ತುಮಕೂರು ಹಿರಿಯ ಸಚಿವ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾತು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಾನೂನು ಸುವ್ಯವಸ್ಥೆ ವಿಚಾರವಾಗಿ ಬಹಳಷ್ಟು ಚರ್ಚೆ ನಡೆದಿತ್ತು. ಇನ್ನೂ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಆರ್.ರಾಜೇಂದ್ರ ಪೊಲೀಸರಿಗೆ ನೀಡಿದ್ದ ಸುಮಾರು 18 ನಿಮಿಷಗಳ ಆಡಿಯೋ ಸಾಕ್ಷಿ ಲಭ್ಯವಾಗಿದ್ದು, ಆಡಿಯೋ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಂದೆ ಕೆ.ಎನ್.ರಾಜಣ್ಣ ಮಾಡಿದ್ದ ಹನಿಟ್ಯಾಪ್ ಆರೋಪವನ್ನು ಮುಚ್ಚಿ ಹಾಕಲು ಕೊಲೆಗೆ ಸುಫಾರಿ ನೀಡಿದ್ದಾರೆ ಎಂಬ ನಾಟಕವಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿತ್ತು. ಆದ್ರೆ ಇಂದಿನ ಆಡಿಯೋ, ಮಾತನಾಡಿದ್ದವರ ಬಾಯಿ ಮುಚ್ಚಿಸಿದ್ದು, ಆಡಿಯೋದಲ್ಲಿ ಮಾತನಾಡಿದ ಪುಷ್ಪಾ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್.ರಾಜೇಂದ್ರ ತಿಳಿಸಿದಂತೆ ಮಗಳ ಹುಟ್ಟು ಹಬ್ಬದ ದಿನವೇ ಜಯಪುರ ಇಬ್ಬರು ಡೆಕೋರೇಷನ್ ಮಾಡುವ ನೆಪದಲ್ಲಿ ರಾಜೇಂದ್ರ ಮನೆಯಲ್ಲೇ ರಾಜೇಂದ್ರ ಹತ್ಯೆ ಮಾಡಲು ಮುಂದಾಗಿದ್ದರು. ಬಳಿಕ ಸಾಧ್ಯವಾಗದ ಹಿನ್ನೆಲೆ ಕಾರಿಗೆ ಜಿಪಿಎಸ್ ಅಳವಡಿಸಿ ಫಾಲೋ ಮಾಡಿ ಹತ್ಯೆ ಮಾಡಲು ಮುಂದಾಗಿದ್ರು. ಈ ಪ್ರಕರಣದಲ್ಲಿ ಕಲಾಸಿಪಾಳ್ಯದ ಇಬ್ಬರು ತಮಿಳ್ ಯುವಕರು ಸಹ ಜೊತೆಯಾಗಿದ್ದು, ಮಧುಗಿರಿಯ ಏಳು ಮಂದಿ ಯುವಕರು ಸಪೋರ್ಟ್ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಆಡಿಯೋದಲ್ಲಿ ರಾಜೇಂದ್ರ ಬೆಂಬಲಿಗ ರಾಕೇಶ್ ಹಾಗೂ ಎ 1 ಆರೋಪಿ ಸೋಮ ಪರಿಚಯಸ್ಥ ಮಹಿಳೆ ಪುಷ್ಪ ಮಾತನಾಡಿರೋ ಆಡಿಯೋ ಸಿಕ್ಕಿದೆ.
ಮಹಿಳೆ ಪುಷ್ಟ ಸೋಮನ ಇಂಚಿಚು ಸಂಚನ್ನು ಹೊರಹಾಕಿದೆ. ಈ ಆಡಿಯೋದಲ್ಲಿ ತಿಳಿಸಿದಂತೆ ಗುಂಡ ಎಂಬಾತನನ್ನ ಪೇರೋಲ್ ಮೇಲೆ ಮೂರು ತಿಂಗಳು ರಾಜೇಂದ್ರ ಹತ್ಯೆಗಾಗಿಯೇ ಹೊರತರಲಾಗಿದೆ ಎಂಬ ಸತ್ಯ ಹೊರಬಿದ್ದಿದೆ. ಜೊತೆಗೆ ಮತ್ತೊಬ್ಬ ರೌಡಿಶೀಟರ್ ಪಚ್ಚಿಯನ್ನ ಸಹ ಹತ್ಯೆ ಮಾಡಲು ಸಂಚು ರೂಪಿಸಿರೋದು ಈ ಆಡಿಯೋದಲ್ಲಿ ಬಯಲಾಗಿದೆ. ಇನ್ನೂ ರಾಜೇಂದ್ರ ಹತ್ಯೆಗೆ ಸುಫಾರಿ ನೀಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡಾ, ಯತೀಶ್ ಗಾಗಿ ಬಲೆ ಬೀಸಿದ್ದು, ಸುಫಾರಿಗಾಗಿ ಬಂದಿರುವ 5 ಲಕ್ಷ ಹಣದ ಮಾಹಿತಿಯನ್ನು ಸಹ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.





