ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಗುರುವಾರ ಇಂದು ಯುಗಾದಿಯ ಶುಭ ದಿನ. ಹೊಸ ವರ್ಷದ ಆರಂಭವಾದ ಈ ದಿನವು ಹೊಸ ಆಶೆಗಳು, ಹೊಸ ಅವಕಾಶಗಳು ಮತ್ತು ಹೊಸ ಜೀವನಕ್ಕೆ ಸಂಕೇತವಾಗಿದೆ. ಹಳೆಯ ನೋವುಗಳನ್ನು ಮರೆತು, ಹೊಸ ಸಂಭ್ರಮವನ್ನು ಸ್ವಾಗತಿಸುವುದು ಈ ಹಬ್ಬದ ವಿಶೇಷತೆ.
ಇಂದು ಸಾಮಾನ್ಯವಾಗಿ ಜನರು ಮಾತಿನಲ್ಲಿ ಎಚ್ಚರಿಕೆಯಿಂದ ಇರಬೇಕು, ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ಸಿಕ್ಕಿದುದರಲ್ಲಿ ಸಂತೃಪ್ತಿ ಹೊಂದುವುದು ಉತ್ತಮ. ಅತಿಯಾದ ಆಹಾರ ಸೇವನೆ ಮತ್ತು ಅತಿಯಾಗಿ ಚಿಂತಿಸುವುದನ್ನು ತಪ್ಪಿಸುವುದು ಒಳಿತು.
ಮೇಷ ರಾಶಿ:
ಬಂಧುಗಳ ಆರೋಗ್ಯದ ಆರೈಕೆ ನಿಮ್ಮಿಂದ ಆಗಬೇಕಾದೀತು. ಹತ್ತಿರದವರ ಮಾತನ್ನು ಕಡೆಗಣಿಸುವ ಸಾಧ್ಯತೆ ಇದೆ. ಅದೃಷ್ಟ ಇದ್ದರೂ ಸ್ವಂತ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಿ. ಯಾರಾದರೂ ನಿಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬಹುದು. ಗೊತ್ತಿಲ್ಲದೇ ಪರರ ವಸ್ತುವನ್ನು ತೆಗೆದುಕೊಳ್ಳಬೇಡಿ. ಸಮಸ್ಯೆಯ ಕುರಿತೇ ಹೆಚ್ಚು ಯೋಚಿಸುತ್ತಾ ಕಾಲ ಕಳೆಯಬೇಡಿ. ಸುಬ್ರಹ್ಮಣ್ಯ ಸ್ವಾಮಿಯ ಉಪಾಸನೆ ನಿಮಗೆ ಸಂತಸ ತರಲಿದೆ.
ವೃಷಭ ರಾಶಿ:
ಹೊಸ ಕೆಲಸ ಆರಂಭಿಸಲು ಯೋಜಿಸುತ್ತಿದ್ದರೆ ಸಮಯ ಮತ್ತು ಸ್ಥಳಗಳ ಆಯ್ಕೆ ಮುಖ್ಯ. ನಿಮ್ಮ ಶ್ರಮಕ್ಕೆ ಪೂರ್ಣ ಫಲ ಸಿಗುವ ಸಾಧ್ಯತೆ ಇದೆ. ಗುರಿಯ ಬಗ್ಗೆ ದೃಢತೆ ಸಡಿಲವಾಗಬಹುದು. ಅನಿರೀಕ್ಷಿತ ಅಪಾಯದ ಸೂಚನೆ ಇದೆ. ಬಂಧುಗಳ ಮನೆಯಲ್ಲಿ ಅನಿರೀಕ್ಷಿತ ಊಟದ ವ್ಯವಸ್ಥೆಯಾಗಬಹುದು. ನಿಂದಕರ ಬಗ್ಗೆ ಮಾತನಾಡುವುದನ್ನು ತಪ್ಪಿಸಿ.
ಮಿಥುನ ರಾಶಿ:
ನಿಮಗೆ ಸಂತೋಷ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ. ಮಕ್ಕಳ ಬಗ್ಗೆ ಅಭಿಮಾನ ಹೆಚ್ಚಾಗುವುದು. ಪ್ರಯಾಣ ದುಬಾರಿಯಾಗಬಹುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವ ಯೋಗವಿದೆ. ವೃತ್ತಿಸ್ಥಳದಲ್ಲಿ ಗುರುತಿಸಿಕೊಳ್ಳುವಿರಿ. ದ್ವೇಷಕ್ಕೆ ಸರಿಯಾದ ಕಾರಣವಿರಲಿ. ಮಕ್ಕಳ ಕಾಳಜಿ ಅತಿಯಾಗಬಾರದು. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಮಹಾವಿಷ್ಣುವಿನ ಉಪಾಸನೆ ಶುಭಫಲ ನೀಡೀತು.
ಕರ್ಕಾಟಕ ರಾಶಿ:
ಸಾಮಾಜಿಕ ಕಾರ್ಯಗಳಲ್ಲಿ ಗೌರವ ಹೆಚ್ಚಲಿದೆ. ಸ್ನೇಹಿತರ ಸಹಾಯದಿಂದ ವ್ಯವಹಾರ ಬೆಳೆಯುವ ಸೂಚನೆ. ಬೇರೆಯವರ ವಿಷಯದಲ್ಲಿ ತಲೆಹಾಕಬೇಡಿ. ಶ್ರಮಕ್ಕೆ ತಕ್ಕ ವರಮಾನ ಇಲ್ಲವೆನಿಸಬಹುದು. ಕಾನೂನಿನ ಚೌಕಟ್ಟಿನಲ್ಲೇ ನಡೆಯಿರಿ. ಜೀವನದ ಮಾರ್ಗ ಬದಲಾಗಬಹುದು. ವಾದದಲ್ಲಿ ಸೋಲಿನ ಸಾಧ್ಯತೆ ಇದೆ, ಮುಗ್ಗರಿಸಿ ಬೀಳಬೇಡಿ.
ಸಿಂಹ ರಾಶಿ:
ಸಮಸ್ಯೆಯಲ್ಲಿದ್ದರೆ ಇಂದು ಪರಿಹಾರ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಯಿಂದ ಲಾಭ. ಕುಟುಂಬ ಜೀವನದಲ್ಲಿ ಆನಂದ. ಪ್ರಭಾವಿಗಳು ನಿಮ್ಮನ್ನು ಅಸ್ತ್ರವಾಗಿ ಬಳಸಿಕೊಳ್ಳುವರು. ರಕ್ಷಣಾ ಸಿಬ್ಬಂದಿಗೆ ಭಯದ ಸೂಚನೆ. ಸಂಕಟ ಪರಿಹಾರಕ್ಕೆ ತಡವಾಗಬಹುದು.
ಕನ್ಯಾ ರಾಶಿ:
ಕೋಪವನ್ನು ನಿಯಂತ್ರಣದಲ್ಲಿಡಿ. ಕೆಲಸದಲ್ಲಿ ಬೆಂಬಲ ಸಿಗಲಿದೆ. ಅನಗತ್ಯ ಓಡಾಟದಿಂದ ಮನಸ್ಸಿಗೆ ತೊಂದರೆ. ಪ್ರಯಾಣ ಅವಸರದ್ದಾಗಿರಬಹುದು. ಹೂಡಿಕೆ ಅನಿವಾರ್ಯ. ನೌಕರರಿಗೆ ಸೂಕ್ತ ರೀತಿಯಲ್ಲಿ ಕೆಲಸ ಹೇಳಿಕೊಡಿ. ಮಾತಿನ ಮಾಪನ ಸರಿಯಾಗಿರಲಿ.
ತುಲಾ ರಾಶಿ:
ಗುರಿ ಸಾಧನೆಗೆ ಸರಿಯಾದ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ. ದೇವರ ನಂಬಿಕೆಯಿಂದ ಮನೋರಥ ಪೂರ್ಣಗೊಂಡು ಅತೀವ ಸಂತೋಷ. ನಿಮ್ಮ ಘನತೆಗೆ ಧಕ್ಕೆ ಬರುವ ಸಾಧ್ಯತೆ. ಸಮಯಪಾಲನೆಗೆ ಪ್ರಶಂಸೆ. ಕೆಲಸಕ್ಕೆ ನಿಮ್ಮದೇ ಚೌಕಟ್ಟು ರಚಿಸಿಕೊಳ್ಳಿ, ಇಲ್ಲದಿದ್ದರೆ ಸಮಸ್ಯೆ ನಿಮ್ಮದೇ.
ವೃಶ್ಚಿಕ ರಾಶಿ:
ಉತ್ಸಾಹದಿಂದ ಇರಲು ದಾರಿ ಕಡಿಮೆ. ಬಾಕಿ ಕೆಲಸ ಪೂರ್ಣಗೊಳಿಸುವಿರಿ. ವೃತ್ತಿಯಲ್ಲಿ ಹೊಸ ಸಾಧನೆಗೆ ಅವಕಾಶ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸ ಹಾಳುಮಾಡಿಕೊಳ್ಳುವಿರಿ. ಪರೀಕ್ಷಾ ಸಿದ್ಧತೆ ನಡೆಸಿ. ಸ್ವಾರ್ಥದಿಂದ ನಿಮಗೇ ತೊಂದರೆ ಎಂದು ಅರಿವಾಗುವುದು.
ಧನು ರಾಶಿ:
ಸೃಜನಶೀಲ ಪ್ರಯತ್ನಗಳಿಗೆ ಫಲ. ಮಾತಿನ ಪ್ರಭಾವದಿಂದ ಕೆಲಸ ಪೂರ್ಣಗೊಳ್ಳುವುದು. ಆಭರಣ, ಬಟ್ಟೆ ಉಡುಗೊರೆಯಾಗಿ ಸಿಗಬಹುದು. ಆಮದು ವ್ಯವಹಾರ ಕಡಿಮೆ ಮಾಡಿ. ವಿದೇಶದಲ್ಲಿ ಜೀವನಕ್ಕೆ ತೊಂದರೆ ಸಾಧ್ಯತೆ. ಪ್ರವಚನಕಾರರಿಗೆ ಉತ್ತಮ ಅವಕಾಶ. ದೌರ್ಬಲ್ಯಗಳನ್ನು ಎದುರಿಗೆ ಪ್ರಕಟಿಸಬೇಡಿ.
ಮಕರ ರಾಶಿ:
ಮಾತಿನಿಂದ ಮಂತ್ರಮುಗ್ಧರನ್ನಾಗಿಸುವಿರಿ. ಆರ್ಥಿಕ ಲಾಭದಿಂದ ಮುಖದಲ್ಲಿ ಸಂತೋಷ ಕಾಣುವುದು. ಬಲವಾದ ಕಾರಣದಿಂದ ನಿಮ್ಮನ್ನು ಒಪ್ಪಿಕೊಳ್ಳಬಹುದು. ಹಳೆಯ ವಾಹನ ಖರೀದಿ ಸಾಧ್ಯತೆ. ವಿದ್ಯಾರ್ಥಿಗಳು ಓದಿನ ಸಮಯ ಬದಲಿಸಿಕೊಳ್ಳುವುದು ಸೂಕ್ತ. ಉದ್ಯಮಕ್ಕೆ ಪ್ರಭಾವಿಗಳ ಕೃಪೆ ಅಗತ್ಯ. ಅಪರಿಚಿತರ ಭೇಟಿಯಿಂದ ಭವಿಷ್ಯದ ಲಾಭ. ಅನಪೇಕ್ಷಿತ ಮಾತುಗಳನ್ನು ಆಡಬೇಡಿ.
ಕುಂಭ ರಾಶಿ:
ನೆಮ್ಮದಿಗೆ ಸಂಗಾತಿಯಿಂದ ಭಂಗ. ಗೊತ್ತಾಗದಂತೆ ವಂಚನೆಗೆ ಒಳಗಾಗುವ ಸಾಧ್ಯತೆ. ಆರೋಗ್ಯ ಸುಧಾರಣೆಗೆ ವೈದ್ಯರ ಸಲಹೆ ಅಗತ್ಯ. ಎಲ್ಲರ ಮೇಲೂ ವಿನಾಕಾರಣ ಕೋಪ. ಪರರ ವಸ್ತು ಬಳಸಿ ಸರಿಯಾಗಿ ಹಿಂದಿರುಗಿಸಿ. ಚಂಚಲ ಮನಸ್ಸಿನಿಂದ ಯಾರ ಮಾತನ್ನೂ ಕೇಳದ ಸ್ಥಿತಿ. ನೆಚ್ಚಿನ ವ್ಯಕ್ತಿಗಳ ಮೇಲೆ ಪ್ರೀತಿ ಅಧಿಕ.
ಮೀನ ರಾಶಿ:
ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆ. ಪ್ರಮುಖ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಯಶಸ್ಸು. ಆರೋಗ್ಯದ ಸ್ಥಿತಿ ಗಂಭೀರವಾಗಿ ನೋಡಿಕೊಳ್ಳಬೇಕು. ಜೊತೆಗಿರುವವರೇ ವಸ್ತು ಅಪಹರಿಸುವ ಸಾಧ್ಯತೆ. ವಸ್ತು ಕಳ್ಳರಿಂದ ಅಪಹರಣವಾಗೀತೆಂಬ ಭಯ. ಪರರಲ್ಲಿರುವ ನಿಮ್ಮ ವಸ್ತುವನ್ನು ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಸ್ಥಿತಿ ಬರಬಹುದು.





