ಕಷ್ಟಕ್ಕೆ ಆಗುವವನೇ ನಿಜವಾದ ಗೆಳೆಯ. ಆದ್ರೆ ಯಾರೆಲ್ಲಾ ಗಜಪಡೆ ಅಂತ ಗುರ್ತಿಸಿಕೊಂಡಿದ್ರೋ ಅವರೆಲ್ಲಾ ದರ್ಶನ್ ಕಷ್ಟಕಾಲದಲ್ಲಿ ಕೈ ಎತ್ತಿದ್ದಾರೆ. ಈ ಮಾತನ್ನ ನಾವು ಹೇಳ್ತಿಲ್ಲ. ಡಿಬಾಸ್ ಕಷ್ಟಕ್ಕೆ ಯಾರೂ ಬರಲಿಲ್ಲ.. ಯಾವ ಗಜಪಡೆಯೂ ಇಲ್ಲ ಸರ್ ಅಂತಾರೆ ದರ್ಶನ್ ಭಂಟ ಧನ್ವೀರ್ ಗೌಡ. ಅಷ್ಟೇ ಅಲ್ಲ, ಜನವರಿಯಲ್ಲಿ ದಾಸ ಹೊರಗೆ ಬರ್ತಾರೆ ಅಂದಿದ್ದ ಝೈದ್ ಖಾನ್ ಸ್ಟೇಟ್ಮೆಂಟ್ನಿಂದ ಆದ ನಷ್ಟವೇನು ಅನ್ನೋದನ್ನ ಹೇಳ್ತಿವಿ ನೋಡಿ…
- ಡಿಬಾಸ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ
- ಕಹಿ ಸತ್ಯ ಹೊರಹಾಕಿದ ದರ್ಶನ್ ಭಂಟ ಧನ್ವೀರ್ ಗೌಡ
- ಅಭಿ, ವಿನೋದ್, ಪ್ರಜ್ಜು, ಝೈದ್, ಸೂರಜ್, ಚಿಕ್ಕು ನಾಪತ್ತೆ
- ಆ ಯಪ್ಪನ ಕಷ್ಟಕ್ಕೆ ಯಾರೂ ಬರಲಿಲ್ಲ.. ಧನ್ವೀರ್ ಬೇಸರ..!!
ಒಬ್ಬ ವ್ಯಕ್ತಿ ಸಂತೋಷವಾಗಿದ್ದಾಗ ಬಂದು ಆ ಖುಷಿಯನ್ನ ಸಂಭ್ರಮಿಸದಿದ್ದರೂ ಪರವಾಗಿಲ್ಲ. ಆದ್ರೆ ಅದೇ ವ್ಯಕ್ತಿ ಕಷ್ಟದಲ್ಲಿ ಇದ್ದಾಗ ಆ ಕಷ್ಟವನ್ನ ಹಂಚಿಕೊಳ್ಳುವವನೇ ನಿಜವಾದ ಸ್ನೇಹಿತ. ಕಷ್ಟಕ್ಕೆ ಆಗದವನು ಸ್ನೇಹಿತನೇ ಅಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷಯದಲ್ಲೂ ಅದೇ ಆಗಿದೆ. ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ, ಅಭಿಮಾನಿಗಳು ಮೆರವಣಿಗೆ ಮಾಡ್ತಿದ್ದ ದರ್ಶನ್ ಜೊತೆ ಆಗ ದೊಡ್ಡದೊಂದು ಪಡೆಯೇ ಇರ್ತಿತ್ತು. ಅದಕ್ಕೆ ಗಜಪಡೆ ಅಂತಲೂ ಕರೆಯಲಾಗುತ್ತಿತ್ತು.
