ಖಮೇನಿ ಹತ್ಯೆಗೆ ಬೆಂಗಳೂರಿನಲ್ಲೂ ಶೋಕಾಚರಣೆ: ಫೋಟೋ ಹಿಡಿದು ಕಣ್ಣೀರು ಸುರಿಸಿದ ಸಾವಿರಾರು ಜನ!

ಖಮೇನಿ ಹತ್ಯೆಗೆ ಬೆಂಗಳೂರಿನಲ್ಲಿ ಕಣ್ಣೀರಿನ ಶೋಕಾಚರಣೆ

ಅಮೆರಿಕಾ-ಇಸ್ರೇಲ್ ಸಂಯುಕ್ತ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಬೃಹತ್ ಶೋಕಾಚರಣೆ ನಡೆಯಿತು. ರಿಚ್ಮಂಡ್ ಸರ್ಕಲ್ ಬಳಿ ನಡೆದ ಈ ಶೋಕಾಚರಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಖಮೇನಿ ಭಾವಚಿತ್ರವನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.

ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಅವರು ಈ ಶೋಕಾಚರಣೆಗೆ ನೇತೃತ್ವ ನೀಡಿದರು. ಪ್ರತಿಭಟನಾಕಾರರು ತಲೆಗೆ ಕೈ ಹೊಡೆದುಕೊಂಡು, ಎದೆ ಬಡಿದುಕೊಂಡು ಖಮೇನಿ ಫೋಟೋ ತಬ್ಬಿಕೊಂಡು ಕಣ್ಣೀರು ಸುರಿಸಿದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ತೀವ್ರ ಘೋಷಣೆಗಳು ಕೇಳಿಬಂದವು.

ಪ್ರತಿಭಟನೆಯ ಮುಖ್ಯ ಅಂಶಗಳು:

ಈ ಶೋಕಾಚರಣೆಯು ಬೆಂಗಳೂರಿನಲ್ಲಿ ಇರಾನ್ ಪರ ಸಹಾನುಭೂತಿ ಮತ್ತು ಅಮೆರಿಕಾ-ಇಸ್ರೇಲ್ ವಿರೋಧಿ ಭಾವನೆಗಳು ಎಷ್ಟು ತೀವ್ರವಾಗಿವೆ ಎಂಬುದನ್ನು ತೋರಿಸಿವೆ. ಖಮೇನಿ ಹತ್ಯೆಯ ನಂತರ ಭಾರತದಲ್ಲಿ ನಡೆಯುತ್ತಿರುವ ಇಂತಹ ಶೋಕಾಚರಣೆಗಳು ಹೆಚ್ಚಾಗುತ್ತಿವೆ.

 

Exit mobile version