ಡಿಕೆ ಬ್ರದರ್ಸ್‌ ‘ಕನಕೋತ್ಸವ’ದಲ್ಲಿ ಉಪೇಂದ್ರ-ರಿಷಬ್ ಮಿಂಚು

ಕಾಂತಾ ಡೈಲಾಗ್.. A ಸಾಂಗ್.. ಅನಂತನ ಅವಾಂತರ ಮೆಲುಕು

Untitled design 2026 02 02T181351.361

ಖಾಸಗಿ ಕಾರ್ಯಕ್ರಮಗಳಿಂದ ದೂರ ಇರ್ತಿದ್ದ ಸ್ಟಾರ್‌‌ಗಳೇ ಇದೀಗ ಡಿಕೆ ಬ್ರದರ್ಸ್‌ ನಡೆಸ್ತಿರೋ ಕನಕಪುರದ ಕನಕೋತ್ಸವದಲ್ಲಿ ಮಿಂಚು ಹರಿಸುತ್ತಿದ್ದಾರೆ. ಆಲ್ಮೋಸ್ಟ್ ಆಲ್ ಸ್ಯಾಂಡಲ್‌ವುಡ್‌ನ ಎಲ್ಲಾ ಸ್ಟಾರ್‌ಗಳು, ಸ್ಟಾರ್ ಟೆಕ್ನಿಷಿಯನ್ಸ್ ಈ ಉತ್ಸವಕ್ಕೆ ಸಾಕ್ಷಿ ಆಗಿದ್ದಾರೆ. ಅದ್ರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ವೇದಿಕೆಯಲ್ಲಿ ಮಿಂಚಿದ್ದು ಅಚ್ಚರಿ.

 

ಕನಕಪುರದಲ್ಲಿ ಡಿಕೆ ಬ್ರದರ್ಸ್‌ ಆದಂತಹ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಇಬ್ಬರೂ ಸೇರಿ ಕನಕೋತ್ಸವ ಕಾರ್ಯಕ್ರಮವನ್ನು ಕೆಲ ವರ್ಷಗಳಿಂದ ನಿರಂತರವಾಗಿ ನಡೆಸ್ತಾ ಬರ್ತಿದ್ದಾರೆ. ಪ್ರತೀ ವರ್ಷದಿಂದ ಈ ವರ್ಷವೂ ಬಹಳ ಅದ್ದೂರಿಯಾಗಿ, ಕಲರ್‌ಫುಲ್ ಹಾಗೂ ಬ್ಯೂಟಿಫಿಲ್ ಆಗಿ ಪ್ರೋಗ್ರಾಂಗಳು ನಡೆಯುತ್ತಾ ಬರ್ತಿವೆ. ಈ ಬಾರಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳು, ಸ್ಟಾರ್ ಟೆಕ್ನಿಷಿಯನ್‌‌ಗಳು, ನಟಿಯರು, ಸಿಂಗರ್‌ಗಳು ಭಾಗಿಯಾಗಿದ್ದಾರೆ.

