ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸುದ್ದಿ ಚರ್ಚೆಯಾಗುತ್ತಿತ್ತು. ಪ್ರಭಾವಿ ನಾಯಕ ಸಚಿವರನ್ನೇ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ ಎನ್ನುವ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸದನದ ಸ್ಪೀಕರ್ ಎದುರು ಹನಿಟ್ರ್ಯಾಪ್ ಕಹಾನಿ ಬಿಚ್ಚಿಟ್ಟರಾ ಯತ್ನಾಳ್.
ರಾಜ್ಯದಲ್ಲಿ ಹನಿಟ್ರ್ಯಾಪ್ ಬ್ಲಾಕ್ ಮೇಲ್ ಶುರುವಾಗಿದೆ. ಹನಿಟ್ರ್ಯಾಪ್ ಸುಳಿಯಲ್ಲಿ ಪ್ರಭಾವಿ ಸಚಿವರೇ ಸಿಲುಕಿದ್ದಾರೆ. ಇನ್ನು ಈ ಹನಿಟ್ರ್ಯಾಪ್ ಜಾಲಕ್ಕೆ ಒಳಗಾದ ನಾಯಕ ಯಾರು ಎಂಬ ಚರ್ಚೆ ನಡೆಯುತ್ತಲೇ ಇತ್ತು. ರಾಜ್ಯ ರಾಜಕೀಯ ಭವಿಷ್ಯಕ್ಕೆ ಹನಿಟ್ರ್ಯಾಪ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಶಾಸಕ ಯತ್ನಾಳ್.
ಇದೀಗ ಕೊನೆಗೂ ಸಹಕಾರಿ ಸಚಿವ ಕೆಎನ್ ರಾಜಣ್ಣ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ವೇಳೆ ಹಲವು ನಾಯಕರು ಹನಿಟ್ರ್ಯಾಪ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ಕೆ ಎನ್ ರಾಜಣ್ಣ ಹನಿಟ್ರ್ಯಾಪ್ ವಿಚಾರ ಹೇಳುತ್ತಿದ್ದಂತೆ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿದ್ದು, ನನ್ನ ಮೇಲೆ ರೇಪ್ ಕೇಸ್ ಹಾಕಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಮುನಿತರತ್ನ ಕಣ್ಣೀರು ಹಾಕಿದ್ದಾರೆ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ ಎಂದ ಶಾಸಕ ಮುನಿರತ್ನ ಹೇಳಿದ್ದಾರೆ. ರೇಪ್ ಮಾಡಿದ್ದೀನಿ ಅಂತ ಆರೋಪ ಮಾಡಿದ್ದಾರೆ.
ನನ್ನ ಮೇಲೂ ಅತ್ಯಾಚಾರ ಆಗಿದೆ..ನನ್ನನ್ನು ಗಲ್ಲಿಗೇರಿಸಿ ಈ ಕೇಸ್ನಿಂದ ನನ್ನ ಜೀವನವೇ ಹಾಳಾಗಿದೆ ಎಂದ ಮುನಿರತ್ನ. ಅಧ್ಯಕ್ಷರೇ..ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ತೇನೆ , ರೇಪ್ ಕೇಸ್ನಿಂದ ನನ್ನ ಮರ್ಯಾದೆ ಕಾಪಾಡಿ ಎಂದ ಮುನಿ,ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ, ನನ್ನ ಕೇಸ್ನ ಸಿಬಿಐಗೆ ಕೊಡಿ ಅಧ್ಯಕ್ಷರೇ ಎಂದರು.ಈ ವೇಳೆ ಅಜ್ಜಯ ಮತ್ತೆ ಶನಿ ಮಹಾತ್ಮ ದೇವರ ಫೋಟೋ ತೋರಿಸಿ ಪ್ರಮಾಣ ಮಾಡಲಿ ಎಂದು ಸವಾಲು ಮಾಡಿದ್ದಾರೆ.
ಒಬ್ರಲ್ಲ, ಇಬ್ರಲ್ಲ ಹನಿಟ್ರ್ಯಾಪ್ನಲ್ಲಿ ಸಿಲುಕಿರೋದು ಎಷ್ಟು ಜನ?
ಹನಿ ಕುಡಿಯಲು ಹೋಗಿ ಸಾಲು ಸಾಲು ನಾಯಕರು ಲಾಕ್ಹಾಗಿದ್ದಾರೆ. ಬರೋಬ್ಬರಿ 48 ಜನರು ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದಾರೆ. ವಿಧಾನಸಭೆಯಲ್ಲಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂಬುದನ್ನು ಒಪ್ಪಿಕೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಎಲ್ಲ ಪಕ್ಷಗಳ 48 ನಾಯಕರ ಹನಿಟ್ರ್ಯಾಪ್ ಪೆನ್ಡ್ರೈವ್ಗಳು ಇವೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜಕಾರಣ ಸಿಡಿ ಕಾರ್ಖಾನೆ ಆಗಿದೆ. ಕಾಂಗ್ರೆಸ್ನಲ್ಲೊಂದು ಸಿಡಿ ಫ್ಯಾಕ್ಟರಿ, ಬಿಜೆಪಿಯಲ್ಲೊಂದು ಸಿಡಿ ಫ್ಯಾಕ್ಟರಿ ಓಪನ್ ಹಾಗಿದೆ. ಇದು ಬರೀ ರಾಜ್ಯಕ್ಕೆ ಮಾತ್ರ ಸೀಮಿತ ಅಲ್ಲ, ರಾಷ್ಟ್ರಕ್ಕೂ ಹಬ್ಬಿದೆ. ಹನಿಟ್ರ್ಯಾಪ್ ವಿಚಾರಕ್ಕೆ ನಾನು ಲಿಖಿತ ದೂರು ನೀಡ್ತೀನಿ ಎಂದ ರಾಜಣ್ಣ.