ಚೆನ್ನೈ: ಹಿಂದಿನ ಕಾಲದಲ್ಲಿ ಮದುವೆಯಾದ ಹೊಸ ಜೋಡಿಗಳಿಗೆ ಕುಟುಂಬದ ಹಿರಿಯರು ‘ಶೀಘ್ರ ಸಂತಾನ ಪ್ರಾಪ್ತಿ’ಗಾಗಿ ಆಶೀರ್ವಾದ ಮಾಡುತ್ತಿದ್ದರು. ಆದರೆ, ಈಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಬೇಗ ಮಕ್ಕಳನ್ನು ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಜನಸಂಖ್ಯೆ ಹೆಚ್ಚಿಸಲು ಸಿಎಂ ಸ್ಟಾಲಿನ್ ಕರೆ
ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದ ಡಿಎಂಕೆ ಜಿಲ್ಲಾ ಕಾರ್ಯದರ್ಶಿಯ ವಿವಾಹ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ಜನಸಂಖ್ಯೆ ಆಧಾರದ ಮೇಲೆ ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಮರು ವಿಗಂಡಣೆ ಮಾಡಲು ಹೊರಟಿದೆ. ಈ ಕಾರಣದಿಂದ ತಮಿಳುನಾಡಿನ ಜನಸಂಖ್ಯೆ ಹೆಚ್ಚಬೇಕು ಎಂದು ಮನವಿ ಮಾಡಿದರು.
ತಮಿಳುನಾಡಿಗೆ ಆಗುವ ತಾರತಮ್ಯ ತಡೆಯಲು ಹೊಸ ಸೂಚನೆ
ಸ್ಟಾಲಿನ್ ಪ್ರಕಾರ, ಜನಸಂಖ್ಯೆ ಹೆಚ್ಚು ಇದ್ದರೆ ಮಾತ್ರ ತಮಿಳುನಾಡಿಗೆ ಹೆಚ್ಚು ಸಂಸದೀಯ ಸ್ಥಾನಗಳ ಸಿಗಲಿವೆ. ಹೀಗಾಗಿ, ಹೊಸದಾಗಿ ಮದುವೆಯಾದವರು ಕುಟುಂಬ ಯೋಜನೆ ತಂತ್ರವನ್ನು ಮುಲಾಜಿಲ್ಲದೆ ಮರುಪರಿಗಣಿಸಿ, ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಲು ಯೋಚಿಸಬೇಕು.
ಕೇಂದ್ರ ಸರ್ಕಾರದ ಗಡಿ ನಿರ್ಣಯ ತಂತ್ರದ ವಿರುದ್ಧ ಟೀಕೆ
ಕೇಂದ್ರ ಸರ್ಕಾರ ತಮಿಳುನಾಡಿಗೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗಡಿ ನಿರ್ಣಯವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಗಡಿ ನಿರ್ಣಯದ ಕುರಿತು ನಮ್ಮ ನಿಲುವನ್ನು ಚರ್ಚಿಸಲು ಮಾರ್ಚ್ 5ರಂದು ನಾನು ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು.