ಬೆಂಗಳೂರು: ಕರ್ನಾಟಕದ ಹವಾಮಾನ ಇಲಾಖೆ ಇಂದು ರಾಜ್ಯದ 21 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಮತ್ತು ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಗಾರು ಐದು ದಿನ ಮುಂಚಿತವಾಗಿ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ತಿಳಿಸಿದೆ.
ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇದು ಎರಡು ವಾರಗಳಿಂದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರವಾಸಿಗಳಿಗೆ ತಂಪು ತಂದಿದೆ. ಇಂದು ಕೂಡ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯ ಸಾಧ್ಯತೆಯಿದೆ. ರಾಜ್ಯದ ಇತರ ಭಾಗಗಳಾದ ಹಿಡಕಲ್, ನಿಪ್ಪಾಣಿ, ಬೀದರ್, ಆಲಮಟ್ಟಿ, ಮಂಗಳೂರು, ಹುಣಸಗಿ, ಮುಲ್ಕಿ, ಮತ್ತು ಗೌರಿಬಿದನೂರಿನಲ್ಲಿ ಈಗಾಗಲೇ ಮಳೆಯಾಗಿದೆ. ಕಲಬುರಗಿಯಲ್ಲಿ 40.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾಜ್ಯದ ಅತ್ಯಂತ ಬಿಸಿಯ ಸ್ಥಳವಾಗಿದೆ.
ಬೆಂಗಳೂರಿನ ತಾಪಮಾನ ವಿವರಗಳು ಈ ಕೆಳಗಿನಂತಿವೆ
ಎಚ್ಎಎಲ್ನಲ್ಲಿ 33.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 21.2 ಡಿಗ್ರಿ ಕನಿಷ್ಠ, ನಗರದಲ್ಲಿ 33.7 ಡಿಗ್ರಿ ಗರಿಷ್ಠ ಮತ್ತು 22.4 ಡಿಗ್ರಿ ಕನಿಷ್ಠ, ಕೆಐಎಎಲ್ನಲ್ಲಿ 35.5 ಡಿಗ್ರಿ ಗರಿಷ್ಠ ಮತ್ತು 21.5 ಡಿಗ್ರಿ ಕನಿಷ್ಠ, ಜಿಕೆವಿಕೆಯಲ್ಲಿ 33.6 ಡಿಗ್ರಿ ಗರಿಷ್ಠ ಮತ್ತು 20.6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರಾವಳಿ ಪ್ರದೇಶಗಳಾದ ಹೊನ್ನಾವರದಲ್ಲಿ 34.3 ಡಿಗ್ರಿ ಗರಿಷ್ಠ ಮತ್ತು 25.7 ಡಿಗ್ರಿ ಕನಿಷ್ಠ, ಕಾರವಾರದಲ್ಲಿ 36.4 ಡಿಗ್ರಿ ಗರಿಷ್ಠ ಮತ್ತು 26.8 ಡಿಗ್ರಿ ಕನಿಷ್ಠ, ಪಣಂಬೂರಿನಲ್ಲಿ 34.5 ಡಿಗ್ರಿ ಗರಿಷ್ಠ ಮತ್ತು 25.0 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಉತ್ತರ ಕರ್ನಾಟಕದ ಬೀದರ್ನಲ್ಲಿ 39.0 ಡಿಗ್ರಿ ಗರಿಷ್ಠ ಮತ್ತು 21.4 ಡಿಗ್ರಿ ಕನಿಷ್ಠ, ಬಾಗಲಕೋಟೆಯಲ್ಲಿ 35.8 ಡಿಗ್ರಿ ಗರಿಷ್ಠ ಮತ್ತು 24.3 ಡಿಗ್ರಿ ಕನಿಷ್ಠ, ಧಾರವಾಡದಲ್ಲಿ 34.0 ಡಿಗ್ರಿ ಗರಿಷ್ಠ ಮತ್ತು 21.5 ಡಿಗ್ರಿ ಕನಿಷ್ಠ, ಗದಗದಲ್ಲಿ 34.2 ಡಿಗ್ರಿ ಗರಿಷ್ಠ ಮತ್ತು 22.2 ಡಿಗ್ರಿ ಕನಿಷ್ಠ, ಹಾವೇರಿಯಲ್ಲಿ 32.4 ಡಿಗ್ರಿ ಗರಿಷ್ಠ ಮತ್ತು 23.4 ಡಿಗ್ರಿ ಕನಿಷ್ಠ, ಕೊಪ್ಪಳದಲ್ಲಿ 33.5 ಡಿಗ್ರಿ ಗರಿಷ್ಠ ಮತ್ತು 25.6 ಡಿಗ್ರಿ ಕನಿಷ್ಠ, ರಾಯಚೂರಿನಲ್ಲಿ 38.0 ಡಿಗ್ರಿ ಗರಿಷ್ಠ ಮತ್ತು 27.0 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಈ ಭಾರಿ ಮಳೆಯಿಂದ ಕೃಷಿ ಕ್ಷೇತ್ರಕ್ಕೆ ಉತ್ತಮ ಆರಂಭವಾಗಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನ ಕಡಿಮೆಯಾಗಿ ತಂಪಾದ ವಾತಾವರಣವನ್ನು ತಂದಿದೆ. ಆದರೆ, ಭಾರಿ ಮಳೆಯಿಂದ ಕೆಲವು ಕಡೆ ಜಲಾವೃತವಾಗುವ ಸಾಧ್ಯತೆಯಿದ್ದು, ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.