ವಾಮನ.. ಇದೇ ಏಪ್ರಿಲ್ 10ಕ್ಕೆ ತೆರೆಗೆ ಬರ್ತಿರೋ ಕನ್ನಡದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಗೌಡ ಹಾಗೂ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ ರೀಷ್ಮಾ ನಾಣಯ್ಯ ನಟಿಸಿರೋ ವಾಮನ ಸಿನಿಮಾ ಕೊಂಚ ಲೇಟ್ ಆದ್ರೂ, ಲೇಟೆಸ್ಟ್ ಆಗಿ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದೆ. ಶಂಕರ್ ರಾಮನ್ ನಿರ್ದೇಶನದ ವಾಮನ ಚಿತ್ರಕ್ಕೆ ದೇವನಹಳ್ಳಿಯ ಚೇತನ್ ಗೌಡ ಬಂಡವಾಳ ಹೂಡಿದ್ದು, ಸಿನಿಮಾನ ಬಹಳ ರಿಚ್ ಆಗಿ ಮೂಡಿಬರುವಂತೆ ಮಾಡಿದ್ದಾರೆ.
ಅಂದಹಾಗೆ ಈ ವಾಮನ ಸಿನಿಮಾದ ಪ್ರೀ- ರಿಲೀಸ್ ಇವೆಂಟ್ ಇದೇ ಮಾರ್ಚ್ 27ರಂದು ನಡೆಯಲಿದೆ. ಆ ಪ್ರೀ ರಿಲೀಸ್ ಇವೆಂಟ್ ನಲ್ಲೇ ಟ್ರೈಲರ್ ಲಾಂಚ್ ಕೂಡ ಮಾಡ್ತಿದೆ ಚಿತ್ರತಂಡ. ಇಷ್ಟಕ್ಕೂ ಟ್ರೈಲರ್ ಲಾಂಚ್ ಮಾಡ್ತಿರೋದು ಯಾರು ಗೊತ್ತಾ..? ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್. ಹೌದು.. ಆಪ್ತಮಿತ್ರ ಧನ್ವೀರ್ ಗೌಡ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸ್ವತಃ ದರ್ಶನ್ ಅವರೇ ಬಂದು ಟ್ರೈಲರ್ ಲಾಂಚ್ ಮಾಡ್ತಿರೋದು ಇಂಟರೆಸ್ಟಿಂಗ್.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಪ್ರಸನ್ನ ಥಿಯೇಟರ್ ನಲ್ಲಿ ಮಾರ್ಚ್ 27 ಗುರುವಾರ ಸಂಜೆ 4 ಗಂಟೆಗೆ ವಾಮನ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ನಟ ದರ್ಶನ್ ಹಾಗೂ ಧನ್ವೀರ್ ಗೌಡ ಅವರ ಅಭಿಮಾನಿ ಬಳಗ ದೊಡ್ಡ ಮಟ್ಟದಲ್ಲಿ ಜಮಾಯಿಸಲಿದ್ದು, ವಾಮನ ಇವೆಂಟ್ ನ ಸಿನಿಮಾ ರಿಲೀಸ್ ರೇಂಜ್ ಗೆ ಸಂಭ್ರಮಿಸಲಿದ್ದಾರೆ. ಅಂದಹಾಗೆ ನಟ ದರ್ಶನ್ ಬಹಳ ದಿನಗಳ ನಂತ್ರ ಈ ರೀತಿ ಫಿಲ್ಮ್ ಇವೆಂಟ್ ಗೆ ಬರ್ತಿರೋದು ಅವ್ರ ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಎಲ್ಲಿಲ್ಲದ ಖುಷಿ ಕೊಡ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ಜೈಲು ಪಾಲಾಗಿದ್ದರು.
