ಗಾಜಿಯಾಬಾದ್ ಪೊಲೀಸರು ಜೂನ್ 29, 2025ರಂದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಕ್ರಮ ಕೈಗೊಂಡಿರುವ ಪೊಲೀಸರು ಯಶ್ ದಯಾಳ್ಗೆ ತನಿಖೆಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. “ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಯಾವುದೇ ವಿಳಂಬವಾಗಬಾರದು” ಎಂದು ಪೊಲೀಸರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ತನಿಖೆಗೆ ಜುಲೈ 21, 2025ರವರೆಗೆ ಗಡುವು ನೀಡಲಾಗಿದ್ದು, ಇಂದಿರಾಪುರಂನ ಸರ್ಕಲ್ ಆಫೀಸರ್ (ಸಿಒ) ಈ ವಿಷಯದ ಬಗ್ಗೆ ವರದಿ ಸಲ್ಲಿಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ನೀಡಲಾಗಿದೆ.