ಯಶಸ್ವೀ ಮೂರನೇ ವಾರದತ್ತ ಮುನ್ನುಗ್ಗುತ್ತಿರೋ ಕೆಡಿ ಸಿನಿಮಾದ ಬಾಕ್ಸ್ ಆಫೀಸ್ ದಂಡಯಾತ್ರೆ ಸಖತ್ ಜೋರಿದೆ. ರಾಜ್ಯಾದ್ಯಂತ ವಿಜಯಯಾತ್ರೆಗೆ ತೆರಳಿರೋ ಆ್ಯಕ್ಷನ್ ಪ್ರಿನ್ಸ್, ಶೋಮ್ಯಾನ್ ಹಾಗೂ ಜೂನಿಯರ್ ಉಮಾಶ್ರೀ ರೀಷ್ಮಾಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಮದ್ದೂರು, ಮಂಡ್ಯದಿಂದ ಹಿಡಿದು ಹೊಸಪೇಟೆ, ಮಂಗಳೂರು ತನಕ ಸುತ್ತಾಡಿರೋ ಕೆಡಿ ಟೀಂ ಜೊತೆ ಫ್ಯಾನ್ಸ್ ಅಭಿಮಾನೋತ್ಸವ ಹೇಗಿದೆ ಅಂತ ನೀವೇ ಕಣ್ತುಂಬಿಕೊಳ್ಳಿ.
ಕೆಡಿ.. ಕೆಡಿ.. ಕೆಡಿ.. ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಕೆಡಿ ಬಿಟ್ಟು ಬೇರೇನೂ ಸಮಾಚಾರ ಇಲ್ಲದಂತಾಗಿದೆ. ಏಪ್ರಿಲ್ 30ಕ್ಕೆ ತೆರೆಕಂಡ ಧ್ರುವ ಸರ್ಜಾ-ಸಂಜಯ್ ದತ್ ನಟನೆಯ ಸಿನಿಮಾ, ಯಶಸ್ವೀ ಮೂರನೇ ವಾರದತ್ತ ಮುನ್ನುಗ್ಗುತ್ತಿದೆ. ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಕೆಡಿ, ಜೋಗಿ ಪ್ರೇಮ್-ಧ್ರುವ ಫಸ್ಟ್ ಕಾಂಬೋ ಬೆಸ್ಟ್ ಕಾಂಬೋ ಅನ್ನುವಂತೆ ಮಾಡಿತ್ತು.

ಅಬ್ಬಬ್ಬಾ.. KD ವಿಜಯಯಾತ್ರೆಯೋ ಅಭಿಮಾನೋತ್ಸವವೋ?
ಬಾಕ್ಸ್ ಆಫೀಸ್ನಲ್ಲಿ ಕಾಳಿದಾಸನ ದಂಡಯಾತ್ರೆ ಬಲು ಜೋರು
ಬ್ರದರ್ ಸೆಂಟಿಮೆಂಟ್, ಲವ್ ಟ್ರ್ಯಾಕ್, ಮೈಂಡ್ ಬ್ಲೋಯಿಂಗ್ ಆ್ಯಕ್ಷನ್ ಸೀಕ್ವೆನ್ಸ್ನಿಂದ ಸಿನಿಮಾ ಮಸ್ತ್ ಮನರಂಜನೆ ನೀಡ್ತಿದೆ. ರೀಷ್ಮಾ ನಾಣಯ್ಯ ಗ್ಲಾಮರ್ ರಂಗು ಜೋರಿದ್ದು, ರಾಜ್ಯಾದ್ಯಂತ ಜನ ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಮದ್ದೂರು, ಮಂಡ್ಯ, ಮೈಸೂರು, ನಂಜನಗೂಡಿನ ಥಿಯೇಟರ್ಗಳಿಗೆ ಭೇಟಿ ನೀಡಿದ್ದ ಚಿತ್ರತಂಡಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹೋದಲ್ಲೆಲ್ಲಾ ಹೂಮಳೆ ಸುರಿಸಿ, ಹಾಲಿನ ಅಭಿಷೇಕ ಮಾಡಿದ್ದಾರೆ ಚಿತ್ರಪ್ರೇಮಿಗಳು.

ಮದ್ದೂರು ಟು ನಂಜನಗೂಡು..ತುಮಕೂರು ಟು ದಾವಣಗೆರೆ
ಹೊಸಪೇಟೆಯಿಂದ ಮಂಗಳೂರು..ಎಲ್ಲೆಡೆ ಅದ್ಧೂರಿ ಸ್ವಾಗತ..!
ನಾಯಕನಟ ಧ್ರುವ ಸರ್ಜಾಗೆ ಡೈರೆಕ್ಟರ್ ಪ್ರೇಮ್ ಹಾಗೂ ನಾಯಕನಟಿ ರೀಷ್ಮಾ ನಾಣಯ್ಯ ಕೂಡ ಸಾಥ್ ನೀಡಿದ್ದು, ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಇದು ಕೆಡಿ ವಿಜಯಯಾತ್ರೆಯೋ ಧ್ರುವ ಅಭಿಮಾನೋತ್ಸವವೋ ಅನ್ನುವಂತೆ ಸಖತ್ ಸೆಲೆಬ್ರೇಷನ್ಗೆ ನಾಂದಿ ಹಾಡಿದೆ ಈ ಕೆಡಿ ಸಕ್ಸಸ್ ಯಾತ್ರೆ.

ಅಂದಹಾಗೆ ಮೈಸೂರು ರೌಂಡ್ಸ್ ಒಂದು ದಿನ ಆದ್ರೆ, ತುಮಕೂರು ಟು ದಾವಣಗೆರೆ, ಹೊಸಪೇಟೆ ತನಕ ಮತ್ತೊಂದು ದಿನ ವಿಸಿಟ್ ಮಾಡಿದೆ ಚಿತ್ರತಂಡ. ಅಲ್ಲದೆ ಮಂಗಳೂರು ಕಡೆಯೂ ಒಂದು ದಿನ ಹೋಗಿ, ಡೈರೆಕ್ಟ್ ಆಗಿ ಕನ್ನಡ ಚಿತ್ರಪ್ರೇಮಿಗಳಿಗೆ ಹಾಗೂ ಧ್ರುವ ವಿಐಪಿಗಳಿಗೆ ಧನ್ಯವಾದ ಹೇಳಿದೆ ಚಿತ್ರತಂಡ. ಕೆವಿಎನ್ ಸಂಸ್ಥೆಗೆ ಈ ಕೆಡಿ ಚಿತ್ರದಿಂದ ಶುಕ್ರದೆಸೆ ಶುರುವಾಗಿದ್ದು, ಅತ್ತ ವಿಜಯ್ ಸಿಎಂ ಆಗಿದ್ದು, ಜನನಾಯಗನ್ ಕೂಡ ಸದ್ಯದಲ್ಲೇ ತೆರೆಗಪ್ಪಳಿಸಲಿದೆ.





