• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

14 ಲಕ್ಷ ರೂ. ಮೌಲ್ಯದ ಅಂತರರಾಷ್ಟ್ರೀಯ ಮಟ್ಟದ ಸೈಕಲ್ ವಿತರಿಸಿದ ಡಿಸಿಎಂ ಡಾ.ಜಿ. ಪರಮೇಶ್ವರ್

ರಾಜ್ಯದ ಪ್ರತಿಭಾನ್ವಿತ ಸೈಕ್ಲಿಸ್ಟ್‍ಗಳಿಗೆ ಬಂಪರ್ ಕೊಡುಗೆ

ಕವಿತಾ by ಕವಿತಾ
July 15, 2026 - 6:01 pm
in ಕರ್ನಾಟಕ
0 0
0
ವಾಂಗ್ಚುಕ್ (5)

ಬೆಂಗಳೂರು (ಜುಲೈ 15): ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿಯ ಸೈಕಲ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಗುಣ ಮಟ್ಟದ ಸ್ಪರ್ಧಾತ್ಮಕ ಸೈಕಲ್ ಗಳನ್ನು ಹಾಗೂ ಸೈಕಲ್ ಬಿಡಿ ಭಾಗಗಳನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಇಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಯವನಿಕ ಸಭಾಂಗಣದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಈ ಸೈಕಲ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ರಾಜ್ಯದ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಆಯ್ದ 36 ಜನ ಪ್ರತಿಭಾನ್ವಿತ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ಸೈಕಲ್ ಗಳನ್ನು ಹಾಗೂ ಸೈಕಲ್ ಬಿಡಿ ಭಾಗಗಳನ್ನು ಇಲಾಖೆವತಿಯಿಂದ ಉಚಿತವಾಗಿ ವಿತರಿಸಲಾಗಿದೆ ಎಂದರು.

RelatedPosts

ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್

ನಕಲಿ ಔಷಧಿ ಮಾಫಿಯಾಗೆ ಬಿಗ್ ಶಾಕ್; 15 ಫಾರ್ಮಸಿಗಳಿಗೂ ನೋಟಿಸ್..ಲೈಸನ್ಸ್ ರದ್ದು

ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಚಿವ

ಬಿಸಿಲಿನಿಂದ ಕಂಗೆಟ್ಟ ಬೆಂಗಳೂರಿಗೆ ವರುಣನ ಸಿಂಚನ: ಮುಂದಿನ ದಿನಗಳಲ್ಲೂ ಮಳೆ ಸಾಧ್ಯತೆ

ADVERTISEMENT
ADVERTISEMENT

ರಾಜ್ಯದ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ನಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದ ಸೈಕಲ್ ಗಳನ್ನು ಒಟ್ಟು 36 ಕ್ರೀಡಾಪಟುಗಳ ವಿತರಿಸಲಾಗುತ್ತಿದ್ದು, ಈ ಪೈಕಿ 21 ಜನರಿಗೆ ಜಾಗತಿಕ ಸ್ಪರ್ಧೆಗಳಲ್ಲಿ (Competitions) ಭಾಗವಹಿಸಲು ಅನುವಾಗುವಂತಹ ಸೈಕಲ್ ಗಳು ಮತ್ತು 15 ಜನರಿಗೆ ತರಬೇತಿಗಾಗಿ (Practice) ವಿವಿಧ ಮಾದರಿಯ ಹೈ-ಎಂಡ್ ಸೈಕಲ್ ಗಳನ್ನು ನೀಡಲಾಗಿದೆ. ಕ್ರೀಡಾಪಟುಗಳ ಉನ್ನತ ಸಾಧನೆಗಾಗಿ ಅತ್ಯಂತ ದುಬಾರಿ ಸೈಕಲ್ ಗಳನ್ನು ಒದಗಿಸಲಾಗಿದ್ದು, ಅಂತರರಾಷ್ಟ್ರೀಯ ಸ್ಪರ್ಧೆಗೆ ಬಳಸುವ ಲುಕ್ ಕಂಪನಿಯ ಟ್ರ್ಯಾಕ್ ಸೈಕಲ್ ಒಂದರ ಬೆಲೆ ರೂ.14 ಲಕ್ಷ ಆಗಿದೆ. ಹಾಗೆಯೇ, ತರಬೇತಿಗಾಗಿ ಬಳಸುವ ರೋಡ್ ಸೈಕಲ್ನ ಬೆಲೆ ಸುಮಾರು ರೂ. 7 ಲಕ್ಷ ಆಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ವೆಲೋಡ್ರೋಮ್ ಗಳಿಗೆ ಆದ್ಯತೆ:

ಪ್ರಸ್ತುತ ಸೈಕ್ಲಿಂಗ್ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವೆಲೋಡ್ರೋಮ್ ಗಳಲ್ಲಿ (Velodrome) ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳಿಗೆ ಹಾಗೂ ಅಲ್ಲಿನ ಮುಖ್ಯ ತರಬೇತುದಾರರಿಗೆ (Coaches) ಈ ಸೈಕಲ್ ಗಳನ್ನು ಹಸ್ತಾಂತರಿಸಲಾಗಿದೆ.

