ವಿಧಾನಸೌಧದ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಿಗ್ಗೆ ಮನಿ, ಸಂಜೆಗೆ ಹನಿ ಎನ್ನುವ ಹಾಗೇ ಆಗ್ತಿದೆ. 48ಕ್ಕೂ ಹೆಚ್ಚು ಜನ ಸಚಿವರು ಈ ಹನಿಟ್ರ್ಯಾಪ್ಗೆ ಬಲಿಯಾಗಿದ್ದಾರೆ ಆದ್ರೆ ಅವರೇ ದೂರು ಕೊಡಲು ಹಿಂದೇಟು ಹಾಕ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ಹೊರಹಾಕಿದ್ರು.
ಈ ಎಲ್ಲಾ ಹನಿಟ್ರ್ಯಾಪ್ ಮತ್ತು ಸಿಡಿ ವಿವಾದಗಳು ಒಂದು ಕುರ್ಚಿಗಾಗಿ ನಡೆಯುತ್ತಿರುವ ರಾಜಕೀಯ ಆಟದ ಭಾಗವೇ ಎಂಬ ಅನುಮಾನ ಜನರಿಗೆ ಮೂಡುತ್ತಿದೆ. “ಆ ಸೀಡಿಯ ಹಿಂದೆ ಯಾರಿದ್ದಾರೆ? ಯಾರು ಸೀಡಿಯ ಮಾಲೀಕರು?” ಎಂದು ಪ್ರಶ್ನಿಸಿದ್ದಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಸಿಡಿ ತಯಾರಿಸಿದ್ದಾರೆ, ಅದೆಲ್ಲ ಹೊರಗೆ ಬರಲಿ ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸಂವಿಧಾನ ಬದಲಾವಣೆ ಹಾಗೂ ೪% ಮೀಸಲಾತಿ
ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಅವರು, ರಾಹುಲ್ ಗಾಂಧಿ “ಸಂವಿಧಾನ ರಕ್ಷಣೆ” ಬಗ್ಗೆ ಮಾತನಾಡುತ್ತಿದ್ದರೂ, ಕಾಂಗ್ರೆಸ್ ನೇತೃತ್ವದ ರಾಜ್ಯದ ಉಪ ಮುಖ್ಯಮಂತ್ರಿಯೇ ಸಂವಿಧಾನ ತಿದ್ದುಪಡಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ನಿಖಿಲ್ ಪ್ರಕಾರ, “ಕೇವಲ ಸಂವಿಧಾನದ ಪ್ರತಿ ಹಿಡಿದು ಗಂಟೆ ಅಲ್ಲಾಡಿಸಿದರೆ ಸಾಲದು. ಉಪ ಮುಖ್ಯಮಂತ್ರಿಯ ‘ತಲೆ ಬೋಲ್ಟ್’ ಸಡಿಲವಾಗಿದೆ. ಜನರು ಸ್ಪ್ಯಾನರ್ ಹಿಡಿದು ಸರಿಪಡಿಸಬೇಕಾಗಬಹುದು. ಮೈನಾರಿಟಿ ಮೀಸಲಾತಿ ವಿಚಾರದಲ್ಲಿ, ಜೈನ್ ಹಾಗೂ ಬೌದ್ಧ ಸಮುದಾಯಗಳನ್ನು ಒಳಗೊಳ್ಳುವಂತೆ ಮಾಡಬೇಕು ಎಂದು ಬಿಜೆಪಿ-ಜೆಡಿಎಸ್ ಒತ್ತಾಯಿಸಿದೆ.
ಆರ್ಡಿಎಸ್ಎಸ್ ಸ್ಕೀಮ್ ಹಾಗೂ ಸ್ಮಾರ್ಟ್ ಮೀಟರ್ ಹಗರಣ
ಕರ್ನಾಟಕದಲ್ಲಿ ಆರ್ಡಿಎಸ್ಎಸ್ (RDSS) ಯೋಜನೆ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿದ್ಯುತ್ ಇಲಾಖೆ “ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ” 48,000 ಕೋಟಿ ರೂಪಾಯಿಗಳ ಲೂಟಿ ನಡೆಸಲಾಗುತ್ತಿದೆ ಎಂದು ಅವರು ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರದ ಆರ್ಡಿಎಸ್ಎಸ್ ಯೋಜನೆಯಿಂದ ಯಾಕೆ ಹೊರಹೋದ್ರು..? ಇದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಗೋಲ್ಮಾಲ್ ನಡೆದಿರುವುದು ನಿಜ, ಅನುಮಾನವೇ ಇಲ್ಲ ಎಂದರು. ಇತರ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಪ್ರತಿ ಯೂನಿಟ್ 900 ರೂ. ಮಾತ್ರ ವೆಚ್ಚವಾದರೆ, ಕರ್ನಾಟಕದಲ್ಲಿ ಸಿಂಗಲ್-ಫೇಸ್ ಮೀಟರ್ಗೆ 4998 ರೂ. ಹಾಗೂ ಟ್ರಿಪಲ್-ಫೇಸ್ಗೆ 28,000 ರೂ. ದರ ನಿಗದಿ ಮಾಡಲಾಗಿದೆ. ಇದು ಮಾರುಕಟ್ಟೆ ದರಕ್ಕಿಂತ 9 ಪಟ್ಟು ಹೆಚ್ಚು. ತೆಲಂಗಾಣ ಮತ್ತು ಉತ್ತರ ಪ್ರದೇಶದಂತೆ ಇತರ ರಾಜ್ಯಗಳಲ್ಲಿ ಮಾಸಿಕ ಚಾರ್ಜ್ 50-60 ರೂ. ಇದ್ದರೆ, ಕರ್ನಾಟಕದಲ್ಲಿ 71 ರೂ. ಗೊತ್ತುಪಡಿಸಲಾಗಿದೆ. ಈ ವ್ಯತ್ಯಾಸಗಳು 10 ವರ್ಷಗಳಲ್ಲಿ 15,000 ಕೋಟಿ ರೂ. ಹೆಚ್ಚುವರಿ ಸಂಗ್ರಹಕ್ಕೆ ಸಂಗ್ರಹಕ್ಕೆ ಸ್ಕೆಚ್ ಹಾಕಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಟೆಂಡರ್ ಕರೆಯಬೇಕಾದ್ರೆ ನಿಯಮಾವಳಿಗಳನ್ನ ಪಾಲನೆ ಮಾಡಬೇಕು ಆದರೆ ನಿಯಮಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ನಿಖಿಲ್ ತಿಳಿಸಿದ್ದಾರೆ. ಸಾಮಾನ್ಯವಾಗಿ 45 ದಿನಗಳ ಕನಿಷ್ಠ ಸಮಯ ನೀಡಬೇಕಾದರೂ, ಸರ್ಕಾರ 34 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದೆ. ಪೊಲ್ ಮ್ಯಾನಿಪ್ಯಾಕ್ಚರ್ ಕಂಪನಿಗೆ ರಾಜಶ್ರಿ ಕೊಡ್ತಾರೆ. ಈ ಕಂಪನಿಯು ಟೆಕ್ನಿಕಲ್ ಹಾಗೂ ಫೈನಾನ್ಸಿಯಲ್ ಅರ್ಹತೆಗಳನ್ನು ಪೂರೈಸಿಲ್ಲ. ಯಾರ ಆಶೀರ್ವಾದದಿಂದ ಇವರಿಗೆ ಟೆಂಡರ್ ಕೊಟ್ಟಿದ್ದಾರೆ ಗೊತ್ತಿಲ್ಲಾ ಎಂದರು.