ಡಿಕೆ ಬ್ರದರ್ಸ್‌ ‘ಕನಕೋತ್ಸವ’ದಲ್ಲಿ ಉಪೇಂದ್ರ-ರಿಷಬ್ ಮಿಂಚು

ಕಾಂತಾ ಡೈಲಾಗ್.. A ಸಾಂಗ್.. ಅನಂತನ ಅವಾಂತರ ಮೆಲುಕು

ವಿಶೇಷ ಅಂದ್ರೆ ರಿಯಲ್ ಸ್ಟಾರ್ ಉಪೆಂದ್ರ ಬಹಳ ಸೆಲೆಕ್ಟೀವ್. ಆದ್ರೆ ಅವರೇ ಈ ಕನಕೋತ್ಸವದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇಂಟರೆಸ್ಟಿಂಗ್. ಹೋಗಿರೋದಷ್ಟೇ ಅಲ್ಲ, ಕಾಂತಾ ಡೈಲಾಗ್ ಹೊಡೆದು, ಎ ಸಿನಿಮಾದ ಸಾಂಗ್ ಹಾಡಿ, 36 ವರ್ಷಗಳ ಹಿಂದಿನ ಕಾಶೀನಾಥ್ ಸಿನಿಮಾದ ಶೂಟಿಂಗ್ ನಡೆಸಿದ್ದ ಕನಕಪುರದ ಬಗ್ಗೆ ನೆನೆದು ಪುಳಕಿತರಾಗಿದ್ದಾರೆ. ನೋಡುಗರು ಥ್ರಿಲ್ ಆಗುವ ರೀತಿ ಡ್ಯಾನ್ಸ್ ಕೂಡ ಮಾಡಿ ರಂಜಿಸಿದ್ದಾರೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ-1 ಬಿಗ್ಗೆಸ್ಟ್ ಹಿಟ್ ಬಳಿಕ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ತಿಲ್ಲ. ಆದ್ರೆ ಕನಕೋತ್ಸವದ ವೇದಿಕೆಯಲ್ಲಿ ಪ್ರತ್ಯಕ್ಷರಾಗಿರೋದು ಅಚ್ಚರಿ ಮೂಡಿಸಿದೆ. ನಿಮ್ಮಲ್ಲಿರೋ ಉತ್ಸಾಹ ನೋಡ್ತಿದ್ರೆ ಚೆನ್ನಾಗಿದ್ದೀರ ಅನಿಸ್ತಿದೆ ಎಂದ ಶೆಟ್ರು, ಕನಕೋತ್ಸವ ಹಾಗೂ ಕಾಂತಾರ ಸಿನಿಮಾಗಳಿಗಿರೋ ನಂಟಿನ ಗುಟ್ಟು ಬಿಚ್ಚಿಟ್ಟರು. ಅಲ್ಲದೆ ಕನಕಪುರ ಮಾದರಿ ಊರು ಅನ್ನೋದನ್ನ ಸಾವಿರಾರು ಮಂದಿಗೆ ವೇದಿಕೆ ಮೂಲಕ ಸಾರಿ ಹೇಳಿದ್ರು.

ಕಾಂತಾರ-ಕನಕೋತ್ಸವದ ಸೀಕ್ರೆಟ್ ಬಿಚ್ಚಿಟ್ಟ ಡಿವೈನ್ ಸ್ಟಾರ್..!

ಮೇಘಾ ಶೆಟ್ಟಿ ಡ್ಯಾನ್ಸ್ ನೋಡಿ ಹುಚ್ಚೆದ್ದು ಕುಣಿದ ಜನಸಾಗರ

ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಬ್ಯೂಟಿಫುಲ್ ಚೆಲುವೆ ಮೇಘಾ ಶೆಟ್ಟಿ ಕನಕೋತ್ಸವದಲ್ಲಿ ಸಖತ್ ಡ್ಯಾನ್ಸ್ ಮಾಡೋ ಮೂಲಕ ಅಲ್ಲಿ ನೆರೆದಿದ್ದವರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.

ಇದು ಚಿತ್ರರಂಗದ ನಟ್ಟು-ಬೋಲ್ಟ್ ಟೈಟ್ ಮಾಡ್ತೀನಿ ಅಂತ ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗತ್ತು ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದೆ. ಒಟ್ಟಾರೆ ಕನಕೋತ್ಸವ ನೆಪದಲ್ಲಿ ಇಷ್ಟು ಮಂದಿ ಕನ್ನಡ ಚಿತ್ರರಂಗದ ಸ್ಟಾರ್‌‌ಗಳನ್ನ ಕಣ್ತುಂಬಿಕೊಂಡ ಕನಕಪುರದ ಜನತೆ ನಿಜಕ್ಕೂ ಅದೃಷ್ಟವಂತರು.

 

 

 

Exit mobile version