ಡಿ. ಕೆ. ಶಿವಕುಮಾರ್.. ಕರ್ನಾಟಕ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡೋಕೆ ಕೌಂಟ್ಡೌನ್ ಶುರುವಾಗಿದೆ. ಎಲ್ಲರ ಚಿತ್ತ ಸಚಿವ ಸಂಪುಟದತ್ತ ನೆಟ್ಟಿದೆ. ಆದ್ರೀಗ ಕನ್ನಡ ಚಿತ್ರರಂಗದ ಜೊತೆ ಸಿಎಂ ಡಿಕೆಶಿಗೆ ಇರೋ ನಂಟು ಎಂಥದ್ದು..? ಕಲಾ ಸೇವೆಗಾಗಿ ಅವರು ಮಾಡ್ತಿರೋದಾದ್ರೂ ಏನು..? ಯಾವೆಲ್ಲಾ ಸ್ಯಾಂಡಲ್ವುಡ್ ಸ್ಟಾರ್ಸ್ ಅವರಿಗೆ ಕ್ಲೋಸ್ ಇದ್ದಾರೆ ಅನ್ನೋದನ್ನ ಡಿಟೈಲ್ಡ್ ಸ್ಟೋರಿ ಇಲ್ಲಿದೆ ನೋಡಿ…
- ರಾಜಕೀಯದ ಚಾಣಕ್ಯನಿಗೆ ಬಣ್ಣದ ಲೋಕದ ನಂಟು..!
- ಸಿನಿಮಾ ಟೆಂಟ್ನಿಂದ ಸಿಎಂ ಕುರ್ಚಿ.. ಡಿಕೆಶಿ ಲೈಫ್ ಸಖತ್ ಸಿನಿಮ್ಯಾಟಿಕ್
- ನಾಯಕ ನಟನಾಗಬೇಕಿದ್ದ ‘ಡಿಕೆಶಿ’ ರಾಜಕೀಯದ ಹೀರೋ ಆದ ಕಥೆ
- ಸಿನಿಮಾ ಪ್ರದರ್ಶಕನಿಂದ ರಾಜ್ಯದ ಅಧಿಪತಿಯ ತನಕ..!
ರಾಜ್ಯ ರಾಜಕೀಯದಲ್ಲಿ ಈಗ ಮಹಾ ಬದಲಾವಣೆಯ ಪರ್ವ ಶುರುವಾಗಿದೆ. ಇಷ್ಟು ದಿನ ಟ್ರಬಲ್ ಶೂಟರ್ ಆಗಿ ಅಬ್ಬರಿಸಿದ್ದ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಈಗ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿಕೊಳ್ಳೋಕೆ ಕೌಂಟ್ಡೌನ್ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ, ಪಕ್ಕದ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ಸಿಎಂ ಗದ್ದುಗೆ ಏರಿದ ಮಾದರಿಯಲ್ಲೇ, ಈಗ ಕರ್ನಾಟಕದಲ್ಲೂ ಸಿನಿಮಾ ರಂಗದ ಜೊತೆ ರಕ್ತಗತ ನಂಟು ಹೊಂದಿರುವ ನಾಯಕನಿಗೆ ಸಿಎಂ ಪಟ್ಟ ಸಿಗುತ್ತಿರೋದು ಇಡೀ ದೇಶದ ಗಮನ ಸೆಳೆದಿದೆ.
ಖಡಕ್ ಖಾದಿ ಬಟ್ಟೆ, ಕಣ್ಣಲ್ಲೇ ಕರಗಿಸುವ ಪವರ್, ನಡೆದಾಡಿದ್ರೆನೆ ಹೀರೊ ತರಹ ಇರೋ ಡಿ.ಕೆ. ಶಿವಕುಮಾರ್ಗೆ ರಾಜಕೀಯಕ್ಕೆ ಬರುವ ಮುನ್ನ ಬಣ್ಣದ ಲೋಕದಲ್ಲಿ ಮಿಂಚಬೇಕು ಅನ್ನೋ ಬಲವಾದ ಆಸೆ ಇತ್ತು. ಕಾಲೇಜು ದಿನಗಳಲ್ಲಿ ಹ್ಯಾಂಡ್ಸಮ್ ಆಗಿದ್ದ ಇವರು ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ಎಂಟ್ರಿ ಕೊಡಲು ಸ್ಕೆಚ್ ಹಾಕಿದ್ದರು. ಆದರೆ ಕಾಲೇಜು ದಿನಗಳಲ್ಲೇ ಎನ್.ಎಸ್.ಯು.ಐ ಮೂಲಕ ರಾಜಕೀಯದ ಚದುರಂಗದಾಟಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಬೆಳ್ಳಿತೆರೆಯ ಹೀರೋ ಆಗಬೇಕಾಗಿದ್ದವರು, ವಿಧಾನಸೌಧದ ಅಪ್ರತಿಮ ಹೀರೊ ಆಗಿ ಹೊರಹೊಮ್ಮಿದರು.
ಡಿ.ಕೆ. ಶಿವಕುಮಾರ್ ಅವರು ರಾಜಕೀಯಕ್ಕೆ ಬರುವ ಮುನ್ನ ಕೇವಲ ಸಿನಿಮಾ ಪ್ರೇಮಿ ಮಾತ್ರವಲ್ಲ, ಒಬ್ಬ ಸಿನಿಮಾ ಪ್ರದರ್ಶಕನಾಗಿದ್ದರು. ಎಸ್, 1980 ರ ದಶಕದಲ್ಲಿ ತಮ್ಮ ಹುಟ್ಟೂರಾದ ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ಸ್ವತಃ ತಾವೇ ಮುಂದೆ ನಿಂತು ಒಂದು ಭರ್ಜರಿ ಟೂರಿಂಗ್ ಟೆಂಟ್ ನಡೆಸುತ್ತಿದ್ದರು. ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿಯವರ ಮೇಲಿದ್ದ ಅತಿಯಾದ ಅಭಿಮಾನಕ್ಕೆ ಆ ಟೂರಿಂಗ್ ಟಾಕೀಸ್ಗೆ ‘ಇಂದಿರಾಜೀ ಟೂರಿಂಗ್ ಟೆಂಟ್’ ಅಂತಾನೇ ಹೆಸರಿಟ್ಟಿದ್ದರು.
1986ರಲ್ಲಿ ಹೆಚ್.ಡಿ. ದೇವೇಗೌಡರ ವಿರುದ್ಧ ಚುನಾವಣಾ ಕಣಕ್ಕಿಳಿದು ಸೋತಾಗಲೂ ಡಿ.ಕೆ. ಶಿವಕುಮಾರ್ ತಮ್ಮ ಸಿನಿಮಾ ಪ್ರದರ್ಶನದ ಕಾಯಕವನ್ನು ನಿಲ್ಲಿಸಲಿಲ್ಲ. ಸೋಲಿನ ಆಘಾತದ ನಡುವೆಯೂ ಹಳ್ಳಿ ಹಳ್ಳಿಗಳಲ್ಲಿ ಟೂರಿಂಗ್ ಟಾಕೀಸ್ ಮೂಲಕ ಜನರಿಗೆ ಸಿನಿಮಾ ತೋರಿಸುತ್ತಾ, ಜನರ ಜೊತೆ ಕನೆಕ್ಟ್ ಆಗಿದ್ದರು. ಅಂದು ಹಳ್ಳಿಯಲ್ಲಿ ಟೆಂಟ್ ಸಿನಿಮಾ ನಡೆಸುತ್ತಿದ್ದ ವ್ಯಕ್ತಿ ಇಂದು ಇಡೀ ಕರ್ನಾಟಕ ರಾಜ್ಯವನ್ನೇ ಮುನ್ನಡೆಸುವ ಮುಖ್ಯಮಂತ್ರಿಯಾಗುತ್ತಿರೋದು ನಿಜಕ್ಕೂ ರೋಚಕ ಇತಿಹಾಸ.
ಡಿ.ಕೆ. ಶಿವಕುಮಾರ್ ಅವರ ಕಾಲೇಜು ಲೈಫ್ ಸಖತ್ ರಂಗಿನಿಂದ ಕೂಡಿತ್ತು. ಬೆಂಗಳೂರಿನ ಪ್ರತಿಷ್ಠಿತ ಆರ್ಸಿ ಕಾಲೇಜಿನಲ್ಲಿ ಓದುತ್ತಿದ್ದಾಗ ಇವರ ಬೆಂಚ್ ಮೇಟ್ಸ್ ಯಾರು ಗೊತ್ತಾ? ಒಬ್ಬರು ಸ್ಯಾಂಡಲ್ವುಡ್ನ ಅಪ್ರತಿಮ ಮಾಂತ್ರಿಕ, ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮತ್ತೊಬ್ಬರು ಕಚಗುಳಿ ಇಡುವ ನಟ, ನಿರ್ದೇಶಕ ಸಿಹಿ ಕಹಿ ಚಂದ್ರು. ಹೌದು, ರವಿಚಂದ್ರನ್, ಸಿಹಿ ಕಹಿ ಚಂದ್ರು ಮತ್ತು ಡಿ.ಕೆ. ಶಿವಕುಮಾರ್ ಮೂವರೂ ಒಂದೇ ಕ್ಲಾಸ್ನ ಸಹಪಾಠಿಗಳು. ಈ ಬಗ್ಗೆ ವೀಕೆಂಡ್ ವಿಥ್ ರಮೇಶ್ ನಲ್ಲಿ ಡಿಕೆ ಮಾತನಾಡಿದ್ರು.
- ಕಾಲೇಜು ಬೆಂಚ್ಮೇಟ್ಸ್ ರವಿಚಂದ್ರನ್ – ಚಂದ್ರು.. ಡಿಕೆಶಿ ಹಳೆಯ ದೋಸ್ತರು..!
- ಸ್ಯಾಂಡಲ್ವುಡ್ನಿಂದ ವಿಧಾನಸೌಧದವರೆಗೆ.. ಡಿಕೆಶಿ ಹೆಸರು ಕೇಳಿದ್ರೆ ಎಲ್ಲೆಡೆ ಗೌರವ
- ದೊಡ್ಮನೆ ಜೊತೆ ನಂಟು.. ಅಪ್ಪು ಮನೆಗೆ ರಾಹುಲ್ ಎಂಟ್ರಿ
- ಸಿನಿಮಾ ಸ್ಟಾರ್ಗಳ ಮೆಚ್ಚಿನ ಪೊಲಿಟಿಷಿಯನ್ ಡಿಕೆಶಿ..!
ಕಾಲೇಜು ದಿನಗಳ ಆ ಸ್ನೇಹ ಇಂದಿಗೂ ಹಸಿರಾಗಿದೆ. ಇತ್ತೀಚೆಗೆ ಮದ್ದೂರು ಉತ್ಸವದ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಚಿತ್ರರಂಗದ ಏರಿಳಿತ ಹಾಗೂ ಕಷ್ಟದ ದಿನಗಳ ಬಗ್ಗೆ ಭಾವುಕರಾಗಿ ಮಾತನಾಡಿದಾಗ, ಮುಂಭಾಗದಲ್ಲಿ ಕುಳಿತಿದ್ದ ಡಿ.ಕೆ. ಶಿವಕುಮಾರ್ ಭಾವುಕರಾದ್ರು. ಇಂದಿಗೂ ಇವರಿಬ್ಬರ ಭೇಟಿಯಾದ್ರೆ ಹಳೆಯ ಕಾಲೇಜು ದಿನಗಳ ನೆನಪುಗಳು ಮರುಕಳಿಸುತ್ತವೆ. ಇನ್ನು ಸಿಹಿ ಕಹಿ ಚಂದ್ರು ಅವರಂತೂ ಡಿ.ಕೆ. ಶಿವಕುಮಾರ್ ಅವರ ಪಕ್ಕಾ ಲೋಕಲ್ ದೋಸ್ತ್. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಚಂದ್ರು ಈ ರಹಸ್ಯ ಬಿಚ್ಚಿಟ್ಟಿದ್ದರು. “ನಮಗೆ ಲೈಫ್ನಲ್ಲಿ ಯಾವುದೇ ಕಷ್ಟ ಬಂದ್ರೂ, ಯಾರು ಕೈ ಬಿಟ್ರೂ ಬ್ಯಾಕಪ್ಗೆ ನಮ್ಮ ಶಿವಕುಮಾರ್ ಇದ್ದಾನೆ ಅನ್ನೋ ದೊಡ್ಡ ಧೈರ್ಯ ಇರುತ್ತಿತ್ತು” ಎಂದು ಕಾಲೇಜು ದಿನಗಳಲ್ಲಿ ಡಿಕೆಶಿ ತೋರಿಸುತ್ತಿದ್ದ ಲೀಡರ್ಶಿಪ್ ಕ್ವಾಲಿಟಿಯನ್ನು ನೆನೆದಿದ್ದರು.
ಕರ್ನಾಟಕದ ಸಾಂಸ್ಕೃತಿಕ ಐಕಾನ್ ಡಾ. ರಾಜ್ಕುಮಾರ್ ಕುಟುಂಬದ ಜೊತೆ ಡಿ.ಕೆ. ಶಿವಕುಮಾರ್ ದಶಕಗಳ ಕೌಟುಂಬಿಕ ಒಡನಾಟ ಹೊಂದಿದ್ದಾರೆ. ಅದರಲ್ಲೂ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಡಿಕೆ ಅವರಿಗೆ ಅತ್ಯಂತ ಆತ್ಮೀಯರು. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಗೀತಾ ಮತ್ತು ಶಿವಣ್ಣ ಖುದ್ದಾಗಿ ಡಿಕೆಶಿ ಪರ ಪ್ರಚಾರಕ್ಕೆ ಧುಮುಕಿದ್ದು ಇವರ ಗಟ್ಟಿ ಬಾಂಡಿಂಗ್ಗೆ ಸಾಕ್ಷಿ.
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಹೊಂದಿದಾಗ ಇಡೀ ಚಿತ್ರರಂಗಕ್ಕೆ ಬೆಂಬಲವಾಗಿ ನಿಂತ ನಾಯಕ ಡಿ.ಕೆ. ಶಿವಕುಮಾರ್. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಖುದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಸದಾಶಿವನಗರದ ಅಪ್ಪು ನಿವಾಸಕ್ಕೆ ಕರೆತಂದು, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಧೈರ್ಯ ತುಂಬುವಂತೆ ಮಾಡಿದ್ದು ಇದೇ ಡಿ.ಕೆ. ಶಿವಕುಮಾರ್. ಸಿನಿಮಾ ಮತ್ತು ರಾಜಕೀಯದ ಪವರ್ ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡೋ ಕಲೆ ಡಿಕ್ಷಿಗೆ ಸಿದ್ದಿಸಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲಸಡದ3ಱಡ
ಟೂರಿಂಗ್ ಟೆಂಟ್ನಿಂದ ಶುರುವಾದ ಸಿನಿಮಾ ನಂಟು ಈಗ ಹೈಟೆಕ್ ಮಲ್ಟಿಪ್ಲೆಕ್ಸ್ಗಳವರೆಗೆ ಬೆಳೆದು ನಿಂತಿದೆ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿರುವ ಶಾಪಿಂಗ್ ಮಾಲ್ಗಳು ಹಾಗೂ ಥಿಯೇಟರ್ಗಳ ಬಿಸಿನೆಸ್ ಜಾಲದ ಹಿಂದೆ ಡಿ.ಕೆ. ಶಿವಕುಮಾರ್ ಅವರ ಕುಟುಂಬದ ಹೂಡಿಕೆ ಇದೆ ಎನ್ನಲಾಗುತ್ತದೆ. ಉದ್ಯಮಿಯಾಗಿ ಚಿತ್ರಮಂದಿರಗಳ ಆಧುನೀಕರಣಕ್ಕೆ ಮತ್ತು ಸಿನಿಮಾ ವಿತರಣಾ ಜಾಲಕ್ಕೆ ಇವರ ಆಪ್ತ ವಲಯ ದೊಡ್ಡ ಮಟ್ಟದ ಕೊಡುಗೆ ನೀಡಿದೆ.





