ಬಿಗ್ ಬಾಸ್ ಕನ್ನಡ 12: ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ತೀವ್ರ ಸಂಘರ್ಷದ ಹಂತಕ್ಕೆ ಬಂದು ನಿಂತಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ರಿಯಾಲಿಟಿ ಶೋನಲ್ಲಿ ಈ ವಾರದ ಟಾಸ್ಕ್ಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ. ವಿಶೇಷವಾಗಿ, ಮಾಜಿ ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ ನಂತರ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಸಂಭಾಷಣೆ ಹೆಚ್ಚು ಆಸಕ್ತಿದಾಯಕವಾಗಿವೆ.
ಈ ವಾರದ ಮುಖ್ಯ ಟಾಸ್ಕ್ ‘ಬಿಬಿ ಪ್ಯಾಲೇಸ್’ ರೆಸ್ಟೋರಂಟ್ ಥೀಮ್ನದ್ದು. ಮನೆಯನ್ನು ರೆಸ್ಟೋರಂಟ್ಗೆ ಪರಿವರ್ತಿಸಿ, ಸ್ಪರ್ಧಿಗಳು ರೆಸ್ಟೋರಂಟ್ನ ಒಂದೊಂದು ವಿಭಾಗದ ಕೆಲಸಗಳನ್ನ ನಿರ್ವಹಿಸುತ್ತಿದ್ದಾರೆ. ಮಾಜಿ ಸ್ಪರ್ಧಿಗಳನ್ನ ಕಂಡು ಮನೆಮಂದು ಹೆಚ್ಚು ಖುಷಿ ಪಟ್ಟರೂ ಮನೆಮಂದಿ ಹಾಗೂ ಮಾಜಿ ಸ್ಪರ್ಧಿಗಲ ನಡುವೆ ಗಲಾಟೆಯೂ ಜೋರಾಗಿದೆ. ಮಾಜಿ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು ಮತ್ತು ಇತರರೊಂದಿಗೆ ಗಿಲ್ಲಿಯ ವಾದ ಜೋರಾಗಿತ್ತು. ಗಿಲ್ಲಿ ಉಗ್ರಂ ಮಂಜು ಅವರ ಮದುವೆಯ ಬಗ್ಗೆ ‘ಇದು ಎರಡನೇಯದೋ ಮೂರನೇಯದೋ ? ಎಂದು ಹೇಳಿದ್ದ ಇದು ಮಂಜು ತೀವ್ರ ಕೋಪಗೊಂಡು ನೀನು ವೈಯಕ್ತಿಕ ಲಿಮಿಟ್ ಮೀರಿ ಮಾತನಾಡುತ್ತಿದ್ದೀಯಾ, ಇಧೆ ರೀತಿ ಮತ್ತೆ ಮಾಡಿದ್ರೆ ನಾನು ಅತಿಥಿಯೆಂದು ಮರೆತು ಏನು ಮಾಡ್ಬೇಕೋ ಅದನ್ನ ಮಾಡ್ತೀನಿ ಎಂದು ಗಿಲ್ಲಿಗೆ ಎಚ್ಚರಿಕೆ ನೀಡಿದ್ದಾರೆ.
ಮನೆಯವ್ರಿಗಾಗಿ ಸೈಲೆಂಟ್ ಆದ್ರಾ ಗಿಲ್ಲಿ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/OiHYcDKem9
— Colors Kannada (@ColorsKannada) November 27, 2025
ಮಾಜಿ ಸ್ಪರ್ಧಿಗಳು ಬರುವ ಮೊದಲು ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಜಟಅಪಟಿ ಇತ್ತು. ಟಾಸ್ಕ್ಗಳಲ್ಲಿ ಏಟಿಗೆ ಎದುರೇಟು ನೀಡುತ್ತಾ, ಅವರು ಪಕ್ಕಾ ಎದುರಾಳಿಗಳಂತಿದ್ದರು. ಆದರೆ ಮಾಜಿ ಸ್ಪರ್ಧಿಗಳು ಬಂದ ನಂತರ ಇಬ್ಬರ ಒಡನಾಟ ಬೇರೆಯಘಾಇದೆ. ಗಿಲ್ಲಿಯ ಹಾವಳಿ ಮತ್ತು ಕಿರಿಕಿರಿ ಮಾತುಗಳು ಮಿತಿಮೀರಿದ್ದು, ರಜತ್ ಮತ್ತು ಉಗ್ರಂ ಮಂಜು ಬೇಸರಗೊಂಡರು. ‘ನಿನ್ನ ಮಾತುಗಳು ನಿಜಕ್ಕೂ ಬೇಸರವಾಗುತ್ತಿದೆ. ಇದು ಕಾಮಿಡಿ ಅಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು. ಇದರಿಂದ ಇನ್ನುಳಿದ ಸ್ಪರ್ಧಿಗಳು ಗಿಲ್ಲಿಗೆ ‘ಕೂಲ್ ಆಗಿರು’ ಎಂದು ಸಲಹೆ ನೀಡುತ್ತಿದ್ದಾರೆ.
ಅಭಿಷೇಕ್ ಕೂಡ ಗಿಲ್ಲಿಗೆ ಕೈಮುಗಿದು, ‘ಸುಮ್ಮನಿರು, ಜಾಸ್ತಿ ತಲೆಕೆಡಿಸಬೇಡ’ ಎಂದು ಕೇಳಿಕೊಂಡಿದ್ದಾರೆ. ಆದರೆ ಈ ನಡುವೆಯೇ ಅಶ್ವಿನಿ ಗೌಡ ಗಿಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ‘ಇಲ್ಲಿ ಕೂತುಕೋ, ಆರಾಮಾಗಿರು. ಕೂಲ್ ಆಗಿರು. ಜಾಸ್ತಿ ಯೋಚಿಸಬೇಡ. ನಿನಗೆ ಹಿಂಸೆ ಆದರೆ ಹೇಳು, ನಾನು ನಿನ್ನ ಜೊತೆಯೇ ಬರುತ್ತೇನೆ’ ಎಂದು ಅವರು ಗಿಲ್ಲಿಯನ್ನು ಧೈರ್ಯಗೊಳಿಸಿದ್ದಾರೆ. ಇದು ವೀಕ್ಷಕರಲ್ಲಿ ಆಶ್ಚರ್ಯ ಮೂಡಿಸಿದೆ, ಏಕೆಂದರೆ ಅವರ ನಡುವಿನ ಹಿಂದಿನ ಜಗಳಗಳು ಇನ್ನೂ ಮರೆಯಾಗಿಲ್ಲ.





