ಬಕ್ರೀದ್ (ಈದ್-ಉಲ್-ಅಧಾ) 2025ರ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ವಾಹನ ಸವಾರರಿಗೆ ಮುಖ್ಯ ಎಚ್ಚರಿಕೆ. ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಹತ್ತಿರದ ಮಸೀದಿ ಮತ್ತು ಚಾಮರಾಜಪೇಟೆ 1ನೇ ಮುಖ್ಯ ರಸ್ತೆಯ 7ನೇ ಅಡ್ಡರಸ್ತೆಯ ಬಿಬಿಎಂಪಿ ಆಟದ ಮೈದಾನದಲ್ಲಿ ಜೂನ್ 07, 2025ರಂದು ಮುಸ್ಲಿಂ ಬಾಂಧವರು ಅಪಾರ ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸೇರುವ ಕಾರಣ, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪ್ರಾರ್ಥನೆ ಮುಗಿಯುವವರೆಗೆ (ಬೆಳಿಗ್ಗೆ 8:00 ಗಂಟೆಯಿಂದ) ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜೂನ್ 07, 2025ರಂದು ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ಕೆಳಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಈ ಕೆಳಗಿನಂತೆ ವ್ಯವಸ್ಥೆಗೊಳಿಸಲಾಗಿದೆ:
1. ಮೈಸೂರು ರಸ್ತೆ : ಟೋಲೈಟ್ ಜಂಕ್ಷನ್ನಿಂದ ಟೌನ್ಹಾಲ್
ನಿಷೇಧಿತ ಮಾರ್ಗ: ಟೋಲೈಟ್ ಜಂಕ್ಷನ್ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಭಾಗದಿಂದ ಟೌನ್ಹಾಲ್ವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧ.
ಪರ್ಯಾಯ ಮಾರ್ಗ: ಮೈಸೂರು ಕಡೆಯಿಂದ ಟೌನ್ಹಾಲ್ಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಕಿಮ್ಮೊ ಜಂಕ್ಷನ್ನಲ್ಲಿ ಎಡಗಡೆ ತಿರುಗಿ ವಿಜಯನಗರ ಮೂಲಕ ಸಾಗಬಹುದು.
“ಸಂಚಾರ ಸಲಹೆ”
“Traffic Advisory” @CPBlr @Jointcptraffic @blrcitytraffic @BlrCityPolice pic.twitter.com/4K8UuZQgKZ— DCP TRAFFIC WEST (@DCPTrWestBCP) June 6, 2025
2. ಟೌನ್ಹಾಲ್ನಿಂದ ಮೈಸೂರು ಕಡೆ
ನಿಷೇಧಿತ ಮಾರ್ಗ: ಟೌನ್ಹಾಲ್ನಿಂದ ಬಿಜಿಎಸ್ ಫ್ಲೈಓವರ್ ಮೇಲ್ಭಾಗದಿಂದ ಬಿಬಿ ಜಂಕ್ಷನ್ ಮೂಲಕ ಟೋಲೈಟ್ ಜಂಕ್ಷನ್ವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧ.
ಪರ್ಯಾಯ ಮಾರ್ಗ: ಟೌನ್ಹಾಲ್ನಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಬಹುದು.
– ಭಾರಿ ವಾಹನಗಳು ವೆಟರ್ನರಿ ಜಂಕ್ಷನ್ನಲ್ಲಿ ಬಲಗಡೆ ತಿರುಗಿ ಗೂಡೈಡ್ ರಸ್ತೆ ಮೂಲಕ ಸಾಗಬಹುದು.
– ಲಘು ವಾಹನಗಳು ಸಿರಸಿ ಜಂಕ್ಷನ್ನಲ್ಲಿ ಬಲಗಡೆ ತಿರುಗಿ ಜೆ.ಜೆ.ನಗರ, ಟ್ಯಾಂಕ್ ಬಂಡ್ ರಸ್ತೆ, ಬಿನ್ನಿಮಿಲ್ ಜಂಕ್ಷನ್, ಹುಣಸೇಮರ ಮೂಲಕ ಸಾಗಬಹುದು.
3. ಬಸವನಗುಡಿ & ಚಾಮರಾಜಪೇಟೆಯಿಂದ ಮೆಜೆಸ್ಟಿಕ್
ಪರ್ಯಾಯ ಮಾರ್ಗ: ಬಸವನಗುಡಿ ಮತ್ತು ಚಾಮರಾಜಪೇಟೆಯಿಂದ ಮೆಜೆಸ್ಟಿಕ್ಗೆ ಹೋಗುವ ವಾಹನಗಳು ಚಾಮರಾಜಪೇಟೆ 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಮೈಸೂರು ರಸ್ತೆ, ಸಿರಸಿ ಸರ್ಕಲ್, ಬಿನ್ನಿಮಿಲ್ ರಸ್ತೆಯ ಮೂಲಕ ಸಾಗಬಹುದು.
ಸಾರ್ವಜನಿಕರಿಗೆ ಮನವಿ
ಬಕ್ರೀದ್ನ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಸಂಚಾರ ಸೌಕರ್ಯಕ್ಕಾಗಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಸಂಚಾರ ಪೊಲೀಸರೊಂದಿಗೆ ಸಹಕರಿಸಿ, ತಮ್ಮ ಪ್ರಯಾಣವನ್ನು ಪರ್ಯಾಯ ಮಾರ್ಗಗಳ ಮೂಲಕ ಯೋಜಿಸಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಕೋರಿದ್ದಾರೆ. ಈ ನಿರ್ಬಂಧವು ಜೂನ್ 07, 2025ರಂದು ಬೆಳಿಗ್ಗೆ 8:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ಜಾರಿಯಲ್ಲಿರುತ್ತದೆ.
ಈ ವ್ಯವಸ್ಥೆಯಿಂದ ಚಾಮರಾಜಪೇಟೆಯ ಸಾಮೂಹಿಕ ಪ್ರಾರ್ಥನೆ ಸುಗಮವಾಗಿ ನಡೆಯಲು ಮತ್ತು ಸಾರ್ವಜನಿಕರಿಗೆ ತೊಂದರೆ ಕಡಿಮೆಯಾಗಲು ಸಹಾಯವಾಗಲಿದೆ. ವಾಹನ ಸವಾರರು ಮುಂಚಿತವಾಗಿ ತಮ್ಮ ಪ್ರಯಾಣವನ್ನು ಯೋಜಿಸಿಕೊಂಡು ಸಂಚಾರ ಜಾಮ್ ತಪ್ಪಿಸಿಕೊಳ್ಳಬೇಕು.