• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕನ್ನಡಿಗರ ಹೃದಯ ಸಿಂಹಾಸನಕ್ಕೆ ಅಣ್ಣಾವ್ರೇ ‘ರಾಜ’!

19ನೇ ಪುಣ್ಯಸ್ಮರಣೆ.. ಕುಟುಂಬಸ್ಥರಿಂದ ವಿಶೇಷ ಪೂಜೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 12, 2025 - 12:52 pm
in ಸಿನಿಮಾ
0 0
0
Film 2025 04 12t125032.619

ಡಾ. ರಾಜ್‌ಕುಮಾರ್‌.. ಗಂಧದಗುಡಿಯ ನಂದಾದೀಪ. ಚಂದನವನ ಕಂಡ ಅಪರೂಪದ ಕನ್ನಡದ ಕಣ್ಮಣಿ. ಅಮೋಘ ಅಭಿನಯದಿಂದಲೇ ಸಮಾಜದಲ್ಲಿ ಕ್ರಾಂತಿ ಮಾಡಿದವರು. ದೈಹಿಕವಾಗಿ ರಾಜಣ್ಣ ನಮ್ಮನ್ನಗಲಿ 19 ವರ್ಷಗಳಾಯ್ತು. ಆದ್ರೆ ಕನ್ನಡಿಗರ ಹೃದಯ ಸಿಂಹಾಸನಕ್ಕೆ ಇವ್ರೇ ಆಲ್ ಟೈಂ ‘ರಾಜ’ರು.

ರಸಿಕರ ರಾಜ, ರಾಜ ಮಾರ್ತಾಂಡ, ನಟಸಾರ್ವಭೌಮ, ಗಾನಗಂಧರ್ವ, ವೀರಕೇಸರಿ, ಕನ್ನಡ ಕಲಾತಪಸ್ವಿ, ಕನ್ನಡ ಜ್ಯೋತಿ, ಕಲಾ ರತ್ನ, ಕನ್ನಡ ಕೌಸ್ತುಭ, ಮರೆಯಲಾಗದ ಮುತ್ತು, ಕನ್ನಡಿಗರ ಸ್ವತ್ತು ಡಾ ರಾಜ್​ಕುಮಾರ್ ಇಂದು ನಮ್ಮೊಂದಿಗಿಲ್ಲ. ಭೌತಿಕವಾಗಿ ಅವರು ನಮ್ಮಿಂದ ದೂರವಾಗಿ 19 ವರ್ಷಗಳಾಯ್ತು. ಆದ್ರೆ ಸಿನಿಮಾಗಳು ಹಾಗೂ ಸಾಮಾಜಿಕ ಕಳಕಳಿಯ ಪಾತ್ರಗಳಿಂದ ಕನ್ನಡಿಗರ ಹೃದಯಂತರಾಳದಲ್ಲಿ ಅಣ್ಣಾವ್ರು ಸದಾ ಚಿರಾಯು.

RelatedPosts

ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ

ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!

ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ

ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಹೆಮ್ಮರವಾಗಿ ಬೆಳೆದ ಡಾ ರಾಜ್​ಕುಮಾರ್, ತಮ್ಮ ಅತ್ಯದ್ಭುತ ನಟನೆಯಿಂದಲೇ ಕನ್ನಡದ ಕಸ್ತೂರಿಯ ಮಕರಂಧವನ್ನ ವಿಶ್ವಕ್ಕೆ ಪಸರಿಸಿದವರು. ನಯಕ್ಕೆ ಇವ್ರದ್ದು ಪರ್ಯಾಯ ನಾಮ. ವಿನಯಕ್ಕೆ ಇವರು ಶ್ರೇಷ್ಠ ನಿದರ್ಶನ. ಈ ನಯ-ವಿನಯಗಳೇ ಅಣ್ಣಾವ್ರ ಅಭಿನಯ ಚತುರತೆಗೆ ಮೆರುಗು ನೀಡಿತು.

ಬಾಲ್ಯದಲ್ಲೇ ಹತ್ತು ಹಲವು ಅಗ್ನಿದಿವ್ಯಗಳನ್ನೆದುರಿಸಿ, ಪುಟಕ್ಕಿಟ್ಟ ಬಂಗಾರವಾದವ್ರು ಡಾ ರಾಜ್​ಕುಮಾರ್. ಸಂಸ್ಕಾರದಿಂದಲೇ ಅಪ್ಪಟ ಚಿನ್ನವಾಗಿ ಹೊರಹೊಮ್ಮಿದವ್ರು. ಅವ್ರ ನುಡಿ ಮುತ್ತಿನಹಾರದಂತೆ, ಅವ್ರ ಹಾಡು ಜೇನಿನ ಹೊಳೆಯಂತೆ. ಅವ್ರ ನಗು ಬೆಳದಿಂಗಳಷ್ಠೇ ಪರಿಶುದ್ಧ, ನಿಷ್ಕಲ್ಮಶ್ಮ.

