ಬಾಸ್ ಗಿಲ್ಲಿ ಅವರಿಗೆ ನೀಡಿದ ವಿಶೇಷ ಟಾಸ್ಕ್ನಲ್ಲಿ, ಕ್ಯಾಪ್ಟನ್ಸಿ ರೇಸ್ಗೆ ನೇರ ಎಂಟ್ರಿ ಪಡೆಯಬೇಕಾದರೆ ಕಾವ್ಯ ಅಳಬೇಕು ಎಂಬ ನಿಯಮವಿತ್ತು. ಆದರೆ ಒಲ್ಲದ ಮನಸ್ಸಿನಿಂದ ಗಿಲ್ಲಿ ಈ ಟಾಸ್ಕ್ ಅನ್ನು ಒಪ್ಪಿಕೊಂಡರು. ಈ ಹಿನ್ನೆಲೆ ಗಿಲ್ಲಿ, ಕಾವ್ಯ ಮುಂದೆ ಕೆಲವೇ ಕ್ಷಣಗಳಲ್ಲಿ ಅವಳಿಗೆ ನೋವಾಗುವ ಹಾಗೇ ಮಾತುಗಳಾನ್ನಾಡಿದ್ದಾರೆ.
“ನೀವು ಫ್ರೀ ಪ್ರಾಡಕ್ಟ್, ನಿನ್ನ ಬೆನ್ನಿಗೆ ಚೂರಿ ಹಾಕಿಬಿಟ್ಟಿರಲ್ಲಾ… ನಾನು ಜಂಟಿಯಾಗಿ ಹೋಗದಿರಬೇಕಿತ್ತು…” ಹೀಗೆ ಗಿಲ್ಲಿ ಹೇಳಿದ ಮಾತು ಕಾವ್ಯ ಮನಸಿಗೆ ತುಂಬಾ ನೋವು ನೀಡಿತ್ತು. ಮಾತನಾಡುತ್ತಿದ್ದಂತೆಯೇ ಕಾವ್ಯ ಕಣ್ಣೀರು ಹಾಕಿದರು. ಆದರೂ ಟಾಸ್ಕ್ ಯಶಸ್ವಿಯಾಯಿತು. ಗಿಲ್ಲಿಗೆ ಕ್ಯಾಪ್ಟನ್ ಆಗುವ ಅವಕಾಶವೂ ಸಿಕ್ಕಿತ್ತು.
ಪಶ್ಚಾತ್ತಾಪದಲ್ಲಿ ಊಟವನ್ನೇ ಬಿಟ್ಟ ಗಿಲ್ಲಿ
ಟಾಸ್ಕ್ ಮುಗಿದ ನಂತರ ಗಿಲ್ಲಿ ನಟರಿಗೆ ಮನಸ್ಸಲ್ಲಿ ತುಂಬಾ ನೋವಾಗಿದ್ದು, ಅವರು ಕಾವ್ಯಗೆ ಹೇಳಿದ ಮಾತುಗಳು ಬರೀ ಟಾಸ್ಕ್ಗಾಗಿ ಎನ್ನುವುದು ಅವರಿಗೆ ಗೊತ್ತಿದ್ದರೂ, ಆ ದೃಶ್ಯ ವೀಕ್ಷಕರ ಮನಸ್ಸನ್ನೇ ಕಾಡುವ ಮಟ್ಟಕ್ಕೆ ತಲುಪಿತ್ತು.
ಈ ಹಿನ್ನೆಲೆ ಅವರು ರಾತ್ರಿಯ ಊಟವನ್ನೂ ಬಿಟ್ಟಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ಅಡುಗೆ ಉಸ್ತುವಾರಿ ಹೊಂದಿದ್ದರೂ ಚಿಕನ್, ಮಟನ್ ಬಿರಿಯಾನಿ ಮಾಡಿದ್ದರೂ ಗಿಲ್ಲಿ ಅವರು ಊಟಕ್ಕೆ ಕೈ ಹಾಕಲಿಲ್ಲ. ಮಾಂಸಾಹಾರ ಎಂದರೆ ಪ್ರಾಣ ಬಿಡುವಷ್ಟು ಇಷ್ಟವಿರುವ ಗಿಲ್ಲಿ, ತಟ್ಟೆ ನೋಡಿದರೂ ತಿನ್ನದೆ ತಮ್ಮ ಕೋಣೆಗೆ ಹಿಂತಿರುಗಿದ್ದಾರೆ.
ಕಾವ್ಯ–ರಜತ್ ನಡುವೆಯೇ ಗಿಲ್ಲಿಯ ಬಗ್ಗೆ ಮಾತುಕತೆ
ಗಿಲ್ಲಿ ಊಟ ಮಾಡದೆ ಇರುವುದನ್ನು ಕಾವ್ಯ ಗಮನಿಸಿದ್ದಾರೆ. ರಜತ್ ಬಳಿ ಕಾವ್ಯ ಮಾತನಾಡಿದ್ದು, “ನಿನ್ನೆಯಿಂದ ಅವನು ಏನೂ ತಿಂತಾ ಇಲ್ಲ. ಇವಾಗಲೂ ತಿಂಡಿ ತಿಂದಿಲ್ಲ…” ಎಂದು ಬೇಸರದಿಂದ ಹೇಳಿದ್ದಾರೆ. ನಂತರ ಅಶ್ವಿನಿಗೂ ವಿಷಯ ಗೊತ್ತಾಗಿತ್ತು. “ಬಿರಿಯಾನಿ ಮಾಡಿದ್ರೂ ಗಿಲ್ಲಿ ಯಾಕೆ ತಿನ್ನ್ತಿಲ್ಲ?” ಎಂದು ಅವರು ಧ್ರುವಂತ್ ಬಳಿ ಪ್ರಶ್ನೆ ಮಾಡಿದ್ದಾರೆ.
ಲೈವ್ ವೀಕ್ಷಕರು ಗಿಲ್ಲಿಯ ಈ ವರ್ತನೆಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಎಂಥಾ ಒಳ್ಳೇ ಮನ್ಸು ರೀ ಗಿಲ್ಲಿದು..”, “ಕಾವ್ಯ ಅಳಿಸಿದಕ್ಕೆ ಅವನಿಗೆ ಪಶ್ಚಾತ್ತಾಪವಾಗ್ತಿದೆ, ನಿನ್ನೆಂದೇ ಊಟ ಮಾಡಿಲ್ಲ”, “ ಕಾವ್ಯಗೆ ನೋವಾಗ್ತಾ ಇದ್ದಾಗ ಗಿಲ್ಲಿಯ ಪ್ರಾಣ ಒದ್ದಾಡ್ತಿದೆ”, ಎಂಬ ಪ್ರತಿಕ್ರಿಯೆಗಳು ನೆಟ್ಟಿಗರಿಂದ ಹರಿದುಬರುತ್ತಿವೆ.
ಕೆಲವರು ಗಿಲ್ಲಿ ನಿನ್ನೆ ರಾತ್ರಿ ಏನನ್ನೂ ತಿನ್ನದೆ ಮಲಗಿದ್ದಾರೆ. ಬೆಳಿಗ್ಗೆಯೂ ಬಿರಿಯಾನಿ ತಿನ್ನಲು ಬಂದರೂ ಮತ್ತೆ ಕೋಣೆಗೆ ಹಿಂತಿರುಗಿದ್ದಾರೆ ಎಂದು ಲೈವ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.