ನಮ್ಮ ಇಲಾಖೆಯು ಗ್ರಾಮೀಣ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಮತ್ತು ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಈ ಸೈಕಲ್ ಗಳÀ ಸದ್ಬಳಕೆ ಮಾಡಿಕೊಂಡು ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ರಾಜ್ಯಕ್ಕೆ ಪದಕಗಳನ್ನು ತರಬೇಕು ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾರೈಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಮ್.ಎನ್. ಅನುಚೇತ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಸೈಕಲ್ ಗಳ ಹಂಚಿಕೆ ವಿವರ:

ಖರೀದಿಸಲಾದ ಒಟ್ಟು 21 ಸ್ಪರ್ಧಾತ್ಮಕ ಸೈಕಲ್ ಗಳಲ್ಲಿ, ವಿಜಯಪುರ ಜಿಲ್ಲೆಗೆ 3 ರೋಡ್ ಸೈಕಲ್ ಗಳು (Time Trial), 2 ಎಮ್.ಟಿ.ಬಿ (MTB) ಸೈಕಲ್ ಗಳು ಮತ್ತು 2 ಟ್ರ್ಯಾಕ್ ಸೈಕಲ್ ಗಳು ಸೇರಿದಂತೆ ಒಟ್ಟು 7 ಸೈಕಲ್ ಗಳನ್ನು ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಗೆ 3 ರೋಡ್ ಸೈಕಲ್ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 3 ಎಮ್.ಟಿ.ಬಿ ಸೈಕಲ್ ಗಳು ಮತ್ತು 1 ಟ್ರ್ಯಾಕ್ ಸೈಕಲ್ ಒಳಗೊಂಡಂತೆ ಒಟ್ಟು 8 ಸೈಕಲ್ ಗಳನ್ನು ಹಂಚಿಕೆ ಮಾಡಲಾಗಿದೆ.

ಗದಗ ಜಿಲ್ಲೆಗೆ 2 ರೋಡ್ ಸೈಕಲ್ ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 2 ಎಮ್.ಟಿ.ಬಿ ಸೈಕಲ್ ಗಳು ಮತ್ತು 1 ಟ್ರ್ಯಾಕ್ ಸೈಕಲ್ ಸೇರಿದಂತೆ ಒಟ್ಟು 6 ಸೈಕಲ್ ಗಳನ್ನು ವಿತರಿಸಲಾಗಿದೆ.

ಒಟ್ಟಾರೆಯಾಗಿ ಮೂರೂ ಜಿಲ್ಲೆಗಳಿಗೆ ಸೇರಿ 8 ರೋಡ್ ಸೈಕಲ್ ಗಳು, 2 ಮಾಸ್ ಸ್ಟಾರ್ಟ್ ಸೈಕಲ್ ಗಳು, 7 ಎಮ್.ಟಿ.ಬಿ ಸೈಕಲ್ ಗಳು, ಮತ್ತು 4 ಟ್ರ್ಯಾಕ್ ಸೈಕಲ್ ಗಳನ್ನು ಸರಬರಾಜು ಮಾಡಲಾಗಿದೆ.

ತರಬೇತಿ ಸೈಕಲ್ ಗಳು, ಮತ್ತು ಬಿಡಿಭಾಗಗಳ ಹಂಚಿಕೆ ವಿವರ:

ತರಬೇತಿ ವಿಭಾಗಕ್ಕೆ ಸಂಬಂಧಿಸಿದಂತೆ, ವಿಜಯಪುರ ಜಿಲ್ಲೆಗೆ 4 ರೋಡ್ ಸೈಕಲ್ ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು (Competition Wheel), 3 ಜೋಡಿ ಕೊರಿಮಾ ಹಾಫ್ ಡಿಸ್ಕ್‍ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 2 ಸ್ಮಾರ್ಟ್ ಟ್ರೈನರ್ ಗಳನ್ನು ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಗೆ 4 ರೋಡ್ ಸೈಕಲ್ ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು, 3 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಹಾಗೂ 3 ಸ್ಮಾರ್ಟ್ ಟ್ರೈನರ್ ಗಳನ್ನು ಹಂಚಿಕೆ ಮಾಡಲಾಗಿದೆ.

