ಕನ್ನಡ ಪರ ಹೋರಾಟಗಾರರು ಇಂದು ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ರೂ. ಬಂದ್ ಇದ್ದರೂ ಕೂಡ ಬಸ್, ಆಟೋ ಸೇವೆ ಎಂದಿನಂತೆ ಇದ್ದವು. ಅಂಗಡಿ ಹೊಟೇಲ್ಗಳು ಓಪನ್ ಆಗಿದ್ದವು.ಜನ ಜೀವನ ಯಥಾ ಸ್ಥಿತಿಯಲ್ಲಿತ್ತು.ಎಂದಿನಂತೆ ಇತ್ತು ಬಸ್, ಆಟೋ-ಕ್ಯಾಬ್ ಸಂಚಾರ ಸಾಗುತ್ತಿತ್ತು.ಹೊಟೇಲ್, ಮಾಲ್ ಎಲ್ಲವೂ ಓಪನ್ ಆಗಿದ್ದವು.ಜನ ಜೀವನದಲ್ಲಿ ಏರು ಪೇರು ಏನೂ ಇರಲಿಲ್ಲ ಎಲ್ಲಾ ಸಹಜವಾಗಿತ್ತು.
ಮರಾಠಿ ಪುಂಡಾರ ಅಟ್ಟಹಾಸ, ಕೇಂದ್ರ ಸರ್ಕಾರದ ಧೋರಣೆಯನ್ನ ಖಂಡಿಸಿ, ಮಹಾದಾಯಿ, ಕಳಸ ಬಂಡೂರಿ ಯೋಜನೆ ಜಾರಿ ಆಗಬೇಕು ಎಂಬುದನ್ನು ಸೇರಿಒಟ್ಟು 20 ಸಮಸ್ಯೆಗಳನ್ನ ಮುಂದಿಟ್ಟು ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು.ಆದರೆ ಇಂದಿನ ಬಂದ್ನಿಂದ ಸಾರ್ವಜನಿಕರಿಗೆ ಯಾವುದೇ ರೀತಿ ಎಫೆಕ್ಟ್ ಆಗಿಲ್ಲ.
ಬಂದ್ ಅಂದ್ರೆ ಬಸ್,ಆಟೋಗಳು ಇರೋದಿಲ್ಲ, ಕೆಲಸಕ್ಕೆ ಹೇಗೆ ಹೋಗೋದು ಹೀಗೆ ಸಾಕಷ್ಟು ಗೊಂದಲಗಳು ಎಲ್ಲರಲ್ಲೂ ಮನೆ ಮಾಡಿರುತ್ತದೆ.ಆದರೆ ಇಂದು ನಡೆದ ಹೋರಾಟ ಕೇವಲ ಪ್ರತಿಭಟನೆಗೆ ಸೀಮಿತವಾಗಿದ್ದು ಎಂದಿನಂತೆ ಬಸ್, ಆಟೋ ಕ್ಯಾಬ್ ಸಂಚಾರವಿತ್ತು.
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಬಂದ್ಗೆ ಕರೆನೀಡಲಾಗಿತ್ತು. ಹೀಗಾಗಿ ಬಸ್ ಓಡಾಟ ಇರುತ್ತಾ ಅನ್ನೋ ಗೊಂದಲ ಸಾಕಷ್ಟು ಜನರಲ್ಲಿ ಇತ್ತು.ಆದ್ರೆ ಬಸ್ ಕಂಡಕ್ಟರ್ಗಳು ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದು. ಎಂದಿನಂತೆ ಬಸ್ ಸಂಚಾರವಾಗುತ್ತಿತ್ತು. ಇನ್ನೂ ಕೇವಲ ಬಸ್ ಸಂಚಾರ ಅಷ್ಟೇ ಅಲ್ಲದೇ ಆಟೋ, ಕ್ಯಾಬ್ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ರು ಸಹ ಆಟೋ, ಕ್ಯಾಬ್ಗಳು ರಸ್ತೆಗಿಳಿದ ಪರಿಣಾಮ ಸಾರ್ವಜನಿಕರಿಗೆ ಕೊಂಚವು ಕೂಡ ತೊಂದರೆಯಾಗಿಲ್ಲ.
ವಿಕೇಂಡ್ ಆದ ಕಾರಣ ಸಾಕಷ್ಟು ಜನರು ಮಾಲ್, ಸಿನಿಮಾ ಥಿಯೇಟರ್, ಹೊಟೇಲ್ಗಳಿಗೆ ಹೋಗುತ್ತಾರೆ. ಇವತ್ತು ಬಂದ್ ಇದ್ದ ಕಾರಣ ಮಧ್ಯಾಹ್ನ 12 ಗಂಟೆಯವರೆಗೂ ಮಾಲ್ಗಳು ಕ್ಲೋಸ್ ಆಗಿದ್ದವು ನಿಧಾನವಾಗಿ ಪ್ರತಿಭಟನಾ ಕಾವು ತಣ್ಣಾಗದಾ ನಂತರ ಎಲ್ಲ ಮಾಲ್ಗಳು ಓಪನ್ ಆದವು. ಅದೇ ರೀತಿ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್ಗೆ ಬೆಂಬಲಸೂಚಿಸಿದ್ದು.ಮೊದಲ ಶೋವನ್ನ ನಿಲ್ಲಿಸಿತು. ಆದಾದ ನಂತರ ಚಲನಚಿತ್ರ ಮಂದಿರಗಳು ಸಹ ಓಪನ್ ಆದವು.
ಬಂದ್ಗೆ ಮೊದಲಿನಿಂದಲೂ ಹೊಟೇಲ್ ಉದ್ಯಮದವರು ನೈತಿಕ ಬೆಂಬಲ ನೀಡಿದ್ದರು.ಎಂದಿನಂತೆ ಹೊಟೇಲ್ಗಳು ಸಹ ಓಪನ್ ಆಗಿದ್ದು ಜನರಿಗೆ ಯಾವುದೇ ತಿಂಡಿ ಊಟದ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲಾ. ಇನ್ನೂ ಜನ ಕೂಡ ಬಂದ್ಗೆ ಬೆಂಬಲ ಸೂಚಿಸಿದ್ದು ಒಂದಿಷ್ಟು ಜನ ಮನೆಯಿಂದ ಹೊರಬರದೆ ಇರದ ಕಾರಣ ಬಸ್ಗಳಿ ಖಾಲಿ ಹೊಡೆಯುತ್ತಿತ್ತು.
ಬಂದ್ಗ್ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದೇ ಎಲ್ಲರೂ ಕೂಡ ನಿರಾಂತರವಾಗಿ ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದು. ಕೆಲ ಜನ ಮಾತ್ರ ಬಂದ್ ಬಿಸಿ ತಟ್ಟುತ್ತೆ ಅಂತಾ ವಿಕೆಂಡ್ನಲ್ಲಿ ಬೆಚ್ಚಗೆ ಮಲಗಿದ್ದಂತೂ ಸತ್ಯ.