ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತ.. ಮಾರ್ನಮಿ ಮಸ್ತ್ ಮ್ಯಾಜಿಕ್

ಬಾದ್‌ಷಾ ಕಿಚ್ಚ ಸುದೀಪ್ ವಾಯ್ಸ್ ಕೊಟ್ಟು ಬೆನ್ನು ತಟ್ಟಿದ ಟೀಂ..!

Untitled design 2026 02 13T143818.066

ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ರಾಜ್ ಶೆಟ್ಟಿ.. ಇವರು ಮೂವರಿಗೂ ಹುಲಿ ಕುಣಿತ ಅಂದ್ರೆ ಪಂಚಪ್ರಾಣ. ಇವರ ಸಿನಿಮಾಗಳಲ್ಲಿ ಈಗಾಗ್ಲೇ ಅವುಗಳ ಒಂದು ಎಳೆ ಬಂದು ಹೋಗಿದೆ. ಕಾರ್ಯಕ್ರಮಗಳ ವೇದಿಕೆಗಳಲ್ಲೂ ಅವರು ಹುಲಿ ಕುಣಿತದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಆ ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತದ ಮೇಲೆಯೇ ಒಂದು ಸಿನಿಮಾ ಬರ್ತಿದೆ. ಹೌದು ಮಾರ್ನಮಿ ಚಿತ್ರ ಲೇಟ್ ಆದ್ರೂ ಲೇಟೆಸ್ಟ್ ಆಗಿ ರುಚಿಸೋಕೆ ತುದಿಗಾಲಲ್ಲಿದೆ.

ಹೊಸಬರ ಹೊಸತನದ ಕಂಟೆಂಟ್ ಇರೋ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಹೆಚ್ಚು ತೆರೆಗೆ ಬರುತ್ತಿವೆ. ಅದರ ಸಾಲಿಗೆ ಮತ್ತೊಂದು ಸೇರ್ಪಡೆ ಅಂದ್ರೆ ಈ ಮಾರ್ನಮಿ ಸಿನಿಮಾ. ಇದೇ 20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರೋ ಈ ಸಿನಿಮಾಗೆ ನಟ ಕಿಚ್ಚ ಸುದೀಪ್ ಬೆಂಬಲವಾಗಿ ನಿಂತಿರುವುದು ತಂಡಕ್ಕೆ ಆನೆಬಲ ಬಂದಂತಾಗಿದೆ. ಕಿರುತೆರೆಯಲ್ಲಿ ಹೆಸರು ಮಾಡಿರೋ ರಿತ್ವಿಕ್ ಮಠದ್ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಆಚಾರ್ ನಟನೆಯ ಚಿತ್ರವಿದು.

ಶೆಟ್ರ ಅಚ್ಚುಮೆಚ್ಚಿನ ಹುಲಿ ಕುಣಿತ.. ಮಾರ್ನಮಿ ಮಸ್ತ್ ಮ್ಯಾಜಿಕ್

ಚೈತ್ರಾ ಆಚಾರ್, ರಿತ್ವಿಕ್‌‌ ಮಾರ್ನಮಿಯಲ್ಲಿ ಕರಾವಳಿ ಸಂಸ್ಕೃತಿ..!