ಗದಗ ಜಿಲ್ಲೆಗೆ 2 ರೋಡ್ ಸೈಕಲ್ ಗಳು, 3 ಎಮ್.ಟಿ.ಬಿ ಸೈಕಲ್ ಗಳು, 2 ಸ್ಪರ್ಧಾತ್ಮಕ ಚಕ್ರಗಳು, 2 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 2 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 3 ಸ್ಮಾರ್ಟ್ ಟ್ರೈನರ್ ಗಳನ್ನು ವಿತರಿಸಲಾಗಿದೆ.

ಇವೆಲ್ಲವುಗಳ ಒಟ್ಟು ಪ್ರಮಾಣವು 10 ರೋಡ್ ಸೈಕಲ್ ಗಳು, 5 ಎಮ್.ಟಿ.ಬಿ ಸೈಕಲ್ ಗಳು, 8 ಸ್ಪರ್ಧಾತ್ಮಕ ಚಕ್ರಗಳು, 8 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 8 ಸ್ಮಾರ್ಟ್ ಟ್ರೈನರ್ ಗಳಾಗಿವೆ.

 ವೆಚ್ಚ ಹಾಗೂ ದರಗಳ ವಿವರ:

ಸ್ಪರ್ಧಾತ್ಮಕ ಸೈಕಲ್ ಗಳ ವಿಭಾಗದಲ್ಲಿ ‘ಲುಕ್’ ಬ್ರ್ಯಾಂಡ್‍ನ 4 ಟ್ರ್ಯಾಕ್ ಸೈಕಲ್ ಗಳನ್ನು ತಲಾ 14,00,000 ರೂಪಾಯಿಗಳಂತೆ ಒಟ್ಟು 56,00,000 ರೂಪಾಯಿಗಳಿಗೆ ಖರೀದಿಸಲಾಗಿದೆ.

‘ಮೆರಿಡಾ’ ಬ್ರ್ಯಾಂಡ್ ನ 8 ರೋಡ್ ಸೈಕಲ್ ಗಳನ್ನು ತಲಾ 7,66,666 ರೂಪಾಯಿಗಳಂತೆ ಒಟ್ಟು 61,33,333 ರೂಪಾಯಿಗಳಿಗೆ, 2 ಮಾಸ್ ಸ್ಟಾರ್ಟ್ ಸೈಕಲ್ ಗಳನ್ನು ತಲಾ 3,94,104 ರೂಪಾಯಿಗಳಂತೆ ಒಟ್ಟು 7,88,209 ರೂಪಾಯಿಗಳಿಗೆ ಹಾಗೂ 7 ಎಮ್.ಟಿ.ಬಿ ಸೈಕಲ್ ಗಳನ್ನು ತಲಾ 2,24,761 ರೂಪಾಯಿಗಳಂತೆ ಒಟ್ಟು 15,73,333 ರೂಪಾಯಿಗಳಿಗೆ ಕೊಳ್ಳಲಾಗಿದೆ. ಇದರ ಮೂಲ ಒಟ್ಟು ವೆಚ್ಚ 1,40,94,876 ರೂಪಾಯಿಗಳಾಗಿದ್ದು, ಇದಕ್ಕೆ 7,04,743 ರೂಪಾಯಿಗಳ ಜಿ.ಎಸ್.ಟಿ ಸೇರಿದಂತೆ ಸ್ಪರ್ಧಾತ್ಮಕ ಸೈಕಲ್ ಗಳ ಒಟ್ಟು ವೆಚ್ಚ 1,47,99,620 ರೂಪಾಯಿಗಳಾಗಿದೆ.

ತರಬೇತಿ ಸೈಕಲ್ ಮತ್ತು ಬಿಡಿಭಾಗಗಳ ವಿಭಾಗದಲ್ಲಿ, ‘ಮೆರಿಡಾ’ ಬ್ರ್ಯಾಂಡ್ ನ 10 ರೋಡ್ ಸೈಕಲ್ ಗಳನ್ನು ತಲಾ 3,00,000 ರೂಪಾಯಿಗಳಂತೆ ಒಟ್ಟು 30,00,000 ರೂಪಾಯಿಗಳಿಗೆ ಮತ್ತು 5 ಎಮ್.ಟಿ.ಬಿ ಸೈಕಲ್ ಗಳನ್ನು ತಲಾ 2,79,047 ರೂಪಾಯಿಗಳಂತೆ ಒಟ್ಟು 13,95,238 ರೂಪಾಯಿಗಳಿಗೆ ಖರೀದಿಸಲಾಗಿದೆ.

‘ಕೊರಿಮಾ’ ಬ್ರ್ಯಾಂಡ್ ನ 8 ಸ್ಪರ್ಧಾತ್ಮಕ ಚಕ್ರಗಳನ್ನು ತಲಾ 3,52,380 ರೂಪಾಯಿಗಳಂತೆ ಒಟ್ಟು 28,19,047 ರೂಪಾಯಿಗಳಿಗೆ ಹಾಗೂ 8 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳನ್ನು ಪ್ರತಿ ಜೋಡಿಗೆ 2,57,142 ರೂಪಾಯಿಗಳಂತೆ ಒಟ್ಟು 20,57,142 ರೂಪಾಯಿಗಳಿಗೆ ಕೊಳ್ಳಲಾಗಿದೆ.

ಜೊತೆಗೆ, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳನ್ನು ತಲಾ 29,750 ರೂಪಾಯಿಗಳಂತೆ ಒಟ್ಟು 2,38,006 ರೂಪಾಯಿಗಳಿಗೆ ಮತ್ತು 8 ಸ್ಮಾರ್ಟ್ ಟ್ರೈನರ್ ಗಳನ್ನು ತಲಾ 46,610 ರೂಪಾಯಿಗಳಂತೆ ಒಟ್ಟು 3,72,881 ರೂಪಾಯಿಗಳಿಗೆ ಖರೀದಿಸಲಾಗಿದೆ. ಈ ವಿಭಾಗದ ಮೂಲ ಒಟ್ಟು ವೆಚ್ಚ 98,82,316 ರೂಪಾಯಿಗಳಾಗಿದ್ದು, ಇದಕ್ಕೆ 5,73,531 ರೂಪಾಯಿಗಳ ಜಿ.ಎಸ್.ಟಿ ಸೇರಿದಂತೆ ತರಬೇತಿ ಸಾಮಗ್ರಿಗಳ ಒಟ್ಟು ವೆಚ್ಚ 1,04,55,848 ರೂಪಾಯಿಗಳಾಗಿದೆ.

ಅಂತಿಮವಾಗಿ, ಸ್ಪರ್ಧಾತ್ಮಕ ಸೈಕಲ್ ಗಳ ಒಟ್ಟು ಮೊತ್ತ 1,47,99,620 ರೂಪಾಯಿಗಳು ಮತ್ತು ತರಬೇತಿ ಸೈಕಲ್ ಹಾಗೂ ಬಿಡಿಭಾಗಗಳ ಒಟ್ಟು ಮೊತ್ತ 1,04,55,848 ರೂಪಾಯಿಗಳನ್ನು ಒಟ್ಟುಗೂಡಿಸಿ, ಇಲಾಖೆಯು ಈ ಯೋಜನೆಗಾಗಿ ಮಾಡಿರುವ ಒಟ್ಟಾರೆ ವೆಚ್ಚ 2,52,55,468-00 ರೂಪಾಯಿಗಳಾಗಿದೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 20T203217.674

ಟಿಕೆಟ್ ಕೇಳಿದ್ದಕ್ಕೆ ಬಟ್ಟೆ ಹರಿದುಕೊಂಡ ಯುವತಿ; TTE ವಿರುದ್ಧವೇ ದೂರು, ವಿಡಿಯೋ ವೈರಲ್!

by ಶಾಲಿನಿ ಕೆ. ಡಿ
September 20, 2026 - 8:33 pm
0

Untitled design 2026 09 20T200816.294

ಐಷಾರಾಮಿ ಕಾರು ವಿವಾದ: ಮೈಥಿಲಿ ಠಾಕೂರ್ ಪರ ನಿಂತ ಕಂಗನಾ

by ಶಾಲಿನಿ ಕೆ. ಡಿ
September 20, 2026 - 8:09 pm
0

Untitled design 2026 09 20T194512.242

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

by ಶಾಲಿನಿ ಕೆ. ಡಿ
September 20, 2026 - 7:45 pm
0

Untitled design 2026 09 20T192706.370

ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್

by ಶಾಲಿನಿ ಕೆ. ಡಿ
September 20, 2026 - 7:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T192706.370
    ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್
    September 20, 2026 | 0
  • Untitled design 2026 09 20T175452.311
    ನಕಲಿ ಔಷಧಿ ಮಾಫಿಯಾಗೆ ಬಿಗ್ ಶಾಕ್; 15 ಫಾರ್ಮಸಿಗಳಿಗೂ ನೋಟಿಸ್..ಲೈಸನ್ಸ್ ರದ್ದು
    September 20, 2026 | 0
  • Untitled design 2026 09 20T171119.389
    ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಚಿವ
    September 20, 2026 | 0
  • ಡೈವರ್ಟ್ (10)
    ಬಿಸಿಲಿನಿಂದ ಕಂಗೆಟ್ಟ ಬೆಂಗಳೂರಿಗೆ ವರುಣನ ಸಿಂಚನ: ಮುಂದಿನ ದಿನಗಳಲ್ಲೂ ಮಳೆ ಸಾಧ್ಯತೆ
    September 20, 2026 | 0
  • ಡೈವರ್ಟ್ (4)
    ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬೇಟೆ: ಒಂದೇ ಜೈಲಿನಲ್ಲಿ 334 ಫೋನ್‌ಗಳು ಪತ್ತೆ
    September 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version