ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸ್ರ ದಿಢೀರ್ ದಾಳಿಯು ರಾಜ್ಯಾದ್ಯಂತ ಭಾರೀ ಆತಂಕವನ್ನು ಹರಡಿದೆ. ಮಂಗಳವಾರ (ಅಕ್ಟೋಬರ್ 14, 2025) ನಡೆದ ಈ ದಾಳಿಯು ತಡರಾತ್ರಿಗೆ ಮುಕ್ತಾಯಗೊಂಡಿದ್ದು, 12 ಸರ್ಕಾರಿ ಅಧಿಕಾರಿಗಳ ಮೇಲೆ ನಡೆದ ರೇಡ್ನಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ-ಬೆಳ್ಳಿ, ಜಮೀನು, ಮನೆ ಮತ್ತು ಇತರ ಆಸ್ತಿಗಳು ಪತ್ತೆಯಾಗಿವೆ. ಬೆಂಗಳೂರು ಸೇರಿದಂತೆ 48 ಸ್ಥಳಗಳಲ್ಲಿ ನಡೆದ ಈ ಶೋಧನಾ ಕಾರ್ಯದಿಂದ ಸುಮಾರು ₹38 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳು ವಶವಾಗಿವೆ. ಈ ದಾಳಿಯು ಭ್ರಷ್ಟಾಚಾರದ ವಿರುದ್ಧ ರಾಜ್ಯ ಸರ್ಕಾರದ ಬಿಗಿ ನಿಲುವನ್ನು ತೋರಿಸಿದೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ರು ಅನುಪಾತಹೀನ ಆಸ್ತಿ ಸಂಬಂಧಿಸಿದ ದೂರುಗಳ ಆಧಾರದ ಮೇಲೆ 12 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬೀದರ್, ಉಡುಪಿ, ಬಾಗಲಕೋಟೆ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದಿದ್ದು, 48 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆದಿದೆ. ದಾಳಿಯಲ್ಲಿ ನಗದು, ಚಿನ್ನಾಭರಣಗಳು, ವಾಹನಗಳು, ಜಮೀನುಗಳು, ಮನೆಗಳು ಮತ್ತು ಆಸ್ತಿ ದಾಖಲೆಗಳು ವಶವಾಗಿವೆ.
1. ಮಂಜುನಾಥ. ಜಿ. ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು
- ಶೋಧ ಕಾರ್ಯ ಸ್ಥಳ: ಮಂಜುನಾಥ್ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ದಾಳಿ ವೇಳೆ 3 ಕೋಟಿ 24 ಲಕ್ಷದ 13 ಸಾವಿರದ 240 ಸ್ಥಿರ ಹಾಗೂ ಚರ ಆಸ್ತಿ ಪತ್ತೆ
- ಸ್ಥಿರ ಆಸ್ತಿ: 1 ಸೈಟ್, 1 ವಾಸದ ಮನೆ, 1 ಪ್ಲಾಟ್ ಸೇರಿ 1 ಕೋಟಿ 85 ಲಕ್ಷ ಸ್ಥಿರ ಆಸ್ತಿ ಪತ್ತೆ
- 10 ಲಕ್ಷ ನಗದು, ವಾಹನ, ಗೃಹೋಪಯೋಗಿ ವಸ್ತು ಸೇರಿ 1 ಕೋಟಿ 39 ಲಕ್ಷ ಚರ ಆಸ್ತಿ ಪತ್ತೆ
2. ವಿ. ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು
- ಶೋಧ ಕಾರ್ಯ ಸ್ಥಳ: ಸುಮಂಗಳಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಸುಮಂಗಳ ಬಳಿ 7 ಕೋಟಿ 32 ಲಕ್ಷದ 50 ಸಾವಿರ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
- ಸ್ಥಿರ ಆಸ್ತಿ: 4 ಸೈಟ್, 5 ಮನೆಗಳು, 19 ಎಕರೆ ಕೃಷಿ ಜಮೀನು ಸೇರಿ 5 ಕೋಟಿ 8 ಲಕ್ಷದ 42 ಸಾವಿರ ಮೌಲ್ಯದ ಸ್ಥಿರ ಆಸ್ತಿ ಪತ್ತೆ
- 1 ಕೋಟಿ ಮೌಲ್ಯದ ಚಿನ್ನಾಭರಣಗಳು, ವಾಹನ ಸೇರಿ 2 ಕೋಟಿ 24 ಲಕ್ಷದ 8 ಸಾವಿರ ಚರ ಆಸ್ತಿ ಪತ್ತೆ
3. ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ. ಬೆಂಗಳೂರು
- ಶೋಧ ಕಾರ್ಯ ಸ್ಥಳ: ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಗಂಗಮರಿಗೌಡ ಬಳಿ 4 ಕೋಟಿ 66 ಲಕ್ಷ 55 ಸಾವಿರ 512 ರೂಪಾಯಿ ಮೌಲ್ಯದ ಆಸ್ತಿ ಪತ್ತೆ
- ಸ್ಥಿರ ಆಸ್ತಿ: 2 ನಿವೇಶನಗಳು, 2 ಮನೆ, 2 ಎಕರೆ ಕೃಷಿ ಜಮೀನು ಸೇರಿ 3 ಕೋಟಿ 58 ಲಕ್ಷ ಸ್ಥಿರ ಆಸ್ತಿ ಪತ್ತೆ
- 1 ಕೋಟಿ 8 ಲಕ್ಷದ 40 ಸಾವಿರ ಮೌಲ್ಯದ ಚರ ಆಸ್ತಿ ಪತ್ತೆ
4. ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ
- ಶೋಧ ಕಾರ್ಯ ಸ್ಥಳ: ಚಂದ್ರಶೇಖರ್ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ದಾಳಿ ವೇಳೆ 5 ಕೋಟಿ 14 ಲಕ್ಷದ 15 ಸಾವಿರದ 742 ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ.
- ಸ್ಥಿರ ಆಸ್ತಿ: 4 ಕೋಟಿ 2 ಲಕ್ಷ ಮೌಲ್ಯದ ಸ್ಥಿರ ಆಸ್ತಿಯ ಪತ್ತೆ
- 1 ಕೋಟಿ 12 ಲಕ್ಷದ 15 ಸಾವಿರ 742 ಮೌಲ್ಯದ ಚರ ಆಸ್ತಿ ಪತ್ತೆ
5. ಜಗದೀಶ್ ನಾಯ್ಕ. ಕೆ. ಹೆಚ್. ಸಹಾಯಕ ಅಭಿಯಂತರರು. ಕೆ.ಆರ್.ಐ.ಡಿ.ಎಲ್. ದಾವಣಗೆರೆ.
- ಶೋಧ ಕಾರ್ಯ ಸ್ಥಳ: ಜಗದೀಶ್ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2 ಕೋಟಿ 4 ಲಕ್ಷದ 54 ಸಾವಿರದ 125 ರೂಪಾಯಿ
- ಸ್ಥಿರ ಆಸ್ತಿ: ಸ್ಥಿರ ಆಸ್ತಿಯ ಅಂದಾಜು ಮೌಲ್ಯ- ₹1 ಕೋಟಿ 55 ಲಕ್ಷದ 71 ಸಾವಿರದ 500 ರೂಪಾಯಿ
- ಚರ ಆಸ್ತಿಯ ಒಟ್ಟು ಮೌಲ್ಯ 48 ಲಕ್ಷದ 82 ಸಾವಿರದ 625 ರೂಪಾಯಿ
6. ಬಿ. ಎಸ್. ನಡುವಿನ ಮನೆ, ಕಿರಿಯ ಸಹಾಯಕ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ,ದಾವಣಗೆರೆ
- ಶೋಧ ಕಾರ್ಯ ಸ್ಥಳ: ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರಾ ಆಸ್ತಿ ಒಟ್ಟು ಮೌಲ್ಯ 2 ಕೋಟಿ 30 ಲಕ್ಷದ 54 ಸಾವಿರದ 684 ರೂಪಾಯಿ
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ-1 ಕೋಟಿ 70 ಲಕ್ಷದ 79 ಸಾವಿರ ರೂಪಾಯಿ
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 59 ಲಕ್ಷದ 75 ಸಾವಿರದ 684
7. ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲ್ಲೂಕು ಪಂಚಾಯಿತಿ, ಹಾವೇರಿ
- ಶೋಧ ಕಾರ್ಯ ಸ್ಥಳ:ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ.
