ಜಾತಿ ಗಣತಿ ವರದಿಯ ಸುತ್ತ ಅನುಮಾನಗಳ ಹುತ್ತ ನಿರ್ಮಾಣವಾಗಿದೆ. ಏಕೆಂದರೆ, ಈ ರಿಪೋರ್ಟ್ ನಂಬೋಕೆ ಸಾಧ್ಯವೇ ಇಲ್ಲದಂಥಾ ಸನ್ನಿವೇಶ ನಿರ್ಮಾಣವಾಗಿದೆ. ಪ್ರಬಲ ಸಮುದಾಯದ ಸಂಖ್ಯೆಯನ್ನೇ ಈ ವರದಿ ಉಲ್ಟಾ ಮಾಡಿದ್ಯಾ ಅನ್ನೋ ಪ್ರಶ್ನೆಯೂ ಎದ್ದಿದೆ. ಜಾತಿ ಲೆಕ್ಕಾಚಾರದಲ್ಲಿ ಯಾವ ಜಾತಿಗೆ ಮೋಸ ಆಗಿದೆ? ಈ ಜಾತಿ ಗಣತಿ ಹಳಿ ತಪ್ಪಿದ್ಯಾ? ಅನ್ನೋ ಪ್ರಶ್ನೆಗಳು ಎದ್ದಿವೆ.
ಅದರಲ್ಲೂ ಒಕ್ಕಲಿಗರ ಜಾತಿ ಲೆಕ್ಕಾಚಾರವನ್ನಂತೂ ನಂಬೋದೇ ಕಷ್ಟವಾಗಿದೆ. ಈ ರಿಪೋರ್ಟ್ ಪ್ರಕಾರ ಒಕ್ಕಲಿಗ ಮತ್ತು ಉಪಜಾತಿಗಳು ಸೇರಿ ಒಟ್ಟು ಜನಸಂಖ್ಯೆ 61,58,352. ಈ ರಿಪೋರ್ಟ್ ಪ್ರಕಾರ ಗಂಗಡ್ಕರ್ ಒಕ್ಕಲಿಗರ ಸಂಖ್ಯೆ ಕೇವಲ 82,589 ಎಂದು ವರದಿ ತಿಳಿಸಿದೆ.
ಈ ರಿಪೋರ್ಟ್ ಕೊಟ್ಟಿರೋ ಅಂಕಿ ಅಂಶವನ್ನ ನಂಬಲು ಸಾಧ್ಯ ಇಲ್ಲ ಎನ್ನುವಂತಾಗಿದೆ. ಯಾಕಂದ್ರೆ, ಹಳೇ ಮೈಸೂರು ಪ್ರದೇಶಗಳಲ್ಲಿ ಗಂಗಡ್ಕರ್ ಒಕ್ಕಲಿಗರ ಸಂಖ್ಯೆ ಲಕ್ಷಾಂತರದಲ್ಲಿದೆ. ರಾಮನಗರ, ಮಂಡ್ಯ, ತುಮಕೂರು, ಮೈಸೂರು, ಹಾಸನ ಜಿಲ್ಲೆಗಳಂತಹ ಪ್ರದೇಶಗಳಲ್ಲಿ ಇವರೇ ಹೆಚ್ಚು. ಲಕ್ಷ ಲಕ್ಷ ಇರೋ ಗಂಗಡ್ಕರ್ ಒಕ್ಕಲಿಗರ ಸಂಖ್ಯೆ ಕೇವಲ 82,589 ಎಂದು ವರದಿಯಲ್ಲಿ ಹೇಳಿರೋದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ಜಾತಿ ಗಣತಿ ವರದಿಯ 9 ಪ್ರಮುಖ ಡೌಟ್ಗಳು!
ಡೌಟ್ ನಂ.1
ವರದಿಯ ಪ್ರಕಾರ, ಗಂಗಡ್ಕರ್ ಒಕ್ಕಲಿಗರ ಜನಸಂಖ್ಯೆ ಕೇವಲ 82,589. ಆದರೆ, ಹಳೇ ಮೈಸೂರು ಪ್ರದೇಶದ ಹಾಸನ, ಮಂಡ್ಯ, ರಾಮನಗರ, ತುಮಕೂರು, ಮತ್ತು ಮೈಸೂರು ಜಿಲ್ಲೆಗಳಲ್ಲಿ ಗಂಗಡ್ಕರ್ ಒಕ್ಕಲಿಗರ ಸಂಖ್ಯೆ ಲಕ್ಷಾಂತರದಲ್ಲಿದೆ. ಹಾಸನ ಜಿಲ್ಲೆಯೊಂದರಲ್ಲೇ ಇವರ ಸಂಖ್ಯೆ 3 ಲಕ್ಷ ದಾಟುತ್ತದೆ ಎಂದು ಮೂಲಗಳು ತಿಳಿಸಿವೆ. ದೇವೇಗೌಡ ಕುಟುಂಬ, ಡಿಕೆ ಶಿವಕುಮಾರ್, ಮತ್ತು ಎಸ್.ಎಂ. ಕೃಷ್ಣ ಗಂಗಡ್ಕರ್ ಒಕ್ಕಲಿಗರಾಗಿದ್ದರೂ ಈ ಸಂಖ್ಯೆಯ ಕುರಿತಾಗಿ ಕೊಟ್ಟಿರುವ ನಂಬರ್ ನಂಬಲಸಾಧ್ಯವಾಗಿದೆ!
ಡೌಟ್ ನಂ.2
ವರದಿಯಲ್ಲಿ ಕಮ್ಮ ಸಮುದಾಯದ ಜನಸಂಖ್ಯೆ 1,11,739 ಎಂದು ತಿಳಿಸಲಾಗಿದೆ, ಇದು ಗಂಗಡ್ಕರ್ ಒಕ್ಕಲಿಗರಿಗಿಂತಲೂ ಹೆಚ್ಚು. ಈ ಅಂಕಿಅಂಶವನ್ನು ನಂಬಲು ಕಷ್ಟವಾಗಿದೆ.
ಡೌಟ್ ನಂ.3
ವರದಿಯ ಪ್ರಕಾರ, ಮರಸು ಒಕ್ಕಲಿಗರ ಸಂಖ್ಯೆ ಕೇವಲ 3,859. ಆದರೆ, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ಬೆಂಗಳೂರುನಂತಹ ಪ್ರದೇಶಗಳಲ್ಲಿ ಮರಸು ಒಕ್ಕಲಿಗರ ಸಂಖ್ಯೆ ಲಕ್ಷಾಂತರದಲ್ಲಿದೆ. ಆರ್. ಅಶೋಕ್, ಬಚ್ಚೇಗೌಡ, ಮತ್ತು ಅಶ್ವತ್ಥನಾರಾಯಣ ಈ ಉಪಜಾತಿಗೆ ಸೇರಿದವರು. ಈ ಕಡಿಮೆ ಸಂಖ್ಯೆ ವಾಸ್ತವಕ್ಕೆ ವಿರುದ್ಧವಾಗಿದೆ.
ಡೌಟ್ ನಂ.4
ವರದಿಯಲ್ಲಿ ಕುಂಚಿಟಿಗ ಒಕ್ಕಲಿಗರ ಜನಸಂಖ್ಯೆ 41,188 ಎಂದು ತಿಳಿಸಲಾಗಿದೆ. ಆದರೆ, ಶಿರಾ, ನೆಲಮಂಗಲ, ಮಧುಗಿರಿ, ತುಮಕೂರು, ಮತ್ತು ಕೊರಟಗೆರೆ ಪ್ರದೇಶಗಳಲ್ಲಿ ಇವರ ಸಂಖ್ಯೆ ಲಕ್ಷಕ್ಕೂ ಹೆಚ್ಚು ಎಂದು ಮೂಲಗಳು ತಿಳಿಸಿವೆ. ಟಿ.ಬಿ. ಜಯಚಂದ್ರರಂಹ ನಾಯಕರು ಕುಂಚಿಟಿಗ ಒಕ್ಕಲಿಗರಾಗಿದ್ದಾರೆ.
ಡೌಟ್ ನಂ.5
ವರದಿಯ ಪ್ರಕಾರ, ರೆಡ್ಡಿಗಳ ಜನಸಂಖ್ಯೆ 2,87,372. ಆದರೆ, ವೇಮನ ರೆಡ್ಡಿ ಸಮುದಾಯವನ್ನು ವರದಿಯಲ್ಲಿ ಗುರುತಿಸಲಾಗಿಲ್ಲ. ಜನಾರ್ದನ ರೆಡ್ಡಿ, ರಾಮಲಿಂಗಾರೆಡ್ಡಿ ಮತ್ತು ಸತೀಶ್ ರೆಡ್ಡಿ ರೆಡ್ಡಿ ಸಮುದಾಯಕ್ಕೆ ಸೇರಿದವರು. ವೇಮನ ರೆಡ್ಡಿಯನ್ನು ಒಕ್ಕಲಿಗ ರೆಡ್ಡಿಗೆ ಸೇರಿಸಲಾಗಿದೆಯೇ ಅಥವಾ ರೆಡ್ಡಿ ಗುಂಪಿಗೆ ಸೇರಿಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.
ಡೌಟ್ ನಂ.6
ತಿಪ್ಪಾರೆಡ್ಡಿ ಮತ್ತು ಉದ್ಯಮಿ ರೆಡ್ಡಿ ವೀರಣ್ಣನಂತಹವರು ಕಮ್ಮ ಸಮುದಾಯಕ್ಕೆ ಸೇರಿದವರಾದರೂ, ರೆಡ್ಡಿ ಎಂಬ ಉಪನಾಮದಿಂದಾಗಿ ರೆಡ್ಡಿ ಗುಂಪಿಗೆ ಸೇರಿಸಲಾಗಿದೆಯೇ ಎಂಬ ಗೊಂದಲ ಇದೆ.
ಡೌಟ್ ನಂ.7
ಶಾಸಕ ಮುನಿರತ್ನ ಮತ್ತು ರಾಕ್ಲೈನ್ ವೆಂಕಟೇಶ್ ಕಮ್ಮ ನಾಯ್ಡುಗೆ ಸೇರಿದವರು. ಆದರೆ, ವರದಿಯಲ್ಲಿ ಇವರನ್ನು ಕಮ್ಮಗೆ ಸೇರಿಸಲಾಗಿದೆಯೇ ಅಥವಾ ನಾಯ್ಡುಗೆ ಸೇರಿಸಲಾಗಿದೆಯೇ ಎಂಬ ಅನಿಶ್ಚಿತತೆ ಇದೆ.
ಡೌಟ್ ನಂ.8
ಮಾಜಿ ಸಂಸದೆ ಸುಮಲತಾ ಮತ್ತು ಮಾಜಿ ಸಚಿವ ಸೀತಾರಾಂ ಬಲಿಜ ನಾಯ್ಡುಗೆ ಸೇರಿದವರು. ಆದರೆ, ಇವರನ್ನು ವರದಿಯಲ್ಲಿ ಬಲಿಜಗೆ ಸೇರಿಸಲಾಗಿದೆಯೇ ಅಥವಾ ನಾಯ್ಡುಗೆ ಸೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಡೌಟ್ ನಂ.9
ವರದಿಯಲ್ಲಿ ರೆಡ್ಡಿ, ನಾಯ್ಡು, ಮತ್ತು ಬಲಿಜ ಸಮುದಾಯಗಳನ್ನು ಒಕ್ಕಲಿಗ ಉಪಜಾತಿಗಳು ಎಂದು ಸೇರಿಸಲಾಗಿದೆ. ಆದರೆ, ಒಕ್ಕಲಿಗ ಸಂಘಕ್ಕೆ ನಾಯ್ಡು, ರೆಡ್ಡಿ, ಬಲಿಜ ಈ ಸಮುದಾಯಗಳು ಸದಸ್ಯರೇ ಅಲ್ಲ! ಒಂದು ವೇಳೆ ಒಕ್ಕಲಿಗ ಸಂಘಕ್ಕೆ ನಾಯ್ಡು, ರೆಡ್ಡಿ, ಬಲಿಜ ಸಮುದಾಯಗಳು ಸದಸ್ಯರಾದರೆ ಜನಾರ್ದನ ರೆಡ್ಡಿಯಂತಹವರೂ ಒಕ್ಕಲಿಗ ಸಂಘದ ಅಧ್ಯಕ್ಷರಾಗಬಹುದು! ಈ ಜಾತಿ ಗಣತಿ ವರದಿಯೇ ಬೇರೆ.. ವಾಸ್ತವವೇ ಬೇರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ!
ಈ ಜಾತಿ ಗಣತಿ ವರದಿಯಿಂದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಒಕ್ಕಲಿಗ ಸಮುದಾಯದ ಗುರುತು ಮತ್ತು ಪ್ರಾತಿನಿಧ್ಯದ ಬಗ್ಗೆ ಈ ವರದಿಯಿಂದ ಅನುಮಾನಗಳು ಮೂಡಿವೆ.
ನಂ |
ಒಕ್ಕಲಿಗರ ಲೆಕ್ಕಾಚಾರ |
|
1 | ಪ್ರವರ್ಗ 3ಎ | 72,99,577 |
2 | ಒಕ್ಕಲಿಗ ಮತ್ತು ಉಪ ಜಾತಿಗಳು ಸೇರಿ | 61,58,352 |
3 | ಒಕ್ಕಲಿಗ | 40,04,830 |
4 | ಗೌಡ ಒಕ್ಕಲಿಗ | 1,84,479 |
5 | ಕುಂಚಿಟಿಗ ಒಕ್ಕಲಿಗ | 41,188 |
6 | ವಕ್ಕಲ್/ ಒಕ್ಕಲಿಗ | 1,88,508 |
7 | ಗಂಗಡಕರ್ ಒಕ್ಕಲಿಗ | 82,589 |
8 | ದಾಸ್ ಒಕ್ಕಲಿಗ | 17,961 |
9 | ರೆಡ್ಡಿ ಒಕ್ಕಲಿಗ | 24,059 |
10 | ಮರಸು ಒಕ್ಕಲಿಗ | 3,859 |
11 | ರೆಡ್ಡಿ | 4,15,382 |
12 | ಮರಸು ಒಕ್ಕಲಿಗ | 3,859 |
13 | ರೆಡ್ಡಿ | 4,15,382 |
14 | ಕುಂಚಿಟಿಗ | 1,95,499 |
15 | ಗೌಡ | 4,60,555 |
16 | ಕಮ್ಮ | 1,11,739 |
17 | ರಡ್ಡಿ | 2,87,372 |
18 | ನಾಮಧಾರಿ ಗೌಡ | 21,468 |
19 | ಬಲಿಜ | 2,03,347 |
20 | ಬಲಜಿಗ | 1,37,828 |
21 | ಬಣಜಿಗ | 2,96,411 |
22 | ನಾಯ್ಡು | 1,50,601 |