ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಗಳು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಾಲ್ಮೀಕಿ ನಿಗಮದಿಂದ ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡು ಸುಮಾರು 20 ಕೋಟಿ ರೂ.ಕ್ಕೂ ಹೆಚ್ಚು ಹಣವನ್ನು ಬಳ್ಳಾರಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಣ ಹಂಚಿಕೆ ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಭವಿಸಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ, ಇಡಿಗೆ ಅಧಿಕಾರಿಗಳು ಹಲವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಪಟ್ಟವರಲ್ಲಿ ಕೆಳಗಿನ ಜನಪ್ರತಿನಿಧಿಗಳು ಸೇರಿದ್ದಾರೆ.
-
ತುಕಾರಾಂ, ಸಂಡೂರು ಲೋಕಸಭಾ ಸದಸ್ಯ
-
ಭರತ್ ರೆಡ್ಡಿ, ಬಳ್ಳಾರಿ ನಗರ ಶಾಸಕ
-
ಡಾ. ಎನ್.ಟಿ. ಶ್ರೀನಿವಾಸ, ಕೂಡ್ಲಿಗಿ ಶಾಸಕ
-
ಗಣೇಶ್, ಕಂಪ್ಲಿ ಶಾಸಕ
-
ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ
ಎಂಟು ತಂಡಗಳಲ್ಲಿ ಎಡಿಯ ದಾಳಿ ಕಾರ್ಯಾಚರಣೆ
ಇಡಿ ಅಧಿಕಾರಿಗಳು ಎಂಟು ವಿಭಿನ್ನ ತಂಡಗಳಲ್ಲಿ ಬೆಳಿಗ್ಗೆ ಮೊದಲೇ ದಾಳಿ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯುತ್ತಿದ್ದು, ಶಾಸಕರು ಹಾಗೂ ಸಂಸದರ ನಿವಾಸಗಳ ಜೊತೆಗೆ ಅವರ ಗೃಹ ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ.
ಈ ಶೋಧದ ವೇಳೆ ಲ್ಯಾಪ್ಟಾಪ್, ಮೊಬೈಲ್, ಬ್ಯಾಂಕ್ ಪಾಸ್ಬುಕ್, ಹಣಕಾಸು ದಾಖಲಾತಿಗಳು ಹಾಗೂ ಇತರ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅನುದಾನದ ಲೆಕ್ಕಪತ್ರಗಳು, ಹಣದ ವರ್ಗಾವಣೆ ಸಂಬಂಧಿತ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ದಾಳಿ ನಡೆದ ಸ್ಥಳಗಳ ವಿವರಗಳು
-
ಕಂಪ್ಲಿ ಶಾಸಕ ಗಣೇಶ್ ಹಾಗೂ ಕುರುಗೋಡು ನಿವಾಸ
-
ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಅವರ ಮನೆ ಮತ್ತು ಕಚೇರಿ
-
ಬಳ್ಳಾರಿ ಶಾಸಕರು ಭರತ್ ರೆಡ್ಡಿ ಮತ್ತು ನಾಗೇಂದ್ರ ಅವರ ನಿವಾಸಗಳು
-
ಸಂಸದ ತುಕಾರಾಂ ಅವರ ಸಂಡೂರಿನ ನಿವಾಸ
ಇಡಿಯಿಂದ ಅಧಿಕೃತ ಸ್ಪಷ್ಟನೆ
ಈಡಿಗೆ ಮೂಲಗಳ ಪ್ರಕಾರ, ದಾಖಲೆ ಆಧಾರಗಳ ಜತೆಗೆ ಸಾಕ್ಷ್ಯಗಳ ಪೂರಕವಾಗಿ ಮಾತ್ರ ಈ ದಾಳಿ ನಡೆಯುತ್ತಿದ್ದು, ಯಾವುದೇ ರಾಜಕೀಯ ಪ್ರೇರಣೆಯಿಂದ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಳೆದ ಹಲವು ತಿಂಗಳುಗಳಿಂದ ವಾಲ್ಮೀಕಿ ನಿಗಮದ ಅನುದಾನ ಬಳಕೆ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದವು. ಇದರ ಜೊತೆಗೆ ಚುನಾವಣಾ ಸಮಯದಲ್ಲಿ ಆರ್ಥಿಕ ತೊಂದರೆಯ ಪೂರೈಕೆಗೆ ಈ ನಿಧಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಸರ್ಕಾರದ ವಿರೋಧಿ ಪಕ್ಷಗಳ ನೇತೃತ್ವದ ಹಲವು ಮುಖಂಡರು ಈ ದಾಳಿಗಳನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ತನಿಖಾ ಸಂಸ್ಥೆಗಳು ತನಿಖೆಯ ಮೂಲ ಉದ್ದೇಶ ಹಣದ ಮೂಲ ಮತ್ತು ಅದರ ಬಳಕೆಯನ್ನು ಪತ್ತೆ ಹಚ್ಚುವುದು ಎಂದು ಸ್ಪಷ್ಟಪಡಿಸಿವೆ.