ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಲ್ಲಿ ಬ್ಯುಸಿ ಆಗಿರೋ ನಟ ಯಶ್ ನೆಕ್ಸ್ಟ್ ವೆಂಚರ್ ಈಗಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ಪ್ರತಿಷ್ಠಿತ IMDb ವೆಬ್ಸೈಟ್. ಹೌದು.. ಇದೇ ಮೊದಲ ಬಾರಿಗೆ ಖಾಕಿ ಖದರ್ ತೋರಲಿರೋ ರಾಕಿಂಗ್ ಸ್ಟಾರ್ಗೆ ನಾಯಕಿ ಕೂಡ ಫಿಕ್ಸ್ ಆಗಿದೆ. ಹಾಗಾದ್ರೆ ಆ ಅದೃಷ್ಠವಂತೆ ಯಾರು..? ಡೈರೆಕ್ಟರ್ ಯಾರು..? ಆ ವೆಬ್ಸೈಟ್ನಲ್ಲಿ ಲೀಕ್ ಆದ ಆ ಎಕ್ಸ್ಕ್ಲೂಸಿವ್ ಮ್ಯಾಟರ್ ಆದ್ರೂ ಏನು ಅಂತೀರಾ..? ಇಲ್ಲಿದೆ ಡಿಟೈಲ್ಡ್ ರಿಪೋರ್ಟ್.
- ಯಶ್ಗೆ ತೃಪ್ತಿ ನಾಯಕಿ.. ನರ್ತನ್ ಶಾಕಿಂಗ್ ಸ್ಟೇಟ್ಮೆಂಟ್
- ಅನಿಮಲ್ ಹಾಟ್ ಬ್ಯೂಟಿ ಜೊತೆ ಯಶ್ ಖಾಕಿ ಖದರ್
- IMDbನಲ್ಲಿ ಸಿನಿಮಾ & ಅದ್ರ ಸ್ಟಾರ್ಕಾಸ್ಟ್ ಡಿಟೈಲ್ಸ್ ಲೀಕ್
- ಟಾಕ್ಸಿಕ್, ರಾಮಾಯಣ ನಂತ್ರ ರಾಕಿಭಾಯ್ ನೆಕ್ಸ್ಟ್ ವೆಂಚರ್
ಸೂಪರ್ ಸ್ಟಾರ್ ಯಶ್ ಕೆಜಿಎಫ್ ಬಳಿಕ ಒಂದಲ್ಲ ಎರಡೆರಡು ಮಹತ್ವದ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಟಾಕ್ಸಿಕ್ ಜೊತೆ ಜೊತೆಗೆ ರಾಮಾಯಣ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಲ್ಲದೆ, ನಿರ್ಮಾಣಕ್ಕೂ ಕೈ ಜೋಡಿಸಿ, ಅವುಗಳನ್ನ ವಿಶ್ವದ ಮೂಲೆ ಮೂಲೆಗೆ ತಲುಪಿಸೋ ಮಹದಾಶಯ ಹೊಂದಿದ್ದಾರೆ ಯಶ್. ಆದ್ರೆ ಅವುಗಳ ಬಳಿಕ ಯಶ್ ಏನ್ಮಾಡ್ತಾರೆ ಅನ್ನೋದಕ್ಕೂ ಉತ್ತರ ಸಿಕ್ಕಾಗಿದೆ. ಸದ್ಯ ಆ ಸುದ್ದಿ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡ್ತಿದೆ.
ಯೆಸ್.. ಟಾಕ್ಸಿಕ್ ಹಾಗೂ ರಾಮಾಯಣ ಬಳಿಕ ಯಶ್ ಸೆನ್ಸೇಷನಲ್ ಡೈರೆಕ್ಟರ್ ನರ್ತನ್ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಅದರಲ್ಲಿ ಒಬ್ಬ ಮಿಲಿಟರಿ ಆಫೀಸರ್ ಪೊಲೀಸ್ ಕಾಪ್ ಆಗುವ ಕಥಾನಕ ಇದ್ದು, ಇದೇ ಮೊದಲ ಬಾರಿಗೆ ಯಶ್ ಖಾಕಿ ಖದರ್ ತೋರಲಿದ್ದಾರೆ ಎನ್ನಲಾಗ್ತಿದೆ. ಈ ಮಾಹಿತಿಯನ್ನ ನಾವು ಕೊಡ್ತಿರೋದಲ್ಲ. ಪ್ರತಿಷ್ಠಿತ IMDb ವೆಬ್ಸೈಟ್ ಈ ಸುದ್ದಿಯನ್ನ ಅಧಿಕೃತವಾಗಿ ಪ್ರಕಟಿಸಿದೆ. ಅಷ್ಟೇ ಅಲ್ಲ.. ನಾಯಕನಟಿ ಕೂಡ ಫೈನಲ್ ಆಗಿದ್ದು, ಆಕೆಯ ಹೆಸರು ಕೂಡ ಅಲ್ಲಿ ನಮೂದಿಸಲ್ಪಟ್ಟಿರೋದು ಇಂಟರೆಸ್ಟಿಂಗ್.
