ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದು ಗೊತ್ತೇಯಿದೆ. ಇದೀಗ ಬಿಗ್ ಬಿ ಕುಟುಂಬದ ಮತ್ತೊಬ್ಬ ಹೀರೋ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಅವ್ರಿಗೆ ಚಂದನವನಕ್ಕೆ ರೆಡ್ ಕಾರ್ಪೆಟ್ ಹಾಸಿರೋದು ಕನ್ನಡದ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ಗಳಲ್ಲಿ ಒಬ್ಬರಾದ ಸಿಂಪಲ್ ಸುನಿ. ಇಷ್ಟಕ್ಕೂ ಆ ಚಿತ್ರ ಯಾವುದು..? ಯಾರು ಆ ಬಚ್ಚನ್ ಫ್ಯಾಮಿಲಿ ಸ್ಟಾರ್ ಅಂತೀರಾ..?
ಕಳೆದ ವರ್ಷ ಗುಬ್ಬಿ ಎಂಎಲ್ಎ ಮಗ ದುಷ್ಯಂತ್ರನ್ನ ಬಣ್ಣದಲೋಕಕ್ಕೆ ಇಂಟ್ರಡ್ಯೂಸ್ ಮಾಡೋ ಮೂಲಕ ಗತವೈಭವ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಮೂವಿ ನೀಡಿದ್ರು ಕನ್ನಡದ ಸಕ್ಸಸ್ಫುಲ್ ಡೈರೆಕ್ಟರ್ ಸಿಂಪಲ್ ಸುನಿ. ಇದೀಗ ಈ ವರ್ಷ ಈಗಾಗ್ಲೇ ಶೀಲಮ್ ಅನ್ನೋ ಮತ್ತೊಬ್ಬ ತನ್ನದೇ ಗರಡಿಯಲ್ಲಿ ಪಳಗಿದ್ದ ಕೋ ಡೈರೆಕ್ಟರ್ನ ಹೀರೋ ಮಾಡೋಕೆ ಮೋಡ ಕವಿದ ವಾತಾವರಣ ಚಿತ್ರ ಡೈರೆಕ್ಟ್ ಮಾಡಿದ್ದಾರೆ ಸುನಿ. ಆ ಸಿನಿಮಾ ಸದ್ಯದಲ್ಲೇ ತೆರೆಗೆ ಕೂಡ ಬರ್ತಿದೆ.

ಸ್ಯಾಂಡಲ್ವುಡ್ಗೆ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ
ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಕುನಾಲ್ ಕಪೂರ್..!
ಆದ್ರೀಗ ಆ ಮೋಡ ಕವಿದ ವಾತಾವರಣ ಈ ಮಾನ್ಸೂನ್ ಶುಭಾರಂಭದಲ್ಲಿ ತೆರೆಗಪ್ಪಳಿಸೋಕೆ ಮೊದಲೇ ಮತ್ತೊಂದು ಮೆಗಾ ಪ್ರಾಜೆಕ್ಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ಲಂಬೋದರ 2.ಓ ಸಿನಿಮಾ. ಯೆಸ್.. ಅನಿಲ್ ಶೆಟ್ಟಿ ನಟನೆಯ ಈ ಸೈನ್ಸ್ ಫಿಕ್ಷನ್, ಸೋಶಿಯಲ್ ಥ್ರಿಲ್ಲರ್ ಮೂವಿಯ ಶೂಟಿಂಗ್ ಭರದಿಂದ ಸಾಗ್ತಿದ್ದು, ಬಾಲಿವುಡ್ ಅಂಗಳದಿಂದ ಮತ್ತೊಬ್ಬ ಸ್ಟಾರ್ ಶೂಟಿಂಗ್ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ.

ಲಂಬೋದರ 2.ಓ ಚಿತ್ರತಂಡಕ್ಕೆ ಹೊಸದಾಗಿ ಸೇರಿಕೊಂಡಿರೋ ನಟ ಕುನಾಲ್ ಕಪೂರ್. ಯೆಸ್.. ಅಮಿತಾಬ್ ಬಚ್ಚನ್ ಕುಟುಂಬದ ಕುಡಿ ಕುನಾಲ್, ಈಗಾಗ್ಲೇ ಡಾನ್-2, ರಂಗ್ ದೇ ಬಸಂತಿ, ವೀರಂ, ಡಿಯರ್ ಜಿಂದಗಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸೋ ಮೂಲಕ ಪ್ರತಿಭಾವಂತ ಕಲಾವಿದನಾಗಿ ಗುರ್ತಿಸಿಕೊಂಡಿದ್ದಾರೆ. ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಸಹೋದರನ ಅಳಿಯ ಆಗಿರೋ ಕುನಾಲ್, ಕನ್ನಡಕ್ಕೆ ಬಂದಿರೋದು ಖುಷಿಯ ವಿಚಾರ. ಅವರಿಗೆ ರೆಡ್ ಕಾರ್ಪೆಟ್ ಹಾಸಿರೋದು ನಮ್ಮ ಸಿಂಪಲ್ ಸುನಿ.

ಅನಿಲ್ ಶೆಟ್ಟಿಯ ಸೈನ್ಸ್ ಫಿಕ್ಷನ್ ಸಿನಿಮಾ ಲಂಬೋದರ 2.O
ಅಂದು ಬಿಗ್ ಬಿ ಬಚ್ಚನ್..ಇಂದು ಕುನಾಲ್ ಕಪೂರ್ ಎಂಟ್ರಿ
ಅಂದು ಅಮೃತಧಾರೆ ಸಿನಿಮಾಗಾಗಿ ಅಮಿತಾಬ್ ಬಚ್ಚನ್ ಚಂದನವನಕ್ಕೆ ಬಂದಿದ್ರು. ಇದೀಗ ಅವರ ಕುಟುಂಬದ ಕುನಾಲ್ ಕಪೂರ್ ಬಂದಿರೋದು ವಿಶೇಷ. ಲಂಬೋದರ 2.0 ಇಂದಿನ ಸಾಮಾಜಿಕ ಜಾಲತಾಣಗಳ ಪ್ರಭಾವದಲ್ಲಿ ಬದುಕುತ್ತಿರುವ ಯುವ ಜನಾಂಗದ ಗೊಂದಲಭರಿತ ಜೀವನವನ್ನ ಅನ್ವೇಷಿಸುವ ಕಥೆಯನ್ನು ಹೊಂದಿದೆ. ಕೃತಕ ಬುದ್ಧಿ- AI ಜಗತ್ತಿನಲ್ಲಿ ಸಂತೋಷ, ಸಾಮಾಜಿಕ ಮಾನ್ಯತೆ, ಏಕಾಂತ, ಡಿಜಿಟಲ್ ಅಡಿಕ್ಷನ್ ಹಾಗೂ ನಿಯಂತ್ರಣದಂತಹ ಸಮಕಾಲೀನ ವಿಚಾರಗಳನ್ನ ಒಳಗೊಂಡಿರಲಿದೆ ಈ ಚಿತ್ರ.

ಅನಿಲ್ ಶೆಟ್ಟಿಗೆ ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಥಿಯೇಟರ್ಗೆ ಬರಲಿದೆಯಂತೆ ಲಂಬೋದರ 2.ಓ. ಚಿತ್ರಕ್ಕೆ ಸಂತೋಷ್ ರೈ ಪತಾಜೆ ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ ಇರಲಿದೆ.





