ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 3, 2026ರ ಮಂಗಳವಾರ ಬ್ರಹ್ಮರಥೋತ್ಸವ ನಡೆಯಲಿದೆ. ಆದರೆ ಅದೇ ದಿನ ಮಧ್ಯಾಹ್ನ 3:13ರಿಂದ ಸಂಜೆ 6:47ರವರೆಗೆ ಚಂದ್ರಗ್ರಹಣ ಇರುವ ಕಾರಣ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ವಿಶೇಷ ಬದಲಾವಣೆ ಮಾಡಲಾಗಿದೆ. ಭಕ್ತಾದಿಗಳು ಈ ಕೆಳಗಿನ ವಿವರಗಳನ್ನು ಗಮನಿಸಿ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಮಾರ್ಚ್ 3, 2026 (ಮಂಗಳವಾರ) ವಿಶೇಷ ಕಾರ್ಯಕ್ರಮಗಳು:
- ಅಭಿಷೇಕ : ಬೆಳಗ್ಗೆ 4:00 ರಿಂದ 5:00 ರವರೆಗೆ
- ಅಲಂಕಾರ : ಬೆಳಗ್ಗೆ 5:00 ರಿಂದ 6:00 ರವರೆಗೆ
- ಯಾತ್ರಾದಾನ ಕಾರ್ಯಕ್ರಮ : ಬೆಳಗ್ಗೆ 6:00 ರಿಂದ 6:30 ರವರೆಗೆ
- ಮಹಾಮಂಗಳಾರತಿ : ಬೆಳಗ್ಗೆ 7:00 ಗಂಟೆಗೆ
- ಮಂಟಪ ಪಡಿ (ಕೊಪ್ಪಲು ಹಾಕುವ) ಕಾರ್ಯಕ್ರಮ : ಬೆಳಗ್ಗೆ 7:30 ರಿಂದ 10:30 ರವರೆಗೆ – ಕರಿಗಿರಿ ಭವನದಲ್ಲಿ
- ರಥಾರೋಹಣ : ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:30ರವರೆಗೆ
- ರಥ ಎಳೆಯುವುದು ಮತ್ತು ಸ್ವಸ್ಥಾನಕ್ಕೆ ವಾಪಸ್ ಎಳೆಯುವುದು : ಮಧ್ಯಾಹ್ನ 12:30 ರಿಂದ 1:00 ರವರೆಗೆ
ಚಂದ್ರಗ್ರಹಣ ಕಾಲದ ವಿಶೇಷ ಸೂಚನೆ :
- ಮಧ್ಯಾಹ್ನ 1:00 ಗಂಟೆಯಿಂದ ಚಂದ್ರಗ್ರಹಣ ಪ್ರಾರಂಭವಾಗುವುದರಿಂದ ದೇವಸ್ಥಾನದ ಮಹಾದ್ವಾರ ಮುಚ್ಚಲ್ಪಡುತ್ತದೆ.
- ಈ ಸಮಯದಲ್ಲಿ ದೇವರ ದರ್ಶನ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.
- ಸಂಜೆ 8:30 ರಿಂದ ರಾತ್ರಿ 10:30ರವರೆಗೆ ಮತ್ತೆ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಯಾತ್ರಾದಾನ / ಕೊಪ್ಪಲು ಸೇವೆಯ ಬಗ್ಗೆ ಮಹತ್ವದ ಸೂಚನೆ :
ಚಂದ್ರಗ್ರಹಣದಿಂದಾಗಿ ಉತ್ಸವ ಮೂರ್ತಿ (ರಥದಲ್ಲಿ) ಕೊಪ್ಪಲುಗಳಿಗೆ ಹೋಗದ ಕಾರಣ, ಯಾತ್ರಾದಾನ ಸೇವೆಯ ನಂತರ ಕರಿಗಿರಿ ಭವನದಲ್ಲಿ ಪ್ರತಿ ಕೊಪ್ಪಲು ಹಾಕುವ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಲು ಸೇವಾಕರ್ತರು ಬೆಳಗ್ಗೆ 7:30 ರಿಂದ 10:30ರ ಒಳಗೆ ಕರಿಗಿರಿ ಭವನಕ್ಕೆ ಬಂದು ಪೂಜೆ ನೆರವೇರಿಸಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಭಕ್ತಾದಿಗಳಿಗೆ ಮನವಿ: ಈ ದಿನದ ವಿಶೇಷ ಸಮಯಸೂಚಿಯನ್ನು ಗಮನಿಸಿ, ದೇವರ ದರ್ಶನ ಮತ್ತು ಸೇವೆಗಳನ್ನು ಸರಿಯಾಗಿ ಪಾಲಿಸಿ. ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಮಸ್ತ ಭಕ್ತಾದಿಗಳಿಗೆ ವಿನಂತಿಸಿದೆ.





