ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಐಪಿಎಲ್ 2025ರ 34ನೇ ಪಂದ್ಯಕ್ಕೆ ಮಳೆಯಿಂದ ವಿಘ್ನ ಎದುರಾಗಿದೆ. ಪಂದ್ಯ ಆರಂಭವಾಗುವ ಮೊದಲೇ ವರುಣದೇವನ ಆಗಮನದಿಂದ ಟಾಸ್ ವಿಳಂಬವಾಗಿದ್ದು, ಆಟಗಾರರು ಮೈದಾನಕ್ಕೆ ಇಳಿಯಲು ಸಾಧ್ಯವಾಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ, ಪಂದ್ಯ ಆರಂಭಕ್ಕೆ ಅಡ್ಡಿಯಾಗಿದೆ.
ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳ ಮೊದಲು ಮಳೆ ಶುರುವಾದ ಕಾರಣ, ಟಾಸ್ ಅನ್ನು ತಡೆಹಿಡಿಯಲಾಗಿದೆ. ಅಧಿಕಾರಿಗಳು ಆರಂಭದಲ್ಲಿ 10 ನಿಮಿಷಗಳ ಬಳಿಕ ಟಾಸ್ ನಡೆಸುವುದಾಗಿ ತಿಳಿಸಿದ್ದರೂ, ಮಳೆಯ ತೀವ್ರತೆಯಿಂದ ಇದುವರೆಗೂ ಟಾಸ್ ಸಾಧ್ಯವಾಗಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ಗೆ ನೀರು ತಾಗದಂತೆ ತಾಡಪಾಲಿನ ಕವರ್ಗಳಿಂದ ಮುಚ್ಚಲಾಗಿದ್ದು, ಸಿಬ್ಬಂದಿ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಮಳೆಯಿಂದಾಗಿ ಪಂದ್ಯದ ವೇಳಾಪಟ್ಟಿಯಲ್ಲಿ ತೊಂದರೆಯಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬೆಂಗಳೂರಿನ ವಾತಾವರಣದಲ್ಲಿ ಆಗಾಗ ಮಳೆ ಸಾಮಾನ್ಯವಾದರೂ, ಈ ಬಾರಿಯ ಭಾರೀ ಮಳೆ ಐಪಿಎ e RCBS vs PBKS ಪಂದ್ಯಕ್ಕೆ ತೊಂದರೆಯನ್ನುಂಟುಮಾಡಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಸಿಬ್ಬಂದಿ ಪಿಚ್ ಮತ್ತು ಮೈದಾನವನ್ನು ರಕ್ಷಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ, ಮಳೆಯ ತೀವ್ರತೆ ಕಡಿಮೆಯಾಗದಿದ್ದರೆ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಮಳೆಯ ಸ್ಥಿತಿಯನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ.