ರಮ್ಯ, ನಿರೂಪಕಿ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳಿ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ ಇದೀಗ ಕಾಲಜ್ಞಾನ ಭವಿಷ್ಯ ನುಡಿದಿದ್ದು, ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಿಯಣ್ಣಾ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಆಗುತ್ತವೆ. ಹಣ ಹಣದ ಹಿಂದೆ ಹೋಗುವ ಜನರಿಗೆ ಬಂಧುತ್ವ ಸಮಯ ತಿಳಿಯಿರಿಯಣ್ಣ. ಈ ವರ್ಷ ವಿದ್ಯುಚ್ಛಕ್ತಿ ಸಮಸ್ಯೆ, ಮಳೆ ಮಧ್ಯಮದಲ್ಲಾಗಲಿದ್ದು, ಇದರಿಂದ ನೀರಿನ ಕೊರತೆ ಬಹಳ ಆಗುತ್ತದೆ. ಭೂಕಂಪ, ಅಗ್ನಿ ದುರಂತಗಳು ಜಾಸ್ತಿ ಆಗುತ್ತವೆ.
ಬದಲಾಗ್ತಾರಾ ಸಿಎಂ?
ಮತ್ತೊಂದೆಡೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಆ ಬಗ್ಗೆಯೂ ಮುತ್ಯಾ ಮಾತನಾಡಿದ್ದಾರೆ. ರಾಜ್ಯ ರಾಜಕೀಯದ ಕುರಿತು ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಬೆಂಕಿ ಬಬಲಾದಿ ಭವಿಷ್ಯ
ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಯಾಗುತ್ತೆ. ಈ ವರ್ಷದಲ್ಲಿ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಮೂಡುತ್ತದೆ ಎಂದು ಅಚ್ಚರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಇನ್ನು ಈ ಸ್ಫೋಟಕ ಭವಿಷ್ಯದಲ್ಲಿ ಬರದ ಮುನ್ಸೂಚನೆಯನ್ನು ಶ್ರೀಗಳು ನೀಡಿದ್ದಾರೆ. ಸಿಎಂ ಬದಲಾವಣೆ, ಪಕ್ಷದಲ್ಲಿ ಒಳಜಗಳ ಬೆನ್ನಲ್ಲೇ ಸಿದ್ಧರಾಮಯ್ಯ ಹೊಳಿಮಠ ಗುರುಗಳು ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಹೇಳಿರುವ ಭವಿಷ್ಯ ಮತ್ತಷ್ಟು ಗೊಂದಲವನ್ನು ಉಂಟು ಮಾಡಿದೆ. ಆಳುವಂತಹ ಪ್ರಜೆಗಳಿಗೆ ಭಯಂಕರ ರೋಗದ ಬಾಧೆ ಕಾಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಹಣ ಹಣ ಎಂದು ಯಾರು ಹೋಗುತ್ತಾರೋ ಅವರಿಗೆ ಬಂಧುತ್ವವೇ ಮುಖ್ಯ ಎಂದು ಅರಿವಾಗುತ್ತದೆ. ಹಳ್ಳಿ ಹಳ್ಳಿ, ಪಟ್ಟಣಗಳಲ್ಲೂ ಈ ಬಾರಿ ಧರ್ಮದ ವಿಚಾರವಾಗಿ ಬಹಳಷ್ಟು ಗಲಾಟೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ವಾಹನ ಸವಾರರಿಗೆ ಎಚ್ಚರಿಕೆ!
ಇನ್ನು ಹೊಳಿ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ ಈ ಬಾರಿ ವಾಹನ ಸವಾರರು ಕೂಡಾ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಹಳಷ್ಟು ದುರಂತಗಳು ನಡೆಯಲಿವೆ, ಆದ್ದರಿಂದ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳಿ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಮಠ ಕಾಲಜ್ಞಾನದಿಂದಲೇ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಆರಂಭವಾಗುವ ಜಾತ್ರೆ, ಶಿವರಾತ್ರಿ ಅಮಾವಾಸ್ಯೆ ಬಳಿಕ ಸದಾಶಿವ ಮುತ್ಯಾನ ಕಾಲಜ್ಞಾನ ನುಡಿಯಲಾಗುತ್ತೆ. ಇದೀಗ ಕೊನೆಗೂ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಈ ಭವಿಷ್ಯ ಜನರಲ್ಲಿ ಮತ್ತಷ್ಟು ಅಚ್ಚರಿಯನ್ನ ಮೂಡಿಸಿದೆ.