ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗಾಗಲೇ ಧನುಷ್ ಎಂಬ ಹೆಸರು ಭಾರೀ ಟ್ರೆಂಡಿಂಗ್ ಆಗಿದೆ. ಸತತ ಎರಡನೇ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾದ ಧನುಷ್, ಈ ಬಾರಿ ‘ಟಾಸ್ಕ್ ಮಾಸ್ಟರ್’ ಎಂಬ ಹೊಸ ಬಿರುದು ಗಳಿಸಿದ್ದಾರೆ. ಫ್ಯಾನ್ಸ್ನಿಂದಲೇ ಈ ಪಟ್ಟ ಲಭಿಸಿದೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ‘ಬಿಬಿ ಪ್ಯಾಲೇಸ್’ ಥೀಮ್ನಲ್ಲಿ ನಡೆಯಿತು. ಮನೆಯನ್ನೇ ಐಷಾರಾಮಿ ಪ್ಯಾಲೇಸ್ ಆಗಿ ಮಾರ್ಪಡಿಸಲಾಗಿತ್ತು. ಸೀಸನ್ 11ರ ಜನಪ್ರಿಯ ಸ್ಪರ್ಧಿಗಳಾದ ತ್ರಿವಿಕ್ರಮ್, ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಅತಿಥಿಗಳಾಗಿ ದೊಡ್ಡಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಐವರು ಗೆಸ್ಟ್ಗಳಿಗೆ ಸ್ಪರ್ಧಿಗಳು ಒಳ್ಳೆಯ ಆತಿಥ್ಯ ನೀಡಿ, ಹೆಚ್ಚು ‘ಟಿಪ್ಸ್’ (ನಾಣ್ಯಗಳು) ಸಂಪಾದಿಸಿದವರು ಕ್ಯಾಪ್ಟನ್ಸಿ ರೇಸ್ಗೆ ಅರ್ಹರಾಗುತ್ತಾರೆ ಎಂಬ ನಿಯಮವಿತ್ತು.
ಮೊದಲ ಹಂತದಲ್ಲಿ ಹೆಚ್ಚು ಟಿಪ್ಸ್ ಪಡೆದ ಐವರು ಸ್ಪರ್ಧಿಗಳು ಫೈನಲ್ ರೌಂಡ್ಗೆ ಲಗ್ಗೆ ಇಟ್ಟರು. ಧನುಷ್, ಸೂರಜ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್. ಇವರಿಗೆ ಗೆಸ್ಟ್ಗಳೇ ಸಪೋರ್ಟ್ ಮಾಡಬೇಕಿತ್ತು.
- ಧನುಷ್ ಪರ – ತ್ರಿವಿಕ್ರಮ್
- ಅಭಿಷೇಕ್ ಪರ – ಚೈತ್ರಾ ಕುಂದಾಪುರ
- ರಘು ಪರ – ಮೋಕ್ಷಿತಾ ಪೈ
- ಸ್ಪಂದನಾ ಪರ – ರಜತ್
- ಸೂರಜ್ ಪರ – ಉಗ್ರಂ ಮಂಜು
ಅಂತಿಮ ಟಾಸ್ಕ್ ಬ್ಯಾಲೆನ್ಸಿಂಗ್ ಮತ್ತು ಎಣಿಕೆ ಆಧಾರಿತವಾಗಿತ್ತು. ಸೂರಜ್ ನಿರಂತರವಾಗಿ ಬ್ಯಾಲೆನ್ಸ್ ಕಳೆದುಕೊಂಡು ಹೊರಗುಳಿದರು. ರಘು ಬಹುತೇಕ ಗೆಲ್ಲುತ್ತಿದ್ದಂತೆ ಕಾಣುತ್ತಿತ್ತು, ಆದರೆ ಕೊನೆಯ ಕ್ಷಣದಲ್ಲಿ ಎಣಿಕೆ ತಪ್ಪಿ ಹೊರಬಿದ್ದರು. ತ್ರಿವಿಕ್ರಮ್ ತಮ್ಮ ಅನುಭವದಿಂದ ಧನುಷ್ಗೆ ಪರ್ಫೆಕ್ಟ್ ಗೈಡ್ ಮಾಡಿದ್ದೇ ಗೆಲುವಿನ ರಹಸ್ಯವಾಯಿತು. ಕೊನೆಗೆ ಧನುಷ್ ಸತತ ಎರಡನೇ ಬಾರಿಗೆ ಕ್ಯಾಪ್ಟನ್ ಆದರು.
ಈ ಟಾಸ್ಕ್ನ ಉಸ್ತುವಾರಿಯನ್ನು ಗಿಲ್ಲಿ ಮತ್ತು ಅಶ್ವಿನಿ ಯಶಸ್ವಿಯಾಗಿ ನಿಭಾಯಿಸಿದ್ದರು. ಫ್ಯಾನ್ಸ್ ಈಗ ಧನುಷ್ಗೆ “ಸೀಸನ್ 12ರ ಟಾಸ್ಕ್ ಮಾಸ್ಟರ್” ಎಂದು ಕರೆಯುತ್ತಿದ್ದಾರೆ. “ಸೀಸನ್ 11ರ ಟಾಸ್ಕ್ ಮಾಸ್ಟರ್ ತ್ರಿವಿಕ್ರಮ್, ಸೀಸನ್ 12ರ ಟಾಸ್ಕ್ ಮಾಸ್ಟರ್ ಧನುಷ್ಗೆ ಸಾಥ್ ನೀಡಿ ಕ್ಯಾಪ್ಟನ್ ಮಾಡಿದರು” ಎಂದು ಕಾಮೆಂಟ್ಗಳು ಹರಿದು ಬರುತ್ತಿವೆ.
ಗೆಸ್ಟ್ಗಳ ವಿದಾಯದ ಸಂದರ್ಭ ಭಾವುಕತೆಯಿಂದ ಕೂಡಿತ್ತು. ಮೂರು ದಿನಗಳ ಕಾಲ ಸ್ಪರ್ಧಿಗಳೊಂದಿಗೆ ಆಟವಾಡಿ, ಮನರಂಜನೆ ನೀಡಿದ ಈ ಮಾಜಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಬಿಟ್ಟು ಹೋಗುವಾಗ ಕಣ್ಣೀರಿನಿಂದ ತುಂಬಿದವು. .
ಧನುಷ್ರ ಈ ಎರಡನೇ ಕ್ಯಾಪ್ಟನ್ಸಿ ಗೆಲುವು ಸೀಸನ್ 12ರ ಆಟದ ಮಾರ್ಗವನ್ನೇ ಬದಲಾಯಿಸುತ್ತದೆ ಎನ್ನುತ್ತಾರೆ ಫ್ಯಾನ್ಸ್. ಟಾಸ್ಕ್ಗಳಲ್ಲಿ ಧನುಷ್ ತೋರುತ್ತಿರುವ ಯೋಜನೆ, ತಾಳ್ಮೆ ಮತ್ತು ತಂತ್ರಗಾರಿಕೆ ಈಗಾಗಲೇ ಅವರನ್ನು ಟೈಟಲ್ ಫೇವರೇಟ್ಗಳ ಪಟ್ಟಿಗೆ ಸೇರಿಸಿವೆ.