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ 1 ಕೋಟಿ 67 ಲಕ್ಷದ 18 ಸಾವಿರದ 729 ರೂಪಾಯಿ
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 65 ಲಕ್ಷದ 7 ಸಾವಿರ ರೂಪಾಯಿ
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1ಕೋಟಿ 2 ಲಕ್ಷದ 11 ಸಾವಿರದ 729 ರೂಪಾಯಿ
8. ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕರು,, ರಾಣಿಬೆನ್ನೂರು ತಾಲ್ಲೂಕು, ಹಾವೇರಿ
- ಶೋಧ ಕಾರ್ಯ ಸ್ಥಳ: ಶೋಧ ಕಾರ್ಯ ಸ್ಥಳ: ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ- 2 ಕೋಟಿ 25 ಲಕ್ಷದ 96 ಸಾವಿರದ 462
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 26 ಲಕ್ಷದ 6 ಸಾವಿರ ರೂಪಾಯಿ
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 99 ಲಕ್ಷದ 90 ಸಾವಿರದ 462 ರೂಪಾಯಿ
9. ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್, ಬೀದರ್ ಜಿಲ್ಲೆ
- ಶೋಧ ಕಾರ್ಯ ಸ್ಥಳ: ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಒಟ್ಟು ಮೌಲ್ಯ 3 ಕೋಟಿ 39 ಲಕ್ಷದ 35 ಸಾವಿರದ500
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1 ಕೋಟಿ 82 ಲಕ್ಷದ 87 ಸಾವಿರ ರೂಪಾಯಿ
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 56 ಲಕ್ಷದ 48 ಸಾವಿರದ 500 ರೂಪಾಯಿ
10. ಲಕ್ಷ್ಮಿನಾರಾಯಣ.ಪಿ. ನಾಯಕ್, ಆರ್.ಟಿ.ಓ ಉಡುಪಿ
- ಶೋಧ ಕಾರ್ಯ ಸ್ಥಳ: ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಒಟ್ಟು ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 2 ಕೋಟಿ 21 ಲಕ್ಷದ 14 ಸಾವಿರದ 234 ರೂಪಾ
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 47 ಲಕ್ಷದ 50 ಸಾವಿರ ರೂಪಾಯ
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 73 ಲಕ್ಷದ 64 ಸಾವಿರ 234 ರೂಪಾಯಿ
11. ಚೇತನ್, ಕಿರಿಯ ಅಭಿಯಂತರರು ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ.
- ಶೋಧ ಕಾರ್ಯ ಸ್ಥಳ: ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1 ಕೋಟಿ 67 ಲಕ್ಷದ 28 ಸಾವಿರದ 774
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 47 ಲಕ್ಷದ 28 ಸಾವಿರದ 774
12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಇಲಾಖೆ, ಹಾಸನ
- ಶೋಧ ಕಾರ್ಯ ಸ್ಥಳ: ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
- ಚರ ಆಸ್ತಿ: ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಮೌಲ್ಯ 2 ಕೋಟಿ 17 ಲಕ್ಷದ 47 ಸಾವಿರದ 763 ರೂಪಾಯಿ
- ಸ್ಥಿರ ಆಸ್ತಿ: ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 12 ಲಕ್ಷದ 53 ಸಾವಿರದ 425
- ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1 ಕೋಟಿ 4 ಲಕ್ಷದ 94 ಸಾವಿರದ 338