• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 12, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

26/11 ದಾಳಿಯ ರಾಣಾ ಎನ್‌ಐಎ ಬಲೆಗೆ: ವಿಚಾರಣೆಯ ರಣವ್ಯೂಹದಲ್ಲಿ ಉಗ್ರ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 11, 2025 - 8:01 am
in ದೇಶ
0 0
0
Film 2025 04 11t075950.337

2008ರ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ ತಹಾವುರ್ ರಾಣಾ ಎನ್‌ಐಎ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಅಮೆರಿಕಾದಿಂದ ಗಡೀಪಾರಾಗಿ ದೆಹಲಿಯಲ್ಲಿ ಲ್ಯಾಂಡ್ ಆಗಿದ್ದ ರಾಣಾನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಕ್ಷಣವೇ ಕಸ್ಟಡಿಗೆ ತೆಗೆದುಕೊಂಡಿದೆ. ಈ ಐತಿಹಾಸಿಕ ಬೆಳವಣಿಗೆಯು 17 ವರ್ಷಗಳ ರಾಜತಾಂತ್ರಿಕ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಇದೀಗ ರಾಣಾನನ್ನು ಎನ್‌ಐಎ ವಿಚಾರಣೆಯ ರಣವ್ಯೂಹದಲ್ಲಿ ಬೆಂಡೆತ್ತಲು ಸಜ್ಜಾಗಿದೆ.

ರಾಣಾನ ಬಂಧನದ ಕ್ಷಣಗಳು

ನಿನ್ನೆ ಮಧ್ಯಾಹ್ನ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದ ಮೂಲಕ ತಹಾವುರ್ ರಾಣಾ ಲ್ಯಾಂಡ್ ಆಗಿದ್ದ. ತಕ್ಷಣವೇ ಎನ್‌ಐಎ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು ಬಂಧನದ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಬಳಿಕ, ರಾಣಾನನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಎನ್‌ಐಎ ಪರ ವಕೀಲ ದಯಾನ್ ಕೃಷ್ಣನ್, ರಾಣಾನನ್ನು 20 ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಕೋರ್ಟ್ ಈ ಮನವಿಯನ್ನು ಭಾಗಶಃ ಪುರಸ್ಕರಿಸಿ, 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ರಾಣಾನನ್ನು ವಿತರಿಸಿತು.

RelatedPosts

ಭೀಕರ ರಸ್ತೆ ಅಪಘಾತ: 8 ಮಹಿಳೆಯರು ಸಾವು, 25 ಮಂದಿ ಗಾಯ

ಮೋದಿ ಜೊತೆ ಝೆಲೆನ್ಸ್ಕಿ ಮಾತುಕತೆ: ರಷ್ಯಾ -ಉಕ್ರೇನ್ ಯುದ್ಧ ಶಾಂತಿಯುತ ಇತ್ಯರ್ಥಕ್ಕೆ ಭಾರತ ಒತ್ತು

ಲೋಕಸಭೆಯಲ್ಲಿ ಆದಾಯ ತೆರಿಗೆ, ರಾಷ್ಟ್ರೀಯ ಕ್ರೀಡಾ ಆಡಳಿತ ತಿದ್ದುಪಡಿ ಮಸೂದೆ ಅಂಗೀಕಾರ

ಮತಗಳ್ಳತನ ಆರೋಪ: ರಾಹುಲ್ ಗಾಂಧಿ ಸೇರಿ 30 ಸಂಸದರು ಪೊಲೀಸರ ವಶಕ್ಕೆ!

ADVERTISEMENT
ADVERTISEMENT

ಸದ್ಯ, ಎನ್‌ಐಎ ದೆಹಲಿಯ ಹೆಡ್‌ಕ್ವಾರ್ಟರ್ಸ್‌ನ ವಿಶೇಷ ಕೋಣೆಯಲ್ಲಿ ರಾಣಾನನ್ನು ಇರಿಸಿ ತೀವ್ರ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯ ಮೂಲಕ 26/11 ದಾಳಿಯ ಹಿಂದಿನ ದೊಡ್ಡ ರಹಸ್ಯಗಳನ್ನು ಬಯಲಿಗೆಳೆಯಲು ತನಿಖಾ ತಂಡ ಸಿದ್ಧವಾಗಿದೆ.

ತಹಾವುರ್ ರಾಣಾ: 26/11 ದಾಳಿಯ ರೂವಾರಿ

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಇತಿಹಾಸದಲ್ಲಿ ಒಂದು ಕಪ್ಪು ದಿನವಾಗಿದೆ. ಈ ದಾಳಿಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್, ತಾಜ್ ಹೋಟೆಲ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು 10 ಉಗ್ರರು ಗುರಿಯಾಗಿಸಿದ್ದರು. ಈ ದಾಳಿಯ ಯೋಜನೆಗೆ ಸ್ಥಳಗಳನ್ನು ಗುರಿಯಾಗಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದವನೇ ತಹಾವುರ್ ರಾಣಾ.

ರಾಣಾ, ಮೂಲತಃ ಪಾಕಿಸ್ತಾನದ ಸೇನೆಯಲ್ಲಿದ್ದವನು. 1997ರಲ್ಲಿ ಸೇನೆಗೆ ರಾಜೀನಾಮೆ ನೀಡಿ ಕೆನಡಾಕ್ಕೆ ತೆರಳಿದ್ದ ರಾಣಾ, ಬಳಿಕ ಲಷ್ಕರ್-ಎ-ತೊಯ್ಬಾದೊಂದಿಗೆ ಕೈ ಜೋಡಿಸಿ ಸಕ್ರಿಯ ಸದಸ್ಯನಾದ. ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್‌ನ ಆಪ್ತನಾಗಿದ್ದ ರಾಣಾ, ಮುಂಬೈ ದಾಳಿಯ ಮತ್ತೊಬ್ಬ ಮಾಸ್ಟರ್‌ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತಕ್ಕೆ ಬರಲು ಪಾಸ್‌ಪೋರ್ಟ್ ಒದಗಿಸಿಕೊಟ್ಟಿದ್ದ. ಇದರಿಂದ ಹೆಡ್ಲಿಗೆ ಗುರಿಗಳನ್ನು ಗುರ್ತಿಸಲು ಸುಲಭವಾಯಿತು.

ರಾಣಾ ಸ್ವತಃ 2008ರ ನವೆಂಬರ್ 11ರಿಂದ 21ರವರೆಗೆ ಮುಂಬೈಗೆ ಭೇಟಿ ನೀಡಿ, ಪೋವಾಯ್‌ನ ರೆನೈಸಾನ್ಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಈ ಭೇಟಿಯ ಬೆನ್ನಲ್ಲೇ ನವೆಂಬರ್ 26ರಂದು ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯನ್ನು ರಾಣಾ ಸಮರ್ಥಿಸಿಕೊಂಡಿದ್ದ ಎಂಬ ಆರೋಪವೂ ಇದೆ.

ಎನ್‌ಐಎ ವಿಚಾರಣೆ: ಏನೆಲ್ಲಾ ಗೊತ್ತಾಗಲಿದೆ?

ಎನ್‌ಐಎ ರಾಣಾನನ್ನು ವಿಚಾರಣೆಗೆ ಒಳಪಡಿಸುವ ಮೂಲಕ 26/11 ದಾಳಿಯ ಹಲವು ರಹಸ್ಯಗಳನ್ನು ಬಯಲಿಗೆಳೆಯಲು ಯೋಜನೆ ರೂಪಿಸಿದೆ. ವಿಚಾರಣೆಯ ಕೆಲವು ಪ್ರಮುಖ ಅಂಶಗಳು ಇಂತಿವೆ:

  • 26/11 ದಾಳಿಯ ಯೋಜನೆ: ದಾಳಿಯಲ್ಲಿ ಭಾಗಿಯಾದ ಇತರರ ವಿವರಗಳು.
  • ರಾಣಾನ ಭಾರತ ಭೇಟಿಗಳು: ಈ ಹಿಂದೆ ರಾಣಾ ಎಷ್ಟು ಬಾರಿ ಭಾರತಕ್ಕೆ ಬಂದಿದ್ದಾನೆ?
  • ಸಂಪರ್ಕ ಜಾಲ: ರಾಣಾ ಯಾರೆಲ್ಲರ ಸಂಪರ್ಕದಲ್ಲಿದ್ದ? ದಾಳಿಯನ್ನು ಹೇಗೆ ಯೋಜಿಸಲಾಯಿತು?
  • ಉಗ್ರ ಜಾಲ: ರಾಣಾನ ಬೆಂಬಲಿಗರು, ಸ್ಲೀಪರ್ ಸೆಲ್‌ಗಳ ಬಗ್ಗೆ ಮಾಹಿತಿ.
  • ಸದ್ಯದ ಸಕ್ರಿಯತೆ: ರಾಣಾ ಇನ್ನೂ ಉಗ್ರರ ಜಾಲದೊಂದಿಗೆ ಸಂಪರ್ಕದಲ್ಲಿದ್ದಾನೆಯೇ?

ಎನ್‌ಐಎ ಈ ವಿಚಾರಣೆಯ ಮೂಲಕ ರಾಣಾನ ಜಾಲವನ್ನು ಸಂಪೂರ್ಣವಾಗಿ ಭೇದಿಸಿ, ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ.

17 ವರ್ಷಗಳ ಹೋರಾಟಕ್ಕೆ ಜಯ

2008ರ ದಾಳಿಯ ನಂತರ ರಾಣಾ ವಿದೇಶದಲ್ಲಿ ಓಡಾಡಿಕೊಂಡಿದ್ದ. ಅಮೆರಿಕದಲ್ಲಿ ಬಂಧನಕ್ಕೊಳಗಾದ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಭಾರತ ಸರ್ಕಾರ 17 ವರ್ಷಗಳ ಕಾಲ ರಾಜತಾಂತ್ರಿಕ ಹೋರಾಟ ನಡೆಸಿತು. ಈಗ ರಾಣಾ ಎನ್‌ಐಎ ಕಸ್ಟಡಿಯಲ್ಲಿದ್ದು, ನ್ಯಾಯದ ಮುಂದೆ ತಲೆಬಾಗಲು ಸಿದ್ಧನಾಗಿದ್ದಾನೆ.

“ಮಾಡಿದ್ದುಣ್ಣೋ ಮಹಾರಾಯ” ಎಂಬಂತೆ, 2008ರಲ್ಲಿ ರಕ್ತದಾಹಿ ದಾಳಿಗೆ ಕಾರಣನಾದ ರಾಣಾನನ್ನು ಇದೀಗ ಎನ್‌ಐಎ ಕಾನೂನಿನ ಕಟಕಟೆಯಲ್ಲಿ ಕಟ್ಟಿಹಾಕಲು ಸಜ್ಜಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

0 (2)

ಧರ್ಮಸ್ಥಳದಲ್ಲಿ ಶವ ಪ್ರಕರಣ: SITಯಿಂದ 13ನೇ ಸ್ಥಳದಲ್ಲಿ ಜಿಪಿಆರ್‌ ಬಳಸಿ ಅಸ್ಥಿಪಂಜರ ಹುಡುಕಾಟ!

by ಸಾಬಣ್ಣ ಎಚ್. ನಂದಿಹಳ್ಳಿ
August 12, 2025 - 2:24 pm
0

0 (3)

ಆರ್‌ಟಿಐ ಕಾಯ್ದೆ ದುರುಪಯೋಗ: ವಿಧಾನಸಭೆಯಲ್ಲಿ ಯತ್ನಾಳ್‌ ಗಂಭೀರ ಆರೋಪ!

by ಸಾಬಣ್ಣ ಎಚ್. ನಂದಿಹಳ್ಳಿ
August 12, 2025 - 2:22 pm
0

ರಾಜಣ್ಣ ರಾಜೀನಾಮೆಗೆ ಬೆಂಬಲಿಗರ ಆಕ್ರೋಶ: ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ, ಮಧುಗಿರಿ ಬಂದ್!

ರಾಜಣ್ಣ ರಾಜೀನಾಮೆಗೆ ಬೆಂಬಲಿಗರ ಆಕ್ರೋಶ: ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ, ಮಧುಗಿರಿ ಬಂದ್!

by ಸಾಬಣ್ಣ ಎಚ್. ನಂದಿಹಳ್ಳಿ
August 12, 2025 - 1:31 pm
0

Untitled design 2025 08 12t131254.958

ರಾಜಣ್ಣ ರಾಜೀನಾಮೆ ಹಿಂಪಡೆಯದಿದ್ದರೆ ಉಗ್ರ ಹೋರಾಟ: ರಸ್ತೆ ತಡೆದು ಬೆಂಬಲಿಗರು ಆಕ್ರೋಶ!

by ಸಾಬಣ್ಣ ಎಚ್. ನಂದಿಹಳ್ಳಿ
August 12, 2025 - 1:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 11t230502.860
    ಭೀಕರ ರಸ್ತೆ ಅಪಘಾತ: 8 ಮಹಿಳೆಯರು ಸಾವು, 25 ಮಂದಿ ಗಾಯ
    August 11, 2025 | 0
  • Untitled design 2025 08 11t204041.968
    ಮೋದಿ ಜೊತೆ ಝೆಲೆನ್ಸ್ಕಿ ಮಾತುಕತೆ: ರಷ್ಯಾ -ಉಕ್ರೇನ್ ಯುದ್ಧ ಶಾಂತಿಯುತ ಇತ್ಯರ್ಥಕ್ಕೆ ಭಾರತ ಒತ್ತು
    August 11, 2025 | 0
  • Untitled design 2025 08 11t202814.765
    ಲೋಕಸಭೆಯಲ್ಲಿ ಆದಾಯ ತೆರಿಗೆ, ರಾಷ್ಟ್ರೀಯ ಕ್ರೀಡಾ ಆಡಳಿತ ತಿದ್ದುಪಡಿ ಮಸೂದೆ ಅಂಗೀಕಾರ
    August 11, 2025 | 0
  • 0 (72)
    ಮತಗಳ್ಳತನ ಆರೋಪ: ರಾಹುಲ್ ಗಾಂಧಿ ಸೇರಿ 30 ಸಂಸದರು ಪೊಲೀಸರ ವಶಕ್ಕೆ!
    August 11, 2025 | 0
  • 0 (69)
    ಶಂಕಿತನ ಮನೆಯಲ್ಲಿ ಅಸ್ಥಿಪಂಜರಗಳ ರಹಸ್ಯ: ಸರಣಿ ಹಂತಕ ಸೆಬಾಸ್ಟಿಯನ್ ಬಂಧನ!
    August 11, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version