ಸ್ವಚ್ಚ ಕನ್ನಡವನ್ನ ಉಚ್ಚರಿಸೋ ಅವ್ರ ಬಾಯಲ್ಲಿ ಕನ್ನಡವನ್ನ ಕೇಳೋದೇ ಒಂಥರಾ ಚೆಂದ. ಕಲ್ಲು ಸಕ್ಕರೆ ಸವಿದಂತೆ ಅದು ಶುದ್ದ, ಸರಳ, ಸೌಜನ್ಯಪೂರ್ಣ ಮತ್ತು ಸೌಹಾರ್ದಮಯ ಭಾಷೆ ಅನಿಸೋದ್ರಲ್ಲಿ ಎರಡು ಮಾತಿಲ್ಲ. ಅವರ ಭಾವವೂ ಕೂಡ ಹಾಗೆಯೇ ಇತ್ತು. ಹಾಗಾಗಿಯೇ ಮನೆಯವರ, ನೆರೆಯವರ, ಕುಲಕೋಟಿ ಕನ್ನಡಿಗರ ಮನಗೆದ್ದರು ಅಣ್ಣಾವ್ರು.

ಸೌತ್ ಸಿನಿ ದುನಿಯಾದ ಆಧಾರಸ್ತಂಭಗಳಲ್ಲಿ ಒಂದಾದ ಇವರು ಕರ್ನಾಟಕದ ನಿಜವಾದ ರತ್ನ. ಕನ್ನಡ ಚಿತ್ರಲೋಕದ ಬೆಳ್ಳಿಚುಕ್ಕಿಯಾಗಿ, ಪದ್ಮಭೂಷಣ ಡಾ ರಾಜ್​ಕುಮಾರ​ರಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾದರು. ಹಾಗಂತ ಎಂದೂ ಗಗನಚುಕ್ಕಿಯಾಗಿ ಮೆರೆದವರಲ್ಲ. ಭರಚುಕ್ಕಿಯಾಗಿ ಕನ್ನಡ ನಾಡು, ನುಡಿ, ಜಲಕ್ಕಾಗಿ ಅಪ್ಪಟ ಕನ್ನಡಿಗನಾಗಿ ಜನರ ಜೊತೆ ತಾನೂ ಬೀದಿಗಿಳಿದು ಹೋರಾಡಿದ್ದು ಇತಿಹಾಸ.

ಡಾ ರಾಜ್ ಬರೀ ವ್ಯಕ್ತಿ ಅಲ್ಲ.. ಅದೊಂದು ದಿವ್ಯ ಶಕ್ತಿ, ಅಭಿಮಾನಿಗಳನ್ನೇ ದೇವರುಗಳೆಂದ ಸರ್ವ ಶ್ರೇಷ್ಠ ನಟ

ಡಾ.ರಾಜ್​ರ ಕನ್ನಡ ಪ್ರೇಮದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು ಅಂತ ಬಯಿಸದವ್ರು. ಅಂದು, ಇಂದು ಮುಂದೆಂದೂ ಕನ್ನಡಿಗರೆಲ್ಲರ ಆಶಯ ಕೂಡ ಅದೇ ಆಗಿದೆ. ಕೋಟಿ ಕೋಟಿ ಕನ್ನಡಿಗರ ಹೃದಯದಲ್ಲಿ ನೆಲೆಸಿರೋ ರಾಜ್, ಯಾವತ್ತೂ ತಾನೊಬ್ಬ ಸೂಪರ್ ಸ್ಟಾರ್ ಅಂತ ಮೆರೆದವರಲ್ಲ. ನಾನು ಕನ್ನಡಿಗರ ಸ್ವತ್ತು, ಕನ್ನಡದ ಮಗ, ನಿಮ್ಮವ ಅಂತಲೇ ಹೇಳಿಕೊಂಡಿರೋ ಅಪರೂಪದ ವಿಡಿಯೋ ಒಮ್ಮೆ ನೋಡಿ.

ರಾಜ್​ಕುಮಾರ್ ಅನ್ನೋರು ಅವ್ರ ಸ್ವಂತದಿಂದ ಬಂದವ್ರಲ್ಲ. ಉದ್ಭವಮೂರ್ತಿ ಅಂತು ಅಲ್ಲವೇ ಅಲ್ಲ. ರಾಜಕುಮಾರ ಕನ್ನಡದವ್ರ ಸ್ವತ್ತು. ಕನ್ನಡದ ಮಗ. ಹಾಗಾಗಿ ರಾಜಕುಮಾರ ನಿಮಗೆ ಸಂಬಂಧಪಟ್ಟವರು, ನಿಮ್ಮವರು ಅಂತ ಹೇಳಿಬಿಟ್ಟರೆ ಸಾಕು.

ಇನ್ನು ಡಾ. ರಾಜ್ ಕುಮಾರ್ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದಂತೆ ಅದೊಂದು ಪವಾಡ ಕ್ಷೇತ್ರವಾಗಿಬಿಟ್ಟಿದೆ. ಅಲ್ಲಿ ಮಕ್ಕಳಿಗೆ ಹೆಸರಿಡಲಾಗುತ್ತೆ. ಮಾಂಗಲ್ಯ ಧಾರಣೆ ಆಗಲಿದೆ. ಪ್ರತೀ ದಿನ ರಾಜ್ಯ, ದೇಶ, ವಿದೇಶಗಳಿಂದ ಸಾವಿರಾರು ಮಂದಿ ಸ್ಮಾರಕಕ್ಕೆ ಬಂದು ಹೋಗ್ತಿದ್ದಾರೆ. ಇನ್ನು ಪ್ರತೀ ವರ್ಷ ಏಪ್ರಿಲ್ 12 ಹಾಗೂ ಏಪ್ರಿಲ್ 24ರಂದು ದೊಡ್ಮನೆಯ ಕುಟುಂಬಸ್ಥರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಂದು ಕೂಡ ನಟ ರಾಘವೇಂದ್ರ ರಾಜ್‌ಕುಮಾರ್, ಅಣ್ಣಾವ್ರ ಪುತ್ರಿ ಲಕ್ಷ್ಮೀ, ಮೊಮ್ಮಗ ಷಣ್ಮುಖ ಸೇರಿದಂತೆ ರಾಜ್ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಿ, ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು.

ಒಟ್ಟಾರೆ ರಾಜ್‌‌ಕುಮಾರ್ ಬರೀ ಚಿತ್ರರಂಗದ ಆಸ್ತಿ ಅಲ್ಲ, ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಯಭಾರಿ. ಅದಕ್ಕೆ ಕನ್ನಡಿಗರಾದ ನಾವುಗಳು ಸದಾ ಆಭಾರಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 30T233134.032

ಬ್ಯಾಂಕ್ ವಂಚಕರಿಂದ 64,920 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಇಡಿ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅಬ್ಬರ

by ಯಶಸ್ವಿನಿ ಎಂ
March 30, 2026 - 11:32 pm
0

Untitled design 2026 03 30T230945.308

ರಾಜಸ್ಥಾನ್ ರಾಯಲ್ಸ್ ಅಬ್ಬರ: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಸಿಎಸ್‌ಕೆ ಧೂಳೀಪಟ

by ಯಶಸ್ವಿನಿ ಎಂ
March 30, 2026 - 11:11 pm
0

Untitled design 2026 03 30T223939.027

ಸೂರ್ಯವಂಶಿ ಅಬ್ಬರಕ್ಕೆ CSK ಉಡೀಸ್: 15 ಎಸೆತಗಳಲ್ಲಿ 50 ರನ್ ಸಿಡಿಸಿ ಇತಿಹಾಸ ಬರೆದ ವೈಭವ್

by ಯಶಸ್ವಿನಿ ಎಂ
March 30, 2026 - 10:54 pm
0

Untitled design 2026 03 30T222804.918

ರಾಜಸ್ಥಾನ ರಾಯಲ್ಸ್ ಬೌಲಿಂಗ್‌ಗೆ ತತ್ತರಿಸಿದ CSK: 8 ಬ್ಯಾಟರ್‌ಗಳು ಒಂದಂಕಿಗೆ ಔಟ್ !

by ಯಶಸ್ವಿನಿ ಎಂ
March 30, 2026 - 10:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 30T201836.972
    ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?
    March 30, 2026 | 0
  • Untitled design 2026 03 30T174239.944
    ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ
    March 30, 2026 | 0
  • Untitled design 2026 03 30T171905.958
    ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!
    March 30, 2026 | 0
  • Untitled design 2026 03 30T162139.896
    ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ
    March 30, 2026 | 0
  • Untitled design 2026 03 30T154316.827
    ಧುರಂಧರ್​ ಗೆದ್ದ ಬೆನ್ನಲ್ಲೇ ರಣ್ವೀರ್‌‌‌​ಗೆ 5ಕೋಟಿ ಕಾರ್ ಗಿಫ್ಟ್..!
    March 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version