ಶೂಟಿಂಗ್ ಸೆಟ್, ಡಬ್ಬಿಂಗ್ ಸ್ಟುಡಿಯೋ, ಕಾಡಲ್ಲಿ ವೈಲ್ಡ್ ಫೋಟೋಗ್ರಫಿ, ಆಫ್ ರೋಡ್ ಟ್ರಿಪ್ಸ್, ಫಾರ್ಮ್ ಹೌಸ್ನಲ್ಲಿ ಹಬ್ಬ ಹರಿದಿನಗಳ ಸೆಲೆಬ್ರೇಷನ್, ಬರ್ತ್ ಡೇ.. ಹೀಗೆ ಎಲ್ಲೇ ಹೋದ್ರೂ ಅತ್ಯಾಪ್ತರ ಬಳಗವೊಂದು ದಾಸನ ಜೊತೆಗೇ ಇರ್ತಿತ್ತು. ಆದ್ರೆ ಯಾವಾಗ ಟೈಂ ಎಡವಟ್ ಆಯ್ತೋ ಆಗ ಎಲ್ಲರೂ ಅಂತರ ಕಾಯ್ದುಕೊಳ್ಳುವ ಕಾರ್ಯ ಮಾಡಿದ್ರು. ಆ ಲಿಸ್ಟ್ನಲ್ಲಿ ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಝೈದ್ ಖಾನ್, ಅಭಿಷೇಕ್ ಅಂಬರೀಶ್, ಯಶಸ್ ಸೂರ್ಯ, ತರುಣ್ ಶಿವಪ್ಪ, ಚಿಕ್ಕಣ್ಣ, ಪನ್ನಗಾಭರಣ ಸೇರಿದಂತೆ ಸಾಕಷ್ಟು ಮಂದಿ ಇದ್ದಾರೆ.
ಇವರುಗಳ ಯಾವುದೇ ಸಿನಿಮಾದ ಟೀಸರ್ ಲಾಂಚ್, ಆಡಿಯೋ ಲಾಂಚ್, ಟ್ರೈಲರ್ ಲಾಂಚ್, ಪ್ರೀ-ರಿಲೀಸ್ ಇವೆಂಟ್, ಕ್ರಿಕೆಟ್, ಸ್ಪೆಷಲ್ ಅಪಿಯರೆನ್ಸ್ ಬೇಕು ಬಾಸ್ ಅಂದಾಗಲೆಲ್ಲಾ ಹೋಗಿ ಸಾಥ್ ನೀಡಿದ್ರು ದರ್ಶನ್. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾದ ದಾಸನಿಗೆ ಈ ಖಾಸಾಗಳೆಲ್ಲಾ ದೂರವಾದ್ರು. ಆದ್ರೆ ಒಬ್ಬೇ ಒಬ್ಬ ವ್ಯಕ್ತಿ ಆತನ ಜೊತೆ ನಿಂತುಕೊಂಡ.. ಆತನೇ ಆ ಬ್ರದರ್ ಫ್ರಮ್ ಅನದರ್ ಮದರ್.. ಮಿಸ್ಟರ್ ಧನ್ವೀರ್ ಗೌಡ.
ಯೆಸ್.. ಕರುನಾಡ ಶೋಕ್ದಾರ್ ಧನ್ವೀರ್ ಗೌಡ ಇತ್ತೀಚೆಗೆ ತಮ್ಮ ಹಯಗ್ರೀವ ಚಿತ್ರದ ಪ್ರಮೋಷನ್ಸ್ ವೇಳೆ ಗ್ಯಾರಂಟಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಗಜಪಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ನನಗೆ ಅಂತಲ್ಲಾ ಯಾರೇ ಕರೆದರೂ ಸಹ ಹೋಗಿ ಸಪೋರ್ಟ್ ಮಾಡಿದ್ದಾರೆ ಸರ್. ಆದ್ರೆ ಆ ಯಪ್ಪನ ಕಷ್ಟಕ್ಕೆ ಮಾತ್ರ ಯಾರೂ ಬರಲಿಲ್ಲ. ನಾನೂ ನೋಡ್ತಿದ್ದೆ ಯಾರಾದ್ರೂ ಬರ್ತಾರೆ ಅಂತ ಯಾರೂ ಬರಲಿಲ್ಲ. ಆಗ ನಾ ಹೋದೆ ಎಂದಿದ್ದಾರೆ.
