ಜಾತಿ ಗಣತಿ ವರದಿ: ಸರ್ಕಾರಕ್ಕೆ 4 ಅಂಶಗಳನ್ನ ಮುಂದಿಟ್ಟು ನಿಖಿಲ್ ಒತ್ತಾಯ!

ನಾಳೆಯ ಸಭೆ ಪ್ರತಿಯೊಬ್ಬ ಕನ್ನಡಿಗನ ವಿಶ್ವಾಸವನ್ನು ಪುನರ್ನಿರ್ಮಿಸಬೇಕು-ನಿಖಿಲ್

Film (68)

ಜಾತಿ ಜನಗಣತಿಯನ್ನ ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ನಿಲ್ಲಿಸಬೇಕು, ಜಾತಿ ಗಣತಿಯ ಸಂಪೂರ್ಣ ಡೇಟಾವನ್ನು ಪಾರದರ್ಶಕವಾಗಿ ಹಂಚಿಕೊಳ್ಳಲಾಗಿಲ್ಲ. ಪೂರ್ಣ ವರದಿಯನ್ನು ಯಥಾಸ್ಥಿತಿಯಲ್ಲಿ ಬಿಡುಗಡೆ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ 2015ರ ಜಾತಿ ಜನಗಣತಿ ಕುರಿತು ನಾಳೆ ವಿಶೇಷ ಸಚಿವ ಸಂಪುಟ ಸಭೆ ನಡೆಸಲಿದೆ. ಈ ವಿಷಯವು ಸೂಕ್ಷ್ಮವಾಗಿದ್ದು ಸಮುದಾಯಗಳಲ್ಲಿ ಅಶಾಂತಿ ಮತ್ತು ಗೊಂದಲವನ್ನು ಸೃಷ್ಟಿಸಿದೆ. ನಾಳಿನ ಸಭೆಯು ಪ್ರತಿಯೊಬ್ಬ ಕನ್ನಡಿಗನ ವಿಶ್ವಾಸವನ್ನು ಪುನರ್ನಿರ್ಮಿಸಬೇಕು ಎಂದರು.

ಜಾತಿ ಗಣತಿ ಸಮೀಕ್ಷೆಯು ತೆರಿಗೆದಾರರ ಹಣವನ್ನು ಬಳಸಿದೆ ಮತ್ತು ಜಾತಿ ಮಾತ್ರವಲ್ಲದೆ ಆದಾಯ, ಶಿಕ್ಷಣ, ಉದ್ಯೋಗಗಳು, ಭೂಮಿ ಮತ್ತು ವಸತಿಯಂತಹ ಪ್ರಮುಖ ಸೂಚಕಗಳನ್ನು ಒಳಗೊಂಡಿದೆ. ನಾಳೆ ನಡೆಯುವ ಸಭೆಯಲ್ಲಿ ಈ ಕೆಳಗಿನ ಅಂಶಗಳನ್ನ ಪರಿಗಣಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಪ್ರತಿಯೊಬ್ಬ ಕನ್ನಡಿಗನು ಜಾತಿ ಅಥವಾ ಧರ್ಮವನ್ನು ಮೀರಿ ಉತ್ತಮ ಜೀವನಕ್ಕೆ ಅರ್ಹನಾಗಿದ್ದಾನೆ.

Exit mobile version