ರಾಕಿಭಾಯ್-ನರ್ತನ್ ಕಾಂಬೋ ಸಿನಿಮಾಗೆ ಬಾಲಿವುಡ್ನ ಅನಿಮಲ್ ಹಾಟ್ ಬ್ಯೂಟಿ ತೃಪ್ತಿ ದಿಮ್ರಿ ಹೀರೋಯಿನ್ ಎನ್ನಲಾಗ್ತಿದೆ. ತೃಪ್ತಿಗೆ ಇತ್ತೀಚೆಗೆ ಯೂತ್ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದ್ದು, ಅನಿಮಲ್ ಚಿತ್ರದಲ್ಲಿ ಆಕೆಯ ಅಂದ ಚೆಂದಕ್ಕೆ ಮರುಳಾಗದವರೇ ಇಲ್ಲ ಎನ್ನುವಂತಾಗಿತ್ತು. ಸಾಲು ಸಾಲು ಬಾಲಿವುಡ್ ಚಿತ್ರಗಳಲ್ಲಿ ಮಿಂಚ್ತಿರೋ ಈ ಚೆಂದುಳ್ಳಿ ಚೆಲುವೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ಗೆ ಜೋಡಿಯಾಗ್ತಾರೆ ಅನ್ನೋದೇ ಖುಷಿ.
ಆದ್ರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅನ್ನೋದ್ರ ಬೆನ್ನು ಹತ್ತಿದ ಗ್ಯಾರಂಟಿ ಪಿಚ್ಚರ್ ಟೀಂಗೆ ನಿರ್ದೇಶಕ ನರ್ತನ್ ಅವರೇ ಖುದ್ದು ಪ್ರತಿಕ್ರಿಯಿಸಿದ್ದಾರೆ. ನಾನು ಮಫ್ತಿ ಬಳಿಕ ಯಶ್ ಅವರಿಗೆ ಸಿನಿಮಾ ಮಾಡಲು ಕಥೆ ಸಿದ್ಧಗೊಳಿಸಿದ್ದು ನಿಜ. ಅದ್ರ ಲೈನ್ ಕೂಡ ಈಗ ಲೀಕ್ ಆಗಿರೋದೇ ಆಗಿದೆ. ಆದರೆ.. ಅದು ಈಗ ಹೊಸದಾಗಿ ಮಾಡೋಕೆ ಹೊರಟಿರೋ ಸಿನಿಮಾದ್ದಲ್ಲ. ಸದ್ಯ ಯಶ್ ಅವರೇ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೂ ಸ್ಟಾರ್ಕಾಸ್ಟ್ ಎಲ್ಲಾ ಸುದ್ದಿಯನ್ನ ಲೀಕ್ ಮಾಡಿದವ್ರೇ ಸೃಷ್ಟಿ ಮಾಡಿಕೊಂಡಿದ್ದಾರೆ ಅಂತ ಸ್ಪಷ್ಟನೆ ನೀಡಿದ್ದಾರೆ.
ಪ್ರಶಾಂತ್ ನೀಲ್ ಗರಡಿಯಲ್ಲೇ ಪಳಗಿದ ಮಫ್ತಿ ಡೈರೆಕ್ಟರ್ ನರ್ತನ್, ಬೈರತಿ ರಣಗಲ್ ಚಿತ್ರದ ಬಳಿಕ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈ ಜೋಡಿಸ್ತಿದ್ದಾರೆ. ಆದ್ರೆ ನರ್ತನ್ ಸಿನಿಮಾ ಯಾವ ಸ್ಟಾರ್ಗೆ ಅನ್ನೋದು ಮಾತ್ರ ಇನ್ನೂ ಖಾತರಿ ಆಗಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
