• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬಿಬಿಎಂಪಿ ಇನ್ಮುಂದೆ ಐದು ಪಾಲಿಕೆಗಳಾಗಿ ಹೋಳು: ಜಿಬಿಎ ಆಡಳಿತ ಸೆ. 2 ರಿಂದ ಜಾರಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 1, 2025 - 2:02 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2025 09 01t133144.701

ಬೆಂಗಳೂರು, ಸೆಪ್ಟೆಂಬರ್ 1: ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಆಡಳಿತ ಸೆಪ್ಟೆಂಬರ್ 1ರೊಂದಿಗೆ ಕೊನೆಗೊಂಡು, ಸೆಪ್ಟೆಂಬರ್ 2ರಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಜಾರಿಗೆ ಬರಲಿದೆ.

ಈ ಹೊಸ ವ್ಯವಸ್ಥೆಯಡಿ ಬಿಬಿಎಂಪಿ ಐದು ಸ್ವತಂತ್ರ ಮಹಾನಗರ ಪಾಲಿಕೆಗಳಾಗಿ ವಿಭಜನೆಯಾಗಲಿದ್ದು, ಇವು ಬೆಂಗಳೂರು ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಮತ್ತು ಕೇಂದ್ರ ಪಾಲಿಕೆಗಳಾಗಿವೆ. ಕರ್ನಾಟಕ ಸರ್ಕಾರದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 ಅನ್ವಯ ಈ ಬದಲಾವಣೆ ಜಾರಿಯಾಗುತ್ತಿದೆ. ಈಗಾಗಲೇ ತಿದ್ದುಪಡಿ ವಿಧೇಯಕ ಅನುಮೋದನೆಗೊಂಡಿದ್ದು, ಕಳೆದ ತಿಂಗಳು ಐದು ಪಾಲಿಕೆಗಳ ರಚನೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಾಗಿದೆ. ಆಗಸ್ಟ್ 18ರವರೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು.

RelatedPosts

ದಾವಣಗೆರೆಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಊಟ ಮಾಡುವಾಗ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವು!

ಪುಟಾಣಿಯ ಅಪೂರ್ವ ಪ್ರತಿಭೆ: ಮೈಸೂರಿನ ಬಾಲಕಿಯ ಬೌದ್ಧಿಕ ಸಾಮರ್ಥ್ಯಕ್ಕೆ ಎಲ್ಲರೂ ಫಿದಾ!

ಲಿವಿಂಗ್ ಟುಗೆದರ್‌ನಲ್ಲಿದ್ದ ವಿಧವೆಗೆ ಪೆಟ್ರೋಲ್‌‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಪ್ರಿಯಕರ

ADVERTISEMENT
ADVERTISEMENT

ಐದು ಪಾಲಿಕೆಗಳಿಗೆ ಹೊಸ ಆಯುಕ್ತರ ನೇಮಕವಾಗಲಿದ್ದು, ಪ್ರತಿ ಪಾಲಿಕೆಗೆ ಎರಡು ವಲಯಗಳು, ಒಟ್ಟು 10 ವಲಯಗಳ ರಚನೆಯಾಗಲಿದೆ. ಪೂರ್ವ ಮತ್ತು ಪಶ್ಚಿಮ ಪಾಲಿಕೆಗಳು ದೊಡ್ಡದಾಗಿದ್ದು, ಇವುಗಳಲ್ಲಿ ವಲಯಗಳ ಸಂಖ್ಯೆ ಹೆಚ್ಚಾಗಬಹುದು. ಜಿಬಿಎಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.

