ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಇರುವ ಹಿನ್ನೆಲೆಯಲ್ಲಿ ಭಾರತದ ನಂಬರ್ ಒನ್ ಫೇಸ್ ವಾಶ್ ಬ್ರಾಂಡ್ ಆದ ಹಿಮಾಲಯ ವೆಲ್ನೆಸ್ ಸಂಸ್ಥೆಯು ಹಿಮಾಲಯ ವಂಡರ್ ವುಮನ್ ಎಂಬ ಯೋಜನೆ ಆರಂಭಿಸಿದೆ. ವಿಶೇಷವಾಗಿ ಯುವತಿಯರು ತಮಗೆ ಎದುರಾಗುವ ಅಡೆತಡೆಗಳನ್ನು ದಾಟಿ ತಮ್ಮಿಷ್ಟದ ರಂಗದಲ್ಲಿ ನಂಬರ್ ಒನ್ ಆಗಲು ಅವರಿಗೆ ಸ್ಪೂರ್ತಿ ತುಂಬುವ ಯೋಜನೆ ಇದೆ.
ಈ ಯೋಜನೆಯ ಅಂಗವಾಗಿ ಹಿಮಾಲಯ ಸಂಸ್ಥೆಯು 2024ರ ಡಬ್ಲ್ಯೂಪಿಎಲ್ ಚಾಂಪಿಯನ್ ಶಿಪ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಸಹಭಾಗಿತ್ವ ಹೊಂದಿತ್ತು. ಯುವ ಉದಯೋನ್ಮುಕ ಕ್ರಿಕೆಟಿಗರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಶಿಬಿರ ಆಯೋಜನೆ ಮಾಡಿತ್ತು. ಕ್ರಿಕೆಟ್ ರಂಗದ ಜನಪ್ರಿಯ ತಾರೆಯರೇ ಖುದ್ದಾಗಿ ಮಾರ್ಗದರ್ಶನ ನೀಡಿದ್ದರು.
ಯುವತಿಯರ ಆಸೆ, ಆಕಾಂಕ್ಷೆ ಹಾಗೂ ಮಹತ್ವಾಕಾಂಕ್ಷೆಗೆ ಪೂರಕವಾಗಿ ಅವರಿಗೆ ಅವಕಾಶಗಳನ್ನು ಒದಗಿಸಲು ಹಿಮಾಲಯ ಸಂಸ್ಥೆ ಈ ಯೋಜನೆ ರೂಪಿಸಿದೆ. ಯುವತಿಯರಿಗೆ ನೈಜ ಮಹಿಳಾ ಸಾಧಕರಿಗೆ ಮಾರ್ಗದರ್ಶನ ಸಿಗುವಂತೆ ಮಾಡುತ್ತಿದೆ. ಕ್ರೀಡೆ ಮಾತ್ರವಲ್ಲ, ಹತ್ತು ಹಲವು ರಂಗಗಳ ಮಹಿಳಾ ಸಾಧಕಿಯರ ಮೂಲಕ ಬಾಲಕಿಯರು ಹಾಗೂ ಯುವತಿಯರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಮೂಲಕ ಮುಂದಿನ ತಲೆಮಾರಿನ ಮಹಿಳಾ ಸಾಧಕರನ್ನು ನಿರ್ಮಿಸುವ ಮಹತ್ತರ ಗುರಿಯನ್ನು ಹೊಂದಿದೆ.
ಈ ಯೋಜನೆಯ ಅಂಗವಾಗಿ ಬೆಂಗಳೂರು ಮೂಲದ ಕ್ರಿಕೆಟ್ ಅಕಾಡೆಮಿಯ 15 ಯುವ ಉದಯೋನ್ಮುಕ ಕ್ರಿಕೆಟಿಗರಿಗೆ ಆರ್ಸಿಬಿ ತಂಡದ ಅತ್ಯುನ್ನತ ಆಟಗಾರರ ಮೂಲಕ ವಿಶೇಷ ತರಬೇತಿ ಕೊಡಿಸಲಾಯ್ತು. ತರಬೇತಿ ನೀಡಿದ ಕ್ರಿಕೆಟಿಗರ ಪೈಕಿ ಸ್ಮೃತಿ ಮಂದಾನಾ, ಎಲ್ಲಿಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್ ಸೇರಿದಂತೆ ಹಲವು ಮಹಿಳಾ ಕ್ರಿಕೆಟಿಗರು ಇದ್ದರು.
ಈ ಯೋಜನೆ ಕುರಿತು ಮಾತನಾಡಿದ ಹಿಮಾಲಯ ವೆಲ್ನೆಸ್ನ ಬ್ಯುಸಿನೆಸ್ ನಿರ್ದೇಶಕ ರಾಜೇಶ್ ಕೃಷ್ಣಮೂರ್ತಿ, ಪ್ರತಿಯೊಬ್ಬ ಬಾಲಕಿಗೂ ತನ್ನದೇ ಆದ ಶಕ್ತಿ, ಸಾಮರ್ಥ್ಯ ಹಾಗೂ ನಾಯಕತ್ವ ಗುಣ ಇರುತ್ತದೆ. ಅದನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಭಾರತ ದೇಶಾದ್ಯಂತ ಇರುವ ಶಾಲೆಗಳಲ್ಲಿ ಸುಮಾರು 5 ಲಕ್ಷ ಬಾಲಕಿಯರಿಗೆ ಹಿಮಾಲಯ ವಂಡರ್ ವುಮನ್ ಯೋಜನೆ ಅಡಿ ತರಬೇತಿ ನೀಡುವ ಉದ್ದೇಶ ಇದ್ದು, ಇಡೀ ವರ್ಷ ಈ ಯೋಜನೆ ಜಾರಿಯಲ್ಲಿ ಇರಲಿದೆ.