• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರವಿಚಂದ್ರನ್ ವಿರುದ್ಧ ಅ**ತ್ಯಾಚಾರ ಆರೋಪ..ನಟಿ ಬಿಂದಿಯಾ ಕಣ್ಣೀರು

ಮಾನನಷ್ಟ ಮೊಕದ್ದಮೆ.. ಕೋರ್ಟ್ ಮೆಟ್ಟಿಲೇರಿದ್ದ ಹಳ್ಳಿಮೇಷ್ಟ್ರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 28, 2026 - 2:40 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0

ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿ, ಅದಕ್ಕೊಂದು ಹೊಸ ಆಯಾಮ ಕೊಟ್ಟು, ಟ್ರೆಂಡ್ ಸೆಟ್ಟರ್ ಅನಿಸಿಕೊಂಡ ಗರಿಮೆ ಕ್ರೇಜಿಸ್ಟಾರ್ ರವಿಚಂದ್ರನ್‌‌‌ಗೆ ಸಲ್ಲುತ್ತೆ. ಶಾಂತಿ ಕ್ರಾಂತಿ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾದ ಬಳಿಕ ಹಳ್ಳಿಮೇಷ್ಟ್ರು ಆಗಿ ಎಲ್ಲರ ದಿಲ್ ದೋಚಿದ ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬರುತ್ತೆ. ಚಿತ್ರದ ನಾಯಕನಟಿಯೇ ಅಂಥದ್ದೊಂದು ವಿವಾದಕ್ಕೆ ನಾಂದಿ ಹಾಡ್ತಾರೆ. ಆದ್ರೀಗ ಬರೋಬ್ಬರಿ 34 ವರ್ಷಗಳ ನಂತ್ರ ಬೇಷರತ್ ಕ್ಷಮೆ ಯಾಚಿಸಿದ್ದಾರೆ ನಟಿ ಬಿಂದಿಯಾ. ಕಣ್ಣೀರು ಹಾಕುತ್ತಾ, ಕ್ರೇಜಿಸ್ಟಾರ್‌‌ನ ಅವಕಾಶಕ್ಕಾಗಿ ಗೋಗರೆಯುತ್ತಿದ್ದಾರೆ. ಹಳ್ಳಿಮೇಷ್ಟ್ರು ಕಾಂಟ್ರವರ್ಸಿ ಕುರಿತ ಕಂಪ್ಲೀಟ್ ಕಥೆ ಇಲ್ಲಿದೆ.

  • ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪ.. ನಟಿ ಕಣ್ಣೀರು
  • ಮಾನನಷ್ಟ ಮೊಕದ್ದಮೆ.. ಕೋರ್ಟ್ ಮೆಟ್ಟಿಲೇರಿದ್ದ ಹಳ್ಳಿಮೇಷ್ಟ್ರು
  • 34 ವರ್ಷ ಬಳಿಕ ಮುಂಬೈ ನಟಿ ಬಿಂದಿಯಾ ಬಹಿರಂಗ ಕ್ಷಮೆ
  • ಅಂದು ತಪ್ಪು ಮಾಡಿ.. ಇಂದು ಗೋಗರೆಯುತ್ತಿರೋ ನಾಯಕಿ

ಬಣ್ಣದ ಲೋಕ ಅಂದ್ಮೇಲೆ ಅಲ್ಲಿ ಅವಮಾನ, ಅಪಮಾನಗಳು ಸರ್ವೇ ಸಾಮಾನ್ಯ. ವಿವಾದಗಳು ಕೂಡ ಬೋನಸ್ ಆಗಿ ಇದ್ದೇ ಇರುತ್ತವೆ. ನಿಂದನೆಗಳು, ಮಾನ ಹಾನಿ ಆಗುವ ವಿಚಾರಗಳಿಗಂತೂ ಕೊರತೆಯೇ ಇರಲ್ಲ. ಬಹುತೇಕ ಸಿನಿಮಾಗಳು ಇವುಗಳ ಹೊರತಾಗಿ ರೂಪುಗೊಳ್ಳೋದು ವಿರಳ. ಆದ್ರೆ ಕನ್ನಡ ಚಿತ್ರರಂಗಕ್ಕೆ 80, 90ರ ದಶಕದಲ್ಲಿ ಹೊಸ ಆಯಾಮ ಕೊಟ್ಟು, ಅದು ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದ ಗರಿಮೆ, ಹಿರಿಮೆ ಕ್ರೇಜಿಸ್ಟಾರ್ ರವಿಚಂದ್ರನ್‌‌ಗಿದೆ.

RelatedPosts

He will be the Chief Minister ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಘೋಷಣೆ

“ಕೊನೆಯ ಉಸಿರಿರುವವರೆಗೂ ಕೋಮುವಾದದ ವಿರುದ್ಧ ಹೋರಾಟ!” ಸಿದ್ದರಾಮಯ್ಯ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ADVERTISEMENT
ADVERTISEMENT

70ರ ದಶಕದಲ್ಲೇ ಕನ್ನಡ ಫಿಲ್ಮ್ ಚೇಂಬರ್‌‌ನ ಅಧ್ಯಕ್ಷರಾಗಿದ್ದ ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ, ತಮ್ಮ ಶ್ರೀ ಈಶ್ವರಿ ಪ್ರೊಡಕ್ಷನ್ಸ್‌‌ ಬ್ಯಾನರ್‌‌ನಡಿ ಸಾಕಷ್ಟು ಸಿನಿಮಾಗಳನ್ನ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ರು. ಆ ಲೆಗಸಿಯನ್ನ ಮುಂದುವರೆಸಿದ್ದೇ ಅವ್ರ ಮಗ ರವಿಚಂದ್ರನ್. ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಸಂಗೀತ ಸಂಯೋಜಕ.. ಹೀಗೆ ಚಿತ್ರರಂಗದ ಎಲ್ಲಾ ಆಯಾಮಗಳಲ್ಲಿ ಗುರ್ತಿಸಿಕೊಂಡವರು ಕ್ರೇಜಿಸ್ಟಾರ್.

ಪ್ರೇಮಲೋಕ, ರಣಧೀರ, ಅಂಜದ ಗಂಡು, ಯುದ್ಧಕಾಂಡ, ಯುಗ ಪುರುಷ, ಕಿಂದರಿ ಜೋಗಿ, ರಾಮಾಚಾರಿ ಅಂತಹ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ರವಿಚಂದ್ರನ್, ಶಾಂತಿ ಕ್ರಾಂತಿ ಅನ್ನೋ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ. ಆ ಮಹತ್ವದ ಪ್ರಯೋಗ ಕಂಡು ಇಡೀ ಭಾರತೀಯ ಚಿತ್ರರಂಗ ನಿಬ್ಬೆರಗಾಗುತ್ತೆ. ಅದಾದ ಬಳಿಕ ಅವರು ನಟಿಸಿದ ಸಿನಿಮಾನೇ ಹಳ್ಳಿಮೇಷ್ಟ್ರು.

ಈ ಸಿನಿಮಾದ ನಾಯಕನಟಿ ಬಿಂದಿಯಾ ನಟ ರವಿಚಂದ್ರನ್ ಮೇಲೆ ಏಕ್ದಮ್ ಅತ್ಯಾಚಾರ ಆರೋಪ ಮಾಡಿ ಬಿಡ್ತಾರೆ. ಅದು ಬಹುದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದಲ್ಲದೆ, ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಏರುತ್ತೆ. ಆರೋಪ ಮಾಡಿದ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಮೂಲಕ ಕಾನೂನು ಹೋರಾಟ ನಡೆಸ್ತಾರೆ ರವಿಮಾಮ. ಆದ್ರೀಗ ಅದೇ ನಟಿಮಣಿ ಬಿಂದಿಯಾ ಬರೋಬ್ಬರಿ 34 ವರ್ಷಗಳ ನಂತ್ರ ಹಿರಿಯ ಪತ್ರಕರ್ತ ಕಮ್ ನಿರ್ದೇಶಕ ರಘುರಾಮ್ ತಮ್ಮ ಕನಸುಗಳ ಕಾರ್ಖಾನೆ ಯೂಟ್ಯೂಬ್ ವಾಹಿನಿಗೆ ನಡೆಸಿರೋ ಸಂದರ್ಶನದಲ್ಲಿ ಕಣ್ಣೀರು ಹಾಕಿಕೊಂಡು ಕ್ಷಮೆ ಯಾಚಿಸಿದ್ದಾರೆ. ನಟ ರವಿಚಂದ್ರನ್ ಹಾಗೂ ಅವ್ರ ಅಸಂಖ್ಯಾತ ಅಭಿಮಾನಿಗಳಿಗೆ ಬೇಷರತ್ ಕ್ಷಮೆ ಕೋರಿದ್ದಾರೆ.