ಹಾಲಿ ಮೇಯರ್ ಕಚೇರಿ ಜಿಬಿಎ ಅಧ್ಯಕ್ಷರ ಕಚೇರಿಯಾಗಿ, ಡೆಪ್ಯೂಟಿ ಮೇಯರ್ ಕಚೇರಿ ಉಪಾಧ್ಯಕ್ಷರ ಕಚೇರಿಯಾಗಿ ಮಾರ್ಪಾಡಾಗಲಿದೆ. ಬಿಬಿಎಂಪಿ ಆಯುಕ್ತರು ಜಿಬಿಎ ಮುಖ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ಆಡಳಿತ ವ್ಯವಸ್ಥೆಯಿಂದ ಬೆಂಗಳೂರಿನ ಆಡಳಿತ ಸುಧಾರಣೆಗೆ ಕ್ರಾಂತಿಕಾರಕ ಹೆಜ್ಜೆಯಾಗಲಿದೆ.

ಐದು ಪಾಲಿಕೆ ಹೊಸ ಕಚೇರಿಗಳು ಎಲ್ಲೆಲ್ಲಿ..?

ಬೆಂಗಳೂರು ಉತ್ತರ-ಯಲಹಂಕ ತಾಲೂಕು ಕಚೇರಿ ಅನೆಕ್ಸ್ ಬಿಲ್ಡಿಂಗ್
ಬೆಂಗಳೂರು ದಕ್ಷಿಣ-ಜಯನಗರದ ದಕ್ಷಿಣ ವಲಯ ಕಚೇರಿ
ಬೆಂಗಳೂರು ಪೂರ್ವ-ಎಂ.ಜಿ. ರಸ್ತೆಯ ಯುಟಿಲಿಟಿ ಬಿಲ್ಡಿಂಗ್
ಬೆಂಗಳೂರು ಪಶ್ಚಿಮ-ಗೋವಿಂದರಾಜ ನಗರದ ಕನಕ ಭವನ
ಬೆಂಗಳೂರು ಕೇಂದ್ರ-ಬಿಬಿಎಂಪಿ ಕೇಂದ್ರ ಕಚೇರಿ ಅನೆಕ್ಸ್ ಬಿಲ್ಡಿಂಗ್

ಬಿಬಿಎಂಪಿ ಐದು ಪಾಲಿಕೆ ವಿಂಗಡನೆಯಲ್ಲಿ ತಾರತಮ್ಯ

ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಡಿಯಲ್ಲಿ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜನಸಂಖ್ಯೆಯ ಪ್ರಮಾಣದಲ್ಲಿ ತಾರತಮ್ಯ, ಅವೈಜ್ಞಾನಿಕ ರಚನೆ ಮತ್ತು ಬೆಂಗಳೂರಿನ ಮೂಲ ನಿವಾಸಿಗಳ ಕಡೆಗಣನೆಯ ಆರೋಪಗಳು ಕೇಳಿಬಂದಿವೆ. ಐದು ಪಾಲಿಕೆಗಳಿಂದ ತೆರಿಗೆ ಸಂಗ್ರಹದಲ್ಲಿ ಅಸಮಾನತೆ, ಶಾಸಕರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುವ ಆತಂಕವಿದೆ.

ನವದೆಹಲಿಯ ಉದಾಹರಣೆಯಂತೆ, ಮೂರು ಪಾಲಿಕೆ ರಚನೆಯಿಂದ ಆರ್ಥಿಕ ಅಸಮತೋಲನ, ರಿಯಲ್ ಎಸ್ಟೇಟ್ ಸಮಸ್ಯೆ ಮತ್ತು ನಿರುದ್ಯೋಗ ಉಂಟಾಗಿತ್ತು. ಇದರಿಂದಾಗಿ ದೆಹಲಿಯಲ್ಲಿ ಮೂರು ಪಾಲಿಕೆಗಳನ್ನು ಮತ್ತೆ ಒಂದಾಗಿಸಲಾಯಿತು. ಬೆಂಗಳೂರಿನ ಐದು ಪಾಲಿಕೆ ರಚನೆಯಿಂದ ಲಂಡನ್‌ನಂತಹ ಮಹಾನಗರಗಳ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂದು ಆತಂಕವಿದೆ. ಪಾಲಿಕೆ ಸದಸ್ಯರ ನಡುವೆ ಸಂಘರ್ಷ, ಯೋಜನೆಗಳ ಅನುಷ್ಠಾನದಲ್ಲಿ ತಾರತಮ್ಯ ಮತ್ತು ಕಡಿಮೆ ಆದಾಯದ ಪಾಲಿಕೆಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಬಹುದು.