ಹೌದು.. ಸೀತಾಪಹರಣ ಆದಾಗ ಆಕೆಯನ್ನ ಸೇಫ್ ಆಗಿ ಅಯೋಧ್ಯೆಗೆ ವಾಪಸ್ ಕರೆತರು ಆ ಶ್ರೀರಾಮನಿಗೆ ಸಹೋದರ ಲಕ್ಷ್ಮಣ ಹೇಗೆ ಬೆನ್ನೆಲುಬಾಗಿ ನಿಂತ್ರೋ, ಅದೇ ರೀತಿ ದರ್ಶನ್ ಕುಟುಂಬದ ಜೊತೆ ನಿಂತಿದ್ದೇ ಧನ್ವೀರ್. ತನ್ನ ಕರಿಯರ್, ಮತ್ತೊಂದು ಮಗದೊಂದು ಎಲ್ಲವನ್ನೂ ಬಿಟ್ಟು ಬಳ್ಳಾರಿ ಜೈಲಿನಿಂದ ಸ್ವತಃ ತಾವೇ ದರ್ಶನ್ರನ್ನ ಕಾರ್ನಲ್ಲಿ ಬೆಂಗಳೂರಿನ ಮನೆಗೆ ಕರೆತಂದರು. ಅದೊಂಥರಾ ಶ್ರೀಕೃಷ್ಣನೇ ಅರ್ಜುನನಿಗೆ ಸಾರಥಿ ಆದ ಗಳಿಗೆಯನ್ನ ನೆನಪಿಸುವಂತಿತ್ತು.
ದರ್ಶನ್ ಕಷ್ಟಕ್ಕೆ ಯಾರೂ ಆಗಲಿಲ್ಲ ಅನ್ನೋದು ಕಹಿ ಸತ್ಯ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಅದನ್ನ ಅನುಭವಿಸಿದವರಿಗೆ ಮಾತ್ರ ಗೊತ್ತು, ಅದ್ರಿಂದ ಆದ ಪರಿಣಾಮ ಎಂತದ್ದು ಅಂತ. ಅದೇನೇ ಇರಲಿ ಧನ್ವೀರ್ ಗೌಡ ಅಂದು ತಗೊಂಡ ಆ ನಿರ್ಧಾರ ನಿಜಕ್ಕೂ ಮೆಚ್ಚುವಂತದ್ದು.
- ಸಿನಿಮೀಯ ಸ್ಟೈಲ್ನಲ್ಲಿ ಬಂದು ಸಿಸಿಬಿಯಿಂದ ಧನ್ವೀರ್ ಅರೆಸ್ಟ್
- ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಪ್ರೂವ್
ದರ್ಶನ್ ಅವ್ರಿಗೆ ಸಾಥ್ ಕೊಡೋಕೆ ಹೋದ ಧನ್ವೀರ್ ಗೌಡನ ಕೂಡ ಲಾಕ್ ಮಾಡೋಕೆ ಮುಂದಾಗಿತ್ತು ವ್ಯವಸ್ಥೆ. ಪರಪ್ಪನ ಅಗ್ರಹಾರ ಜೈಲಲ್ಲಿ ನಡೆದ ಅಕ್ರಮ, ಅವ್ಯವಹಾರಗಳ ವಿಡಿಯೋಗಳನ್ನ ವೈರಲ್ ಮಾಡಿದ್ದಾರೆ ಅಂತ ಲಾಕ್ ಮಾಡಿದ್ರು. ಆ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ಧನ್ವೀರ್ ಏನು ಹೇಳಿದ್ರು ಅಂತ ನೀವೇ ನೋಡಿ.
ಅಷ್ಟೇ ಅಲ್ಲ, ಸಿಂಪಲ್ ಸುನಿ ಜೊತೆ ಬಜಾರ್ ಅನ್ನೋ ಮೊದಲ ಸಿನಿಮಾ ಮಾಡಿದ ಧನ್ವೀರ್ ಗೌಡ, ಆ ಸಿನಿಮಾ ವಿಚಾರಕ್ಕಾಗಿ ದರ್ಶನ್ ಇದ್ದಂತಹ ಸಿನಿಮಾ ಶೂಟಿಂಗ್ ಸೆಟ್ಗೆ ಹೋದಾಗ ಎರಡನೇ ಮಾತೇ ಇಲ್ಲದೆ ಡೇಟ್ ಅಂಡ್ ಟೈಮಿಂಗ್ ಹೇಳು ಅಂದಿದ್ದ ದಾಸನ ಸಹಾಯ ಕೂಡ ನೆನೆದರು ಧನ್ವೀರ್.
- ಝೈದ್ ಖಾನ್ ಕೊಟ್ಟ ಸ್ಟೇಟ್ಮೆಂಟ್.. ದರ್ಶನ್ಗಾದ ನಷ್ಟವೆಷ್ಟು?
- TRPಗಾಗಿ ಟಿವಿ ಮುಂದೆ ಮಾತಾಡ್ತಾರೆ.. ಎಫೆಕ್ಟ್ ಯೋಚಿಸಲ್ಲ!
ಇನ್ನೊಂದೇ ಒಂದು ತಿಂಗಳಲ್ಲಿ ಪ್ರಾಪರ್ ಬೇಲ್ ಪಡೆದು ಆಚೆ ಬರ್ತಾರೆ. ಜನವರಿಯಲ್ಲಿ ದರ್ಶನ್ ಜೈಲಿಂದ ಬಂದೇ ಬಿಡ್ತಾರೆ. ನನಗೆ ಲಾಯರ್ಗಳು ಒಂದಷ್ಟು ಜನ ಪರಿಚಯ ಇದೆ. ಅವ್ರೊಂದಿಗೆ ಚರ್ಚೆ ಮಾಡಿದ್ದೇನೆ ಅಂತೆಲ್ಲಾ ಭವಿಷ್ಯ ನುಡಿದಿದ್ರು ಸಚಿವ ಜಮೀರ್ ಮಗ, ನಟ ಝೈದ್ ಖಾನ್. ಆದ್ರೆ ಅದು ಸುಳ್ಳಾಯ್ತು. ಆದ್ರೆ ಅದ್ರಿಂದ ಆದ ಎಫೆಕ್ಟ್ ಬೇರೆಯದ್ದೇ ರೀತಿಯಲ್ಲಿದೆ. ಆ ತರಹದ ಹೇಳಿಕೆ ದರ್ಶನ್ ಕಾನೂನು ಹೋರಾಟಕ್ಕೆ ಹಿನ್ನಡೆ ಆಗಿದೆ. ಈ ಬಗ್ಗೆ ಧನ್ವೀರ್ ಗೌಡ ಓಪನ್ ಆಗಿ ಮಾತನಾಡಿದ್ದಾರೆ.
ಟಿವಿ ಮುಂದೆ ಕೂತು ಬಾಯಿಗೆ ಬಂದಂತೆ ಮಾತಾಡೋದು ಅಲ್ಲ. ಅವರ ಟಿಆರ್ಪಿ ಹೆಚ್ಚಿಸಿಕೊಳ್ಳೋಕೆ ಹಾಗೆ ಮಾತಾಡೋದು ಎಷ್ಟು ಸರಿ ಅಂತ ನೇರವಾಗಿ ಗುಮ್ಮಿದ್ದಾರೆ ಧನ್ವೀರ್. ಅಷ್ಟೇ ಅಲ್ಲ, ಹಿರಿಯನಟ ರವಿಚಂದ್ರನ್ ನೀಡಿದ ಸ್ಟೇಟ್ಮೆಂಟ್ ತುಂಬಾ ಮೆಚ್ಯೂರ್ಡ್ ಆಗಿದೆ ಅಂತಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ. ಅವ್ರ ಅನುಪಸ್ಥಿತಿಯಿಂದ ಚಿತ್ರರಂಗಕ್ಕೆ ಆಗ್ತಿರೋ ನಷ್ಟ ತುಂಬುವಂತಾಗಲಿ. ಅವ್ರ ಕೋಟ್ಯಂತರ ಅಭಿಮಾನಿಗಳ ಹರಕೆ, ಕೋರಿಕೆ, ಪ್ರಾರ್ಥನೆಗಳು ಫಲಿಸಲಿ ಅನ್ನೋದಷ್ಟೇ ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