ಈ ಚಿತ್ರದ ಮೂಲಕ ಕರಾವಳಿಯ ಸಂಸ್ಕೃತಿಯ ಆಚರಣೆ, ಅಲ್ಲಿನ ಭಾಷೆ, ಹುಲಿವೇಷ.. ಹೀಗೆ ಹಲವು ವಿಷಗಳು ಗಮನ ಸೆಳೆಯುತ್ತವೆ. ಒಂದಲ್ಲ ಎರಡೆರಡು ಬಾರಿ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಿ, ಮುಂದೂಡಿದ್ದ ಟೀಂ, ಈ ಬಾರಿ ಅಂದುಕೊಂಡ ದಿನದಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶಿಲ್ಪಾ ನಿಶಾಂತ್ ನಿರ್ಮಾಣದ ಮಾರ್ನಮಿಗೆ ರಿತೀಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸದ್ದು ಮಾಡ್ತಿರೋ ಈ ಇಂಪ್ರೆಸ್ಸೀವ್ ಮಾರ್ನಮಿ ಟೀಂ ಮತ್ತೊಂದು ಸಾಂಗ್‌ ಬಿಡುಗಡೆ ಮಾಡಿದೆ. ಅದು ಟೈಟಲ್ ಟ್ರ್ಯಾಕ್ ಕೂಡ ಆಗಿದ್ದು, ಹುಲಿ ಕುಣಿತ, ಹುಲಿ ವೇಷದ ಮೇಲೆ ಕೇಂದ್ರೀಕೃತವಾಗಿದೆ. ಅದು ಕರಾವಳಿ ಸಂಸ್ಕೃತಿಯ ಒಂದು ಭಾಗವಾದ್ರೂ ಅದ್ರ ಹಿಂದೆ ಏನೆಲ್ಲಾ ಅಡಗಿದೆ. ಅದ್ರ ಆಚರಣೆ, ಮಹತ್ವಗಳ ಬಗ್ಗೆ ಬೆಳಕು ಚೆಲ್ಲಲಿದೆ ಈ ಸಿನಿಮಾ ಹಾಗೂ ವಿಶೇಷ ಸಾಂಗ್.

ಟೈಟಲ್ ಸಾಂಗ್‌ನಲ್ಲಿ ಹುಲಿ ಕುಣಿತ ವೈಬ್ರೆಂಟ್.. ಸಖತ್ ವೈಭವ

ಬಾದ್‌ಷಾ ಕಿಚ್ಚ ಸುದೀಪ್ ವಾಯ್ಸ್ ಕೊಟ್ಟು ಬೆನ್ನು ತಟ್ಟಿದ ಟೀಂ..!

ಅಂದಹಾಗೆ ಹುಲಿಕುಣಿತ ಕರಾವಳಿಯಲ್ಲಿ ಸರ್ವೇ ಸಾಮಾನ್ಯ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ರಿಗೂ ಈ ಕಲೆ ಅಂದ್ರೆ ಅಚ್ಚುಮೆಚ್ಚು. ಅವರ ಸಿನಿಮಾಗಳಲ್ಲಿ ಕೂಡ ಹುಲಿ ಕುಣಿತದ ಝಲಕ್‌‌‌ಗಳನ್ನ ಕಾಣಬಹುದು. ಅಷ್ಟೇ ಅಲ್ಲ, ಎಲ್ಲಾದ್ರೂ ವೇದಿಕೆಗಳಲ್ಲಿ ಯಾರಾದ್ರೂ ಕುಣಿಯುತ್ತಿದ್ರೆ ಇವರು ಕೂಡ ಹುಬ್ಬೇರಿಸೋ ರೇಂಜ್‌ಗೆ ಕುಣಿದು ಕುಪ್ಪಳಿಸಿಬಿಡ್ತಾರೆ.

ಒಳ್ಳೆಯ ಕಥೆ ಜೊತೆ ಹುಲಿ ವೇಷ ,ಕರಾವಳಿ ಭಾಗದ ಪ್ರೇಮಕಥೆ, ಆ್ಯಕ್ಷನ್, ಎಮೋಷನ್, ಸಂಬಂಧಗಳ ಬೆಲೆ ಇಲ್ಲಿ ಕಟ್ಟಿಕೊಡಲಾಗಿದೆ. ಕರಾವಳಿ ಭಾಗದಲ್ಲಿ ಮಾರ್ನಮಿ ಅಂದ್ರೆ ಮಂಗಳೂರಿನ ದಸಾರಾ. ಸಿನಿಮಾಗಾಗಿ ದಸರಾ ಸೆಟ್ ಹಾಕಿ, ಹಬ್ಬವನ್ನೇ ಮಾಡಿ, ಚಿತ್ರಿಸಿರೋದು ಮತ್ತೊಂದು ಹೈಲೈಟ್. ಶಿವಸೇನಾ ಕ್ಯಾಮೆಯಾ ಕೈಚಳಕ, ಅರ್ಜುನ್ ರಾಜ್ ಸ್ಟಂಟ್ಸ್, ವರದರಾಜ್ ಕಾಮತ್ ಕಲಾಕುಂಚ ಚಿತ್ರದಲ್ಲಿ ಮೆಚ್ಚುವಂತಿದೆ.

 

 

Exit mobile version