ಜನಸಂಖ್ಯೆ ಪ್ರಮಾಣದಲ್ಲಿ ತಾರತಮ್ಯ..!

ಬೆಂಗಳೂರು ಉತ್ತರ- 19,04846
ಬೆಂಗಳೂರು ಪೂರ್ವ- 10,12655
ಬೆಂಗಳೂರು ಕೇಂದ್ರ-13,83596
ಬೆಂಗಳೂರು ಪಶ್ಚಿಮ- 26,98,119
ಬೆಂಗಳೂರು ದಕ್ಷಿಣ- 17,14,189

ಆದಾಯ ಹಂಚಿಕೆಯಲ್ಲೂ ತಾರತಮ್ಯ..!

ಬೆಂಗಳೂರು ಉತ್ತರ- ₹ 543 ಕೋಟಿ
ಬೆಂಗಳೂರು ಪೂರ್ವ- ₹912 ಕೋಟಿ
ಬೆಂಗಳೂರು ಕೇಂದ್ರ- ₹ 659 ಕೋಟಿ
ಬೆಂಗಳೂರು ಪಶ್ಚಿಮ- ₹ 580 ಕೋಟಿ
ಬೆಂಗಳೂರು ದಕ್ಷಿಣ- ₹ 733 ಕೋಟಿ

ಶಾಸಕರ ಹಂಚಿಕೆ ವಿವರ..!

ಬೆಂಗಳೂರು ಉತ್ತರ- 7 ಶಾಸಕರು
ಬೆಂಗಳೂರು ಪೂರ್ವ- 2 ಶಾಸಕರು
ಬೆಂಗಳೂರು ಕೇಂದ್ರ- 6 ಶಾಸಕರು
ಬೆಂಗಳೂರು ಪಶ್ಚಿಮ- 10 ಶಾಸಕರು
ಬೆಂಗಳೂರು ದಕ್ಷಿಣ- 7 ಶಾಸಕರು

ಪಾಲಿಕೆಗಳ ವಿಸ್ತೀರ್ಣದಲ್ಲೂ ತಾರತಮ್ಯ..!

ಬೆಂಗಳೂರು ಉತ್ತರ- 158 ಚದರ ಕಿಲೋ ಮೀಟರ್
ಬೆಂಗಳೂರು ಪೂರ್ವ- 168 ಚದರ ಕಿಲೋ ಮೀಟರ್
ಬೆಂಗಳೂರು ಕೇಂದ್ರ- 78 ಚದರ ಕಿಲೋ ಮೀಟರ್
ಬೆಂಗಳೂರು ಪಶ್ಚಿಮ- 161 ಚದರ ಕಿಲೋ ಮೀಟರ್
ಬೆಂಗಳೂರು ದಕ್ಷಿಣ-147 ಚದರ ಕಿಲೋ ಮೀಟರ್

ಯಾವ್ಯಾವ ಮಹಾನಗರಗಳಲ್ಲಿ ಎಷ್ಟೆಷ್ಟು ಜನಸಂಖ್ಯೆ? 

ನವದೆಹಲಿ- 3,40,00,000 ಜನಸಂಖ್ಯೆ
ಮುಂಬೈ- 2,17,00,000 ಜನಂಸಂಖ್ಯೆ
ಕೊಲ್ಕತ್ತಾ- 1,56,00,000 ಜನಸಂಖ್ಯೆ
ಚೆನ್ನೈ- 1,22,00,000 ಜನಸಂಖ್ಯೆ
ಬೆಂಗಳೂರು- 1,40,00,000 ಜನಸಂಖ್ಯೆ

ಪ್ರಾದೇಶಿಕ ಅಸಮಾನತೆಗೆ ಕಾರಣ? 
  • ಕೇಂದ್ರ ಪಾಲಿಕೆ ಸಂಪೂರ್ಣ ಉರ್ದು ಮತ್ತು ತಮಿಳುಮಯ
  • ಉತ್ತರ ಪಾಲಿಕೆ ಉರ್ದು ಮತ್ತು ತೆಲುಗುಮಯ
  • ದಕ್ಷಿಣ ಪಾಲಿಕೆ ಉರ್ದು ಮತ್ತು ತೆಲುಗು ಭಾಗಶಃ ಕನ್ನಡ
  • ಪೂರ್ವ ಪಾಲಿಕೆ ತೆಲುಗು ಮತ್ತು ಉತ್ತರ ಭಾರತೀಯ ಭಾಷಾಮಯ
  • ಪಶ್ಚಿಮ ಪಾಲಿಕೆ ಕನ್ನಡಮಯ

ಈ ಹೊಸ ವ್ಯವಸ್ಥೆಯಿಂದ ಬೆಂಗಳೂರು ಹೇಗೆ ಬದಲಾಗಲಿದೆ ಎಂಬುದು ಕಾಲವೇ ಹೇಳಬೇಕು. ಆದರೆ ಸರ್ಕಾರದ ಪ್ರಕಾರ, ಇದು ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 09 01t151812.567

ದಾವಣಗೆರೆಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

by ಶಾಲಿನಿ ಕೆ. ಡಿ
September 1, 2025 - 3:29 pm
0

Untitled design 2025 09 01t145828.664

ಸೆಟಲ್ ಆಗದ ಲಕ್ಕಿ ಲೆಕ್ಕ..ಲೋಕಾಯುಕ್ತ ಬಲೆಯಲ್ಲಿ ಸ್ವೀಟಿ ರಾಧಿಕಾ ಕುಮಾರಸ್ವಾಮಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 1, 2025 - 3:00 pm
0

D್ದ್ಸ್ಸಅ್ಗ

ಚಿಕ್ಕಣ್ಣಗೆ ಮದ್ವೆ ಫಿಕ್ಸ್.. ಯಾರು ಈ ಮಂಡ್ಯ ಚೆಲುವೆ ಗೊತ್ತಾ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 1, 2025 - 2:22 pm
0

Untitled design 2025 09 01t133144.701

ಬಿಬಿಎಂಪಿ ಇನ್ಮುಂದೆ ಐದು ಪಾಲಿಕೆಗಳಾಗಿ ಹೋಳು: ಜಿಬಿಎ ಆಡಳಿತ ಸೆ. 2 ರಿಂದ ಜಾರಿ

by ಶಾಲಿನಿ ಕೆ. ಡಿ
September 1, 2025 - 2:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 01t151812.567
    ದಾವಣಗೆರೆಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
    September 1, 2025 | 0
  • Untitled design 2025 09 01t132700.520
    ಊಟ ಮಾಡುವಾಗ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವು!
    September 1, 2025 | 0
  • Untitled design 2025 09 01t122951.591
    ಪುಟಾಣಿಯ ಅಪೂರ್ವ ಪ್ರತಿಭೆ: ಮೈಸೂರಿನ ಬಾಲಕಿಯ ಬೌದ್ಧಿಕ ಸಾಮರ್ಥ್ಯಕ್ಕೆ ಎಲ್ಲರೂ ಫಿದಾ!
    September 1, 2025 | 0
  • Untitled design 2025 09 01t115659.626
    ಲಿವಿಂಗ್ ಟುಗೆದರ್‌ನಲ್ಲಿದ್ದ ವಿಧವೆಗೆ ಪೆಟ್ರೋಲ್‌‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಪ್ರಿಯಕರ
    September 1, 2025 | 0
  • Untitled design 2025 09 01t111017.967
    ವಿಜಯಪುರದಲ್ಲಿ ಸಿಲಿಂಡರ್‌ ಸ್ಫೋಟ: ಹೊತ್ತಿ ಉರಿದ ಅಡುಗೆ ಮನೆ
    September 1, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version