ಸಿಂಗೀತಂ ಶ್ರೀನಿವಾಸ್ ರಾವ್, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ. ಸೂಪರ್ ಹಿಟ್ ಚಿತ್ರ ಪುಷ್ಪಕ ವಿಮಾನದ ಸಾರಥಿ ಇವ್ರೇ. ಅಷ್ಟೇ ಅಲ್ಲ ತೆಲುಗು, ಕನ್ನಡ, ತಮಿಳು, ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಸಿಂಗೀತ ಶ್ರೀನಿವಾಸ್ ರಾವ್, ಒಂದಷ್ಟು ಗ್ಯಾಸ್ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಶ್ರೀನಿವಾಸ್ ಅವರು 94ನೇ ವಯಸ್ಸಿನಲ್ಲಿ ನಿರ್ದೇಶನದತ್ತ ಮುಖ ಮಾಡಿದ್ದು, ಅವರಿಗೆ ದಕ್ಷಿಣ ಭಾರತದ ಪ್ರಮುಖ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಸಾಥ್ ಕೊಟ್ಟಿದೆ. ಈ ಬ್ಯಾನರ್ ನಡಿ ಕಲ್ಕಿ ಡೈರೆಕ್ಟರ್ ನಾಗ್ ಅಶ್ವಿನ್ ಸಿನಿಮಾಗೆ ಹಣ ಹಾಕುತ್ತಿದ್ದಾರೆ.

ಸಿಂಗೀತಂ ಶ್ರೀನಿವಾಸ್ ರಾವ್ ಅವರ 61ನೇ ಸಿನಿಮಾ ಇದಾಗಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಈ ಕುರಿತು ವೈಜಯಂತಿ ಮೂವೀಸ್ ವಿಡಿಯೋ ಹಂಚಿಕೊಂಡಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡುತ್ತಿದ್ದಾರೆ.
ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಚಿತ್ರದ ಟೈಟಲ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ವೈಜಯಂತಿ ಮೂವೀಸ್ ಹೇಳಿಕೊಂಡಿದೆ. ಸಿಂಗೀತಂ ಶ್ರೀನಿವಾಸ್ ರಾವ್ ಮತ್ತೆ ನಿರ್ದೇಶನದ ಕುರ್ಚಿ ಅಲಂಕರಿಸುತ್ತಿದ್ದು, ಇಡೀ ಚಿತ್ರರಂಗ ಈ ಪ್ರಾಜೆಕ್ಟ್ ಗೆ ಕಾತರದಿಂದ ಕಾಯುತ್ತಿದೆ.