ಬೇಲ್ ಮೇಲೆ ಹೊರಬಂದು ಐದು ತಿಂಗಳಾಗ್ತಾ ಬಂದಿದೆ. ಇಂದಿಗೂ ಸಹ ದರ್ಶನ್ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಎಲ್ಲೂ ದರ್ಶನ ನೀಡಿಲ್ಲ. ಆದ್ರೆ ಇದೇ ಮೊದಲ ಬಾರಿ ಅಜ್ಞಾತವಾಸಕ್ಕೆ ಫುಲ್ ಸ್ಟಾಪ್ ಇಟ್ಟು, ಪಬ್ಲಿಕ್ ಇವೆಂಟ್ ಗೆ ಗ್ರ್ಯಾಂಡ್ ಎಂಟ್ರಿ ಕೊಡುವ ಮನಸ್ಸು ಮಾಡಿದ್ದಾರೆ.
ಫಾರ್ಮ್ ಹೌಸ್, ಆಸ್ಪತ್ರೆ, ಟೆಂಪಲ್ ರನ್ ಅಂತ ಬ್ಯುಸಿಯಾಗಿದ್ದ ನಟ ದರ್ಶನ್, ಡೆವಿಲ್ ಸಿನಿಮಾದ ಶೂಟಿಂಗ್ ಕೂಡ ಕಿಕ್ ಸ್ಟಾರ್ಟ್ ಮಾಡಿದ್ರು. ಮೈಸೂರಿನಲ್ಲಿನ ಚಿತ್ರೀಕರಣ ಮುಗಿಸಿ, ಇಂದು ರಾಜಸ್ತಾನಕ್ಕೆ ಫ್ಲೈಟ್ ಏರಿದ್ದಾರೆ ದಾಸ ದರ್ಶನ್ & ಟೀಂ ಡೆವಿಲ್. ಅಲ್ಲಿ ಸುಮಾರು ಒಂದು ವಾರದ ಕಾಲ ಡೆವಿಲ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಡಿಬಾಸ್ ದರ್ಶನ್ ರ ದೃಶ್ಯಗಳನ್ನ ಮೂರ್ನಾಲ್ಕು ದಿನ ಚಿತ್ರೀಕರಿಸಲು ಡೈರೆಕ್ಟರ್ ಪ್ರಕಾಶ್ ವೀರ್ ಯೋಜನೆ ರೂಪಿಸಿದ್ದಾರಂತೆ.
ಆದ್ರೆ ವಾಮನ ಚಿತ್ರದ ಟ್ರೈಲರ್ ಲಾಂಚ್ ಗಾಗಿ ರಾಜಸ್ತಾನದಿಂದ ಬೆಂಗಳೂರಿಗೆ ಬಂದು, ಧನ್ವೀರ್ ಗೌಡಗಾಗಿ ಅದನ್ನ ಲಾಂಚ್ ಮಾಡಿಕೊಡಲಿದ್ದಾರಂತೆ ದರ್ಶನ್. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದರ್ಶನ್ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ, ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಅನ್ನೋದು ಒಂದು ಖುಷಿಯಾದ್ರೆ, ಹೊಸ ಸಿನಿಮಾಗಳಿಗಾಗಿ ಸಪೋರ್ಟ್ ಮಾಡೋಕೆ ಬರ್ತಿದ್ದಾರೆ ಅನ್ನೋದು ಮತ್ತೊಂದು ಖುಷಿ.
ನಮ್ಮಲ್ಲಿ ಸದ್ಯ ಇರೋದೇ ಮೂರು ಮತ್ತೊಂದು ಸ್ಟಾರ್ ಗಳು. ಅವರೇ ಹೀಗೆ ಹಿಂದೆ ಸರಿದರೆ ಸಿನಿಮಾರಂಗದ ಕಥೆ ಏನಾಗಬೇಡ ಅಲ್ಲವೇ..? ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್, ಮನದ ಕಡಲು ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ರು. ಇದೀಗ ದರ್ಶನ್ ವಾಮನ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಅನ್ನೋ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.