ನಾನು ಸೌತ್ ಸಿನಿಮಾಗಳಿಗೆ ಹೊಸಬಳಾಗಿ ಬಂದೆ. ನನ್ನನ್ನ ಹಾಗೆಯೇ ಟ್ರೀಟ್ ಮಾಡಿದ್ರು. ಆದ್ರೆ ರವಿ ಸರ್ ನನ್ನ ಬೆಂಬಲಕ್ಕೆ ನಿಂತರು. ಹೇಗೆ ನಟಿಸಬೇಕು, ಡೈಲಾಗ್ ಹೇಳಬೇಕು ಅಂತ ಹೇಳಿಕೊಟ್ರು. ನನ್ನ ನಟನೆ ಅವರಿಗೆ ಇಷ್ಟವಾಯಿತು. ಆದ್ರೆ ಕೊನೆ ಕೊನೆಗೆ ಎಲ್ಲವೂ ಸರಿ ಹೋಗಲಿಲ್ಲ. ಮ್ಯಾಗಜಿನ್‌‌‌ವೊಂದರಲ್ಲಿ ನಾನೇನೋ ಹೇಳಿದ್ದೆ.. ಆದ್ರೆ ಆಕೆ ಬರೆದದ್ದು ಮತ್ತೇನನ್ನೋ. ಫೈನಲಿ ದೂರು ದಾಖಲಾಯ್ತು. ತುಂಬಾ ಬೇಸರ ಆಯ್ತು ಎಂದಿದ್ದಾರೆ.

ಆ ಮ್ಯಾಗಜಿನ್ ಪತ್ರಕರ್ತೆ ಮಾಡಿದ ತಪ್ಪಿಗೆ ಅಷ್ಟು ದೊಡ್ಡ ವಿವಾದ ಆಯ್ತು. ರವಿಚಂದ್ರನ್ ಅವರಿಗೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಅವರು ನನಗೆ ಅಷ್ಟು ದೊಡ್ಡ ಬ್ರೇಕ್ ಕೊಟ್ಟರು. ಅಂದು ಕೇಸ್ ಆಗಿ ದೊಡ್ಡ ವಿವಾದ ಆಯ್ತು. ಆ ರೀತಿ ಆಗಬಾರದಿತ್ತು. ಇಂದಿಗೂ ರವಿ ಸರ್ ಚಿತ್ರದಲ್ಲಿ ತಾಯಿಯೋ, ಅಜ್ಜಿಯ ಪಾತ್ರವೋ ಕೊಟ್ರೆ ನಟಿಸೋಕೆ ಸಿದ್ಧ. ಸಂಭಾವನೆ ಕೂಡ ಬೇಡ. ಪ್ಲೀಸ್ ಒಂದು ಅವಕಾಶ ಕೊಡಿ ರವಿ ಸರ್ ಅಂತ ಗೋಗರೆದಿದ್ದಾರೆ.

ಆಂದಹಾಗೆ ಆ ಘಟನೆ ಬಳಿಕ ರವಿಚಂದ್ರನ್ ಬಳಿ ಮಾತನಾಡೋಕೆ ಅವಕಾಶ ಸಿಗಲೇ ಇಲ್ಲ. ಕೋರ್ಟ್‌‌ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು. ಬುದ್ಧಿ ಇಲ್ಲದೆ ನಡೆದುಕೊಂಡುಬಿಟ್ಟೆ. ಪ್ರಬುದ್ಧತೆಯೇ ಇರಲಿಲ್ಲ ಎಂದಿದ್ದಾರೆ ಹಳ್ಳಿಮೇಷ್ಟ್ರು ನಾಯಕನಟಿ ಬಿಂದಿಯಾ.

ಅಂದಹಾಗೆ ನಟಿ ಬಿಂದಿಯಾ ಮಾಡಿದ್ದ ಅತ್ಯಾಚಾರ ಆರೋಪ ಕೇಸ್‌ನಲ್ಲಿ ರವಿಚಂದ್ರನ್ ಅವರೇ ಗೆಲ್ತಾರೆ. ಯಾಕಂದ್ರೆ ಬಿಂದಿಯಾ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ಕೋರ್ಟ್‌‌ನಲ್ಲಿ ಅವರನ್ನ ನೋಡಿ ಸಂಕಟವಾಯ್ತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡಿಲ್ಲ. ಅವರ ಮೇಲೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಯ್ತು ಅಂತ ಕಣ್ಣೀರು ಹಾಕಿದ್ದಾರೆ ಬಿಂದಿಯಾ.

  • 1 ರೂಪಾಯಿ ಮಾನನಷ್ಟ.. ನಟಿಗೆ ಬುದ್ಧಿ ಕಲಿಸಿದ ಮೇಷ್ಟ್ರು..!!
  • ಕೋರ್ಟ್‌‌‌ನಲ್ಲೇ ಕ್ಷಮೆ ಕೇಳಿದ್ದ ನಟಿ.. ಖುಲಾಸೆ ಆಗಿತ್ತು ಕೇಸ್

ತಪ್ಪೇ ಮಾಡದ ರವಿಚಂದ್ರನ್ ಮೇಲೆ ಈ ರೀತಿಯ ಮಹತ್ವದ ಆರೋಪ ಕೇಳಿಬಂದ್ರೆ ಸುಮ್ಮನಿರೋಕೆ ಸಾಧ್ಯವೇ..? ಮುಂಬೈ ಮೂಲದ ಆ ನಟಿಗೆ ಬುದ್ಧಿ ಕಲಿಸಲೇಬೇಕು ಅಂತ ಕೋರ್ಟ್ ಮೆಟ್ಟಿಲೇರಿದ್ರು ರವಿಮಾಮ. ಒಂದೇ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆಯನ್ನ ದಾಖಲಿಸಿದ್ರು. ಅದರಂತೆ ಕೋರ್ಟ್‌‌ನಲ್ಲಿ ಬಂದು ರವಿಚಂದ್ರನ್ ತಪ್ಪು ಮಾಡಿಲ್ಲ. ನಾನೇ ಸುಳ್ಳು ಹೇಳಿದ್ದೇನೆ ಅಂತ ತಪ್ಪೊಪ್ಪಿಕೊಂಡು, ಕ್ಷಮೆ ಕೂಡ ಕೇಳಿದ್ರು ಬಿಂದಿಯಾ. ಆಗ ಆ ಮಾನನಷ್ಟ ಮೊಕದ್ದಮೆ ಕೇಸ್ ಅಂದೇ ಖುಲಾಸೆ ಕೂಡ ಆಗಿತ್ತು.

ಕಾನೂನಿನಡಿ ಕಳಂಕ ಮುಕ್ತರಾಗಿದ್ರು ಕ್ರೇಜಿಸ್ಟಾರ್. ಆದ್ರೆ ಅಂದಿನಿಂದ ಇಂದಿನ ತನಕ ಸಾಕಷ್ಟು ಮಂದಿಗೆ ರವಿಚಂದ್ರನ್ ಹಳ್ಳಿಮೇಷ್ಟ್ರು ಸಿನಿಮಾದ ಆ ವಿವಾದದ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಅದಕ್ಕೀಗ ಅಧಿಕೃತವಾಗಿ ಬ್ರೇಕ್ ಬಿದ್ದಿದೆ. ಸ್ವತಃ ಬಿಂದಿಯಾನೇ ಬಹಿರಂಗವಾಗಿ ತಮ್ಮ ತಪ್ಪನ ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಿದ್ದಾರೆ. ಟ್ರೆಂಡ್ ಸೆಟ್ಟರ್ ರವಿಮಾಮ ಲೆಜೆಂಡ್ ಹಾಗೂ ಜೆಮ್ ಆಫ್ ಎ ಪರ್ಸನ್ ಅನ್ನೋದು ಪ್ರೂವ್ ಆಗಿದೆ. ಇದು ಕನ್ನಡಿಗರಾದ ನಾವು ನಿಜಕ್ಕೂ ಹೆಮ್ಮೆ ಪಡುವ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 05 28T165549.961

ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಗುಡ್ ನ್ಯೂಸ್! 8ನೇ ವೇತನ ಆಯೋಗ ಕುರಿತು ದೊಡ್ಡ ಅಪ್‌ಡೇಟ್

by ಶ್ರೀದೇವಿ ಬಿ. ವೈ
May 28, 2026 - 4:56 pm
0

BeFunky collage 2026 05 28T162652.291

He will be the Chief Minister ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಘೋಷಣೆ

by ಶ್ರೀದೇವಿ ಬಿ. ವೈ
May 28, 2026 - 4:27 pm
0

BeFunky collage 2026 05 28T160600.891

“ಕೊನೆಯ ಉಸಿರಿರುವವರೆಗೂ ಕೋಮುವಾದದ ವಿರುದ್ಧ ಹೋರಾಟ!” ಸಿದ್ದರಾಮಯ್ಯ

by ಶ್ರೀದೇವಿ ಬಿ. ವೈ
May 28, 2026 - 4:06 pm
0

BeFunky collage 2026 05 28T151959.274

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ

by ಶ್ರೀದೇವಿ ಬಿ. ವೈ
May 28, 2026 - 3:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 28T162652.291
    He will be the Chief Minister ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಘೋಷಣೆ
    May 28, 2026 | 0
  • BeFunky collage 2026 05 28T160600.891
    “ಕೊನೆಯ ಉಸಿರಿರುವವರೆಗೂ ಕೋಮುವಾದದ ವಿರುದ್ಧ ಹೋರಾಟ!” ಸಿದ್ದರಾಮಯ್ಯ
    May 28, 2026 | 0
  • BeFunky collage 2026 05 28T151959.274
    ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ
    May 28, 2026 | 0
  • Untitled design 2026 05 28T150118.883
    ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
    May 28, 2026 | 0
  • Untitled design 2026 05 28T140449.852
    ಸಿಎಂ ಆಗಿ ಪದಗ್ರಹಣಕ್ಕೆ ಡಿಕೆಶಿ ರೆಡಿ: ಅಜ್ಜಯ್ಯನ ಬಳಿ ಮುಹೂರ್ತ ಕೇಳಲಿರುವ ಡಿ.ಕೆ ಶಿವಕುಮಾರ್
    May 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version