1964ನೇ ಇಸವಿಯಲ್ಲಿ ಸ್ಥಾಪನೆಯಾದ ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ದಿಢೀರ್ ಅಮತ ಬದಲಾವಣೆ ಮಾಡಿ ಕನ್ನಡಿಗರಿಗೆ ಶಾಕ್ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಜ್ಞಾನಭಾರತಿ ಕ್ಯಾಂಪಸ್ನಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಿ ಮಾಜಿ ಪ್ರಧಾನಿ, ದಿವಂಗತ ಡಾ| ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಎಂದು ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನೀರಿಕ್ಷಿತವಾಗಿ ಘೋಷಣೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತದ ಆಧುನಿಕ ಆರ್ಥಿಕತೆಯ ರೂವಾರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ಮನಮೋಹನ್ ಸಿಂಗ್ ಅವರ ಗೌರವ ಸೂಚಕವಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಮ್ಮ ಬೆಂಗಳೂರು ಈಗ ಬ್ರಾಂಡ್ ಬೆಂಗಳೂರಾಗಿದೆ..ನಮ್ಮ ಬೆಂಗಳೂರು ನಮ್ಮ ಹೆಮ್ಮೆಯಾಗಿದೆ. ನಮ್ಮ ಕನ್ನಡಿಗರ..ಕರ್ನಾಟಕದ ಅಸ್ಮಿತೆಯನ್ನು ಸಾರುವ ಬೆಂಗಳೂರಿನ ಹೆಸರನ್ನು ಏಕವ್ಯಕ್ತಿ ನಿರ್ಧಾರದಂತೆ ಬದಲಿಸ ಹೊರಟಿರೋ ಸಿದ್ದರಾಮಯ್ಯಗೆ ನಿಜಕ್ಕೂ ಆತ್ಮಸಾಕ್ಷಿ ಇದೆಯೇ ಅನ್ನೋ ಪ್ರಶ್ನೆ ಕೇಳುತ್ತಿದ್ದಾರೆ ಕರ್ನಾಟಕದ ಜನತೆ.
ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದಾಗಿದ್ದು ಇದರ ವ್ಯಾಪ್ತಿಯಲ್ಲಿರುವ 720 ಕಾಲೇಜುಗಳಿವೆ. ಇದರ ಶೈಕ್ಷಣಿಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಯುಜಿಸಿ ನ್ಯಾಕ್ ಸಮಿತಿಯು ಫೈವ್ಸ್ಟಾರ್ ಮಾನ್ಯತೆ ನೀಡಿದೆ. ಡಾ. ಎಚ್. ನರಸಿಂಹಯ್ಯನವರ ದೂರದೃಷ್ಟಿ ಮತ್ತು ಪರಿಶ್ರಮ, ಧೈರ್ಯ, ತ್ಯಾಗದ ಪ್ರತಿಫಲವಾಗಿ ಹುಟ್ಟಿರೋದೇ ನಮ್ಮ ಹೆಮ್ಮೆಯ ಬೆಂಗಳೂರು ವಿಶ್ವವಿದ್ಯಾಲಯ. ಅನೇಕ ಘಟಾನುಘಟಿ ಸಾಹಿತಿಗಳು, ಪ್ರಾಧ್ಯಾಪಕರು ಈ ಬೆಂಗಳೂರು ವಿವಿಗಾಗಿ ಬೆವರು, ರಕ್ತವನ್ನು ಬಸಿದು ಕಟ್ಟಿದ್ದಾರೆ. ಇಂತಹ ಮಹನೀಯರು ಕಟ್ಟು ಬೆಳೆಸಿದ ಬೆಂಗಳೂರು ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಿರೋ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ದೇಶದ ಹೆಮ್ಮೆಯ ಅರ್ಥತಜ್ಞ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಬ್ಯುಸಿನೆಸ್ ಕಾಲೇಜುಗಳನ್ನು ತೆರೆದು ಹೊಸದಾಗಿ ಮನ್ಮೋಹನ್ ಸಿಂಗ್ ವಿವಿ ಸ್ಥಾಪಿಸಲಿ..ಬೇಡ ಅಂದವರು ಯಾರು..ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು ವಿವಿ ಹೆಸರು ಬದಲಿಸಲು ಬಿಡಲ್ಲ ಎಂದು ಕನ್ನಡಿಗರು, ಕನ್ನಡಪರ ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.