ನವದೆಹಲಿ: ಲಿವ್-ಇನ್ ರಿಲೇಷನ್ಶಿಪ್ಲ್ಲಿದ್ದ 44 ವರ್ಷದ ಮಹಿಳೆಯನ್ನು, ಕುಡಿದ ಮತ್ತಿನಲ್ಲಿದ್ದ ಪ್ರಿಯತಮ ಆಕೆಯನ್ನ ಕೊಂದಿದ್ದಾನೆ. ನಂತರ ಶವವನ್ನು ಬಿಸಾಡಲು ಶವವನ್ನ ಕಾರಿನಲ್ಲಿ ಇರಿಸಿಕೋಮಡಿದ್ದಾರೆ. ಆದರೆ ಅತಿಯಾದ ಮದ್ಯಪಾನದಿಂದ ಕಾರು ಚಲಾಯಿಸಲಾಗದೆ, ಶಾವವನ್ನ ಕಾರಿನಲ್ಲೇ ಬಿಟ್ಟು ಮನೆಗೆ ತೆರಳಿದ್ದಾನೆ.
ಈ ಘಟನೆ ನವೆಂಬರ್ 25 ಮತ್ತು 26ರ ಮಧ್ಯರಾತ್ರಿ ನಡೆದಿದ್ದು, ಬುಧವಾರ (ನವೆಂಬರ್ 27) ಬೆಳಿಗ್ಗೆ ಪಕ್ಕದ ಮನೆಯವರು ಕಾರಿನೊಳಗೆ ಮಹಿಳೆಯ ದೇಹವನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಅದೇ ದಿನ ಬಂಧಿಸಿದ್ದಾರೆ.
ಬಂಧಿತ ಆರೋಪಿ ವೀರೇಂದ್ರ (35) ವಿವಾಹಿತನಾಗಿದ್ದು, ಮಕ್ಕಳಿದ್ದಾರೆ. ಅವನು ಕಳೆದ ಎರಡು ವರ್ಷಗಳಿಂದ ಮಹಿಳೆಯ ಜೊತೆ ಲಿವ್-ಇನ್ ಸಂಬಂಧವನ್ನು ನಡೆಸಿಕೊಂಡು ಬಂದಿದ್ದ. ಪೊಲೀಸರ ತಿಳಿಸಿದಂತೆ, ಮಹಿಳೆಗೆ ಪಾಲಂನಲ್ಲಿ ಮನೆ ಇತ್ತು. ಆ ಮನೆಯನ್ನು ಮಾರಿದ ನಂತರ ಬಂದ ಹಣದ ಸುಮಾರು 21 ಲಕ್ಷ ರೂಪಾಯಿಗಳು ವೀರೇಂದ್ರನ ಬಳಿ ಉಳಿದಿದ್ದವು. ಈ ಹಣವನ್ನು ಕೇಂದ್ರವಾಗಿರಿಸಿಕೊಂಡು ಇಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.
ಕೊಲೆ ನಡೆದ ರಾತ್ರಿ ಇಬ್ಬರೂ ಒಟ್ಟಿಗೆ ಮದ್ಯಪಾನ ಮಾಡಿದ್ದರು. ಹಣದ ವಿಷಯವಾಗಿ ಮತ್ತೆ ವಾಗ್ವಾದ ಶುರುವಾಗಿ, ಈ ಬಾರಿ ಕೇವಲ ಜಗಳವಾಗದೆ ಈವ್ರ ವಿಕೋಪಕ್ಕೆ ತಿರುಗಿದೆ. ಬಸ್ ಕಂಪನಿಯಲ್ಲಿ ಕೆಲಸ ಮಾಡುವ ವೀರೇಂದ್ರ, ಮಹಿಳೆಯನ್ನು ಹಾಸಿಗೆಗೆ ಒತ್ತಿ ಹಿಡಿದು, ಆಕೆಯ ಕುತ್ತಿಗೆ ಹಿಸುಕಿ ಕೊಂದುಹಾಕಿದನು.
ಕೊಲೆ ಮಾಡಿದ ನಂತರ ವೀರೇಂದ್ರ ತನ್ನ ಇಬ್ಬರು ಸ್ನೇಹಿತರನ್ನು ಕರೆದಿದ್ದಾನೆ. ಅವರು ಮೃತದೇಹವನ್ನು ಕಾರಿನ ಡಿಕ್ಕಿಗೆ (ಟ್ರಂಕ್) ತುಂಬಲು ಅವನಿಗೆ ಸಹಾಯ ಮಾಡಿದ್ದಾರೆ. ಸ್ನೇಹಿತರು ಅಲ್ಲಿಂದ ಹೊರಟ ನಂತರ, ವೀರೇಂದ್ರ ಶವವನ್ನು ಎಲ್ಲಾದರೂ ಎಸೆದು ಬರುವ ಉದ್ದೇಶದಲ್ಲಿ ಕಾರು ಚಲಾಯಿಸಲು ಪ್ರಯತ್ನಿಸಿದನು.
ಆದರೆ, ಅತಿಯಾದ ಮದ್ಯಪಾನದಿಂದಾಗಿ ಅವನು ಸುಮಾರು 100 ಮೀಟರ್ ದೂರವೂ ಸರಿಯಾಗಿ ಕಾರು ಓಡಿಸಲು ಸಾಧ್ಯವಾಗಲಿಲ್ಲ. ಈ ಸ್ಥಿತಿಯಲ್ಲಿ, ಅವನು ಮೃತದೇಹವನ್ನು ಕಾರಿನ ಡಿಕ್ಕಿಯಲ್ಲೇ ಬಿಟ್ಟು, ಮನೆಗೆ ಹಿಂದಿರುಗಿ ಮಲಗಿಕೊಂಡನು. ಪೊಲೀಸರ ಪ್ರಕಾರ, ಮನೆಗೆ ಬಂದ ನಂತರ ಮತ್ತೆ ಕುಡಿದು ನಿದ್ದೆ ಮಾಡಿದನು.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ, ಬೀದಿಯಲ್ಲಿ ನಿಂತಿದ್ದ ಕಾರಿನ ಡಿಕ್ಕಿಯೊಳಗಿಂದ ಮಹಿಳೆಯ ಶವ ಬಿದ್ದಿರುವುದನ್ನು ನೆರೆಹೊರೆಯವರು ಗಮನಿಸಿದರು. ತಕ್ಷಣ ಅವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬಂದು ತನಿಖೆ ನಡೆಸಿದಾಗ, ಆರೋಪಿ ವೀರೇಂದ್ರ ಇನ್ನೂ ಮನೆಯಲ್ಲೇ ಮಲಗಿದ್ದನು. ಅವನನ್ನು ಬಂಧಿಸಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ.





