ದಿನನಿತ್ಯ ರಾಜ್ಯದ ಜನರು ಬಳಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಆಗ್ತಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಅದರ ಜೊತೆಯಲ್ಲೆ ಈಗ ಸಾಂಬಾರು ಪದಾರ್ಥಗಳಾದ ಜೀರಿಗೆ ಹಾಗೂ ಸಾಸಿವೆಯಲ್ಲೂ ಕಲಬೆರಕೆ ಇದೆ ಎಂದು ಕೇಳಿ ಬರ್ತಿದೆ.
ಇಡ್ಲಿ, ಪನ್ನೀರ್, ಹೋಳಿಗೆ, ಹಸಿರು ಬಟಾಣಿ ಎಲ್ಲವೂ ಆಯ್ತು, ಈಗ ಒಗ್ಗರಣೆಗೆ ಬಳಸುವ ಜೀರಿಗೆ, ಸಾಸಿವೆಗೂ ಬಂತು ಕುತ್ತು. ಅಡುಗೆಯಲ್ಲಿ ಸಾಂಬಾರು ಪದಾರ್ಥಗಳೇ ಮುಖ್ಯ ಅವುಗಳಲ್ಲೂ ಕಲಬೆರಕೆ ಆಗಿರೋದು ಪತ್ತೆ ಆಗ್ತೀದೆ. ಸಾಂಬಾರು ಪದಾರ್ಥಗಳಾದ ಸಾಸಿವೆ, ಜೀರಿಗೆಗಳಲ್ಲೂ ಸಾಕಷ್ಟು ಕಲಬೆರಕೆ ಕಂಡು ಬಂದಿದೆ. ಇದಕ್ಕೆ ಬಣ್ಣ ಕೂಡ ಮಿಕ್ಸ್ ಮಾಡಲಾಗುತ್ತಿದೆ ಎಂದು ಖಚಿತವಾಗಿದೆ.
ನಿರಂತರ ಆಹಾರ ಕಲಬೆರೆಕೆ ಹಿನ್ನೆಲೆ ಗೃಹಿಣಿಯರು, ಜನರು ತಿನ್ನುವ ಆಹಾರದ ಕುರಿತು ಸಾಕಷ್ಟು ಆತಂಕ ಪಡುತ್ತಿದ್ದಾರೆ. ಇದರ ಜೊತೆಯಲ್ಲೇ ಮುಖ್ಯ ಸಾಂಬಾರು ಪದಾರ್ಥಗಳಾದ ಸಾಸಿವೆ ಮತ್ತು ಜೀರಿಗೆಯಲ್ಲೂ ಕಲಬೆರಕೆ ಆಗ್ತಿದೆ ಮತ್ತು ಅವುಗಳಿಗೆ ಕಲರ್ಸ್ ಕೂಡ ಮಿಕ್ಸ್ ಮಾಡಲಾಗುತ್ತಿದೆ ಹಾಗೂ ಅದರ ವಾಲ್ಯೂಮ್ ಹೆಚ್ಚಿಸಲು, ಮರದ ಡಸ್ಟ್ ಹಾಗೂ ಕಸ ಮಣ್ಣು ಸೇರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇದರ ಬಳಕೆ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.
ಎಲ್ಲ ರೀತಿಯ ಆಹಾರದಲ್ಲೂ ಬರಿ ಕಲಬೆರಿಕೆಗಳೇ ಪತ್ತೆ ಆಗುತ್ತಿದ್ದು, ಜನರು ಯಾವುದನ್ನ ತಿನ್ನಬೇಕು ಎಂದು ಯೋಚಿಸುವಂತಾಗಿದೆ. ಇನ್ನಾದರೂ ಸರ್ಕಾರ ಇದೆಲ್ಲದರ ಬಗ್ಗೆ ಎಚ್ಚೆತ್ತುಕೊಳ್ಳ ಬೇಕಿದೆ.