ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿತ್ತು. ಬೆಂಗಳೂರಿನ 64ನೇ ಅಧಿವೇಶನ ನ್ಯಾಯಾಲಯದಲ್ಲಿ 17 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ ನಿಗದಿಯಾಗಿತ್ತು. ಆದರೆ, ಕೋರ್ಟ್ ಹಾಲ್ನಲ್ಲಿ ವಕೀಲರ ದಟ್ಟಣೆಯಿಂದಾಗಿ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನಡೆಸಲಾಯಿತು. ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಹಾಜರಿದ್ದರು. ಆದರೆ, ದೋಷಾರೋಪಣೆ ಓದಿ ಮುಗಿಸಿದ ನಂತರ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.
ಕೋರ್ಟ್ನಲ್ಲಿ ನಡೆದದ್ದೇನು?
- ಸಮಯ: ಮೊದಲು ಬೆಳಗ್ಗೆ 10 ಗಂಟೆಗೆ ವಿಚಾರಣೆ ನಿಗದಿಯಾಗಿತ್ತು. ನಂತರ ಮಧ್ಯಾಹ್ನ 4 ಗಂಟೆಗೆ ಮುಂದೂಡಲಾಯಿತು.
- ಹಾಜರಾತಿ: ದರ್ಶನ್ ಅವರು ಹಣೆಗೆ ಕುಂಕುಮ ಇಟ್ಟುಕೊಂಡು ಕೋರ್ಟ್ಗೆ ಆಗಮಿಸಿದ್ದರು. ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿಗಳನ್ನು ಪೊಲೀಸ್ ಬಂದೋಬಸ್ತ್ ನಡುವೆ ಕರೆತರಲಾಯಿತು.
- ಗೊಂದಲ: ಕೋರ್ಟ್ ಹಾಲ್ ಕಿಕ್ಕಿರಿದು ತುಂಬಿದ್ದರಿಂದ ನ್ಯಾಯಾಧೀಶರು ವಕೀಲರನ್ನು ಹೊರಗೆ ಕಳುಹಿಸಿದರು. ಆ ನಂತರ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲಾಯಿತು.
- ದೋಷಾರೋಪಣೆ:
ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು ದರ್ಶನ್ ಮತ್ತು ಪವಿತ್ರಾ ಗೌಡ ಅವರ ಮೇಲಿನ ಆರೋಪಗಳನ್ನು ಓದಿ ಹೇಳಿದರು. ಆದರೆ, ಪೂರ್ಣ ಚರ್ಚೆಗೆ ಸಮಯ ಬೇಕೆಂದು ವಾದಿಸಲಾಯಿತು.
- ತೀರ್ಪು: ಆರೋಪಿಗಳನ್ನು 6-6 ಜನರ ಗುಂಪಾಗಿ ನಿಲ್ಲಿಸಿ ವಿಚಾರಣೆ ನಡೆಸಿದ ನಂತರ, ನವೆಂಬರ್ 10ಕ್ಕೆ ಮುಂದೂಡಿಕೆ ಘೋಷಿಸಲಾಯಿತು.
- ದರ್ಶನ್ ಪ್ರತಿಕ್ರಿಯೆ: “ಚಾರ್ಜ್ಶೀಟ್ನಲ್ಲಿ ಇರುವುದೆಲ್ಲಾ ಸುಳ್ಳು. ನಾವೇನು ತಪ್ಪು ಮಾಡಿಲ್ಲ. ನಾವು ಕೊಲೆಗಡುಕರಲ್ಲ” ಎಂದು ದರ್ಶನ್ ಆಕ್ರೋಶದಿಂದ ಹೇಳಿದರು.
- ಪವಿತ್ರಾ ಗೌಡ: ಅದೇ ರೀತಿ “ಅದೆಲ್ಲಾ ಸುಳ್ಳು” ಎಂದು ಪುನರಾವರ್ತಿಸಿದರು.
- ಮನವಿ: “ನಮಗೆ ಹೆಚ್ಚಿನ ಕಾಲಾವಕಾಶ ಕೊಡಿ, ಪೂರ್ಣ ವಾದ ಮಂಡಿಸಲು ಸಮಯ ಬೇಕು” ಎಂದು ಆರೋಪಿಗಳು ವಕೀಲರಲ್ಲಿ ಕೋರಿದರು.
- ಕೋರ್ಟ್ ತೀರ್ಪು: ದೋಷಾರೋಪಣೆ ಓದಿ ಮುಗಿಸಿದ ನಂತರ ನವೆಂಬರ್ 10ಕ್ಕೆ ಮುಂದೂಡಿಕೆ. ಆ ದಿನ ಟ್ರಯಲ್ ಆರಂಭದ ದಿನಾಂಕ ನಿಗದಿಯಾಗಬಹುದು.
ನವೆಂಬರ್ 10 ರಂದು ದೋಷಾರೋಪಣೆ ಅಂತಿಮಗೊಂಡರೆ, ಸಾಕ್ಷಿಗಳ ವಿಚಾರಣೆ ಆರಂಭ. ಆರೋಪಿಗಳು ದೋಷವನ್ನು ನಿರಾಕರಿಸಿದ್ದರಿಂದ ಪೂರ್ಣ ಟ್ರಯಲ್ ಆರಂಭವಾಗಲಿದೆ.
ಕೋರ್ಟ್ನಲ್ಲಿ ಹಿಂದೆ ಮುಂದೆ ನಿಂತಿದ್ದ ದರ್ಶನ್ ಪವಿತ್ರಾ..!
2 ತಿಂಗಳ ಬಳಿಕ ಮುಖಾಮುಖಿಯಾಗಿ ಮಾತಾನಾಡಿದ ಸುಬ್ಬ-ಸುಬ್ಬಿ. ಕೋರ್ಟ್ ಹಾಲ್ನಲ್ಲಿ ಪವಿತ್ರಾ ಗೌಡ ಮುಂದೆ ನಿಂತಿದ್ದರೆ, ದರ್ಶನ್ ಹಿಂದೆ ನಿಂತಿದ್ದರು. ಆಗ ಮುಂದೆ ಬಾ ಹಿಂದೆ ಯಾಕೆ ನಿಂತಿದಿಯಾ ಎಂದು ಪವಿತ್ರಾ ಗೌಡ ಹೇಳಿದರು. ಆಯ್ತು ಬರ್ತೀನಿ ಎಂದು ಮುಂದೆ ಬಂದ ದರ್ಶನ್. ಜೈಲಿನಿಂದ ಬರಬೇಕಾದ್ರೆ ಬೇರೆ ಬೇರೆ ವಾಹನದಲ್ಲಿ ಬಂದಿದ್ದ ದರ್ಶನ್-ಪವಿತ್ರಾ ಗೌಡ. ಜೈಲಿನಲ್ಲಿ ಇಬ್ಬರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ.
