ರಾಶಿ ಫಲಗಳ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ . ಕಳೆದ ವರ್ಷದ ಬೇಸರ, ಹತಾಶೆ, ಅವಮಾನ, ಆರ್ಥಿಕ ಹಿನ್ನಡೆ ಇದೆಲ್ಲವೂ ಬಹಳ ಹೆಚ್ಚಾಗಿಯೇ ಇದ್ದವು. ಸ್ವಲ್ಪ ಗುರು ಬಲವು ಬರವುದರಿಂದ ನಿಮ್ಮಲ್ಲಿ ನೆಮ್ಮದಿಯು ಆಗಾಗ ಬೀಸಿ, ಆರಾಮೆನಿಸುವುದು. ಇನ್ನು ಶನಿಯು ಎರಡು ವರೆ ವರ್ಷಗಳ ಅನಂತರ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ದಶಮದಲ್ಲಿ ಇದ್ದ ರಾಹುವು ನವಮಕ್ಕೆ ಹೋಗುವನು ಮತ್ತು ಚತುರ್ಥದಲ್ಲಿ ಕೇತುವಿದ್ದು ಅವನು ತೃತೀಯಕ್ಕೆ ಬರುವನು. ಇವೆಲ್ಲ ಬದಲಾವಣೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಗುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಇರುವುದು.
ಮಿಥುನ ರಾಶಿಯವರ ಆರೋಗ್ಯ ಹೇಗಿರಲಿದೆ?
ಆರೋಗ್ಯ ಅಧಿಪತಿ ಸದ್ಯ ನೀಚನಾಗಿಯೇ ಇರುವನು. ವರ್ಷದ ಮಧ್ಯದವರೆಗೂ ಆರೋಗ್ಯದಲ್ಲಿ ಕಿರಿಕಿರಿ ಇರುವುದು. ಸಣ್ಣ ಔಷದಿಗಳ ಮೂಲಕ ಅದನ್ನು ಕಡಿಮೆ ಮಾಡಿಕೊಂಡರೂ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ತಸ್ರಾವ ಮೊದಲಾದ ಶಾರೀರಿಕ ಏರುಪೇರು ಕಾಣಿಸಬಹುದು.
ಮಿಥುನ ರಾಶಿಯವರ ಪ್ರೇಮ ಮತ್ತು ವಿವಾಹ
ವಿವಾಹಕ್ಕೆ ವರ್ಷದ ಮಧ್ಯ ಅವಧಿಯವೆರೆಗೆ ಸೂಕ್ತ ಕಾಲವಿಲ್ಲ. ಅನಂತರ ಅನಿವಾರ್ಯವಿದ್ದರೆ ಪರಿಹಾರದ ಮೂಲಕ ವಿವಾಹವನ್ನು ಮಾಡಿಕೊಳ್ಳಿ. ಪ್ರೇಮವು ಆದಂತೆ ಅನಿಸಿದರೂ ಕಾರಣಾಂತರಗಳಿಂದ ತಪ್ಪುವುದು. ದುಃಖವು ನಿಮ್ಮನ್ನು ಕೆಲಕಾಲ ಜಿಗುಪ್ಸೆ ತರಿಸುವುದು. ಅನ್ಯ ಕಾರ್ಯದಲ್ಲಿ ತೊಡಗಿದರೆ ಉತ್ತಮ.
ಮಿಥುನ ರಾಶಿಯವರ ಉದ್ಯೋಗ ಮತ್ತು ಆರ್ಥಿಕತೆ ಹೇಗಿರಲಿದೆ?
ಈ ವರ್ಷ ನಿಮ್ಮ ಉದ್ಯೋಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಉದ್ಯೋಗವನ್ನು ಬದಲಿಸಿ ಮತ್ತೆ ಅಂತದ್ದೆ ಉದ್ಯೋಗಕ್ಕೆ ಹೋಗಬೇಕಾಗುವುದು. ಹಾಗಾಗಿ ಇದ್ದಲ್ಲೇ ಇರುವುದು ಕ್ಷೇಮ. ಆರ್ಥಿಕತೆಯು ವರ್ಷಾರಂಭದಲ್ಲಿ ಕಷ್ಟ. ಬರಬೇಕಾದ ಹಣವು ಶ್ರಮ ಹಾಕಿದರೂ ಸಿಗುವುದು ಕಷ್ಟ.
ಮಿಥುನ ರಾಶಿಯವರ ಕುಟುಂಬ ವ್ಯವಸ್ಥೆ ಹೇಗಿರಲಿದೆ?
ಕೌಟುಂಬಿಕ ಅಸಮಾಧಾನವು ಸರಿಯಾಗುವುದು. ನಿಮ್ಮ ಪರವಾಗಿ ನಿಲ್ಲುವರು. ಚತುರ್ಥದ ಅಧಿಪತಿ ಬುಧನೇ ಆಗಿದ್ದು ಬಾಂಧವರ ಸಹವಾಸ ಸಿಗಲಿದೆ.
ಮಿಥುನ ರಾಶಿಯವರ ಅದೃಷ್ಟ ಹೇಗಿರಲಿದೆ?
ಅದೃಷ್ಟ ಈ ವರ್ಷ ನಿಮ್ಮ ಪಾಲಿಗೆ ಅದೃಷ್ಟ ಇದೆ. ಆದರೆ ಯಾರಿಗೆ ರಾಹು ದಶಾ ನಡೆಯುತ್ತದೆಯೋ ಅವರಿಗೆ ಈ ಅದೃಷ್ಟ ಸಿಗಲಿದೆ. ಆರಂಬಿಸಿದ ಕಾರ್ಯಕ್ಕೆ ಉತ್ತಮ ವೇಗ ಸಿಕ್ಕಿ, ಅಂದುಕೊಂಡಿದ್ದನ್ನು ಸಾಧಿಸುವುದು ಆಗುವುದು.
ಒಟ್ಟಾರೆಯಾಗಿ ಈ ವರ್ಷ ಲಕ್ಷ್ಮೀನಾರಾಯಣರ ಉಪಾಸನೆಯಿಂದ ವರ್ಷದಲ್ಲಿ ಉಂಟಾಗುವ ಅಲ್ಪ ವ್ಯತ್ಯಾಸ ಮನಸ್ತಾಪ, ಕಿರಿಕಿರಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಆರ್ಥಿಕ ವಿಚಾರದಲ್ಲಿ ಪ್ರಗತಿ ಕಾಣಲು ಸಾಧ